ಮಾರಸಂದ್ರ ಗ್ರಾ.ಪಂ ನಾಲ್ವರು ಸದಸ್ಯರುನ್ನು ಅಮಾನತ್ತುಗೊಳಿಸಿದ ಸಿವಿಲ್ ನ್ಯಾಯಾಲಯ

ಬೆಂಗಳೂರು ಜ 28 : ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಸಂದ್ರ ಗ್ರಾಮದ  ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ನಾಲ್ವರು ಸದಸ್ಯರನ್ನು  ಅಕ್ರಮ ಮತದಾನದ ಶಂಕೆಯಿಂದ ಜಿಲ್ಲಾ ಸಿವಿಲ್ ನ್ಯಾಯಾಲಯ ಮುಂದಿನ ವಿಚಾರಣೆ ನಡೆಯುವ ತನಕ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಮಾರಸಂದ್ರ ಗ್ರಾ.ಪಂ ನ  ಎರಡು ವಾರ್ಡ್‍ಗಳಿಂದ ಗೆದ್ದಿದ್ದ  ಕೆ.ಆರ್.ತಿಮ್ಮಗೌಡ, ಪದ್ಮ ಕೃಷ್ಣಪ್ಪ, ಭಾಗ್ಯಮ್ಮ ಈಶ್ವರಾಚಾರ್ಯ, ಮುನಿಲಕ್ಷಮ್ಮ ಪರಶುರಾಮ್ ಅಮಾನತುಗೊಂಡ ಅಭ್ಯರ್ಥಿಗಳಾಗಿದ್ದಾರೆ.

                       ಇದನ್ನೂ ಓದಿ : ಗ್ರಾ.ಪಂ ಚುನಾವಣೆಯಲ್ಲಿ ಗೆದ್ದ ಹೋರಾಟಗಾರರು

ಘಟನೆಯ ಹಿನ್ನಲೆ : ಪಂಚಾಯತ ಚುನಾವಣೆಗೆ ಮತದಾನ ನಡೆಯುವ ಸಂದರ್ಭದಲ್ಲಿ ‘ಮತದಾರರ ಪಟ್ಟಿಯಲ್ಲಿ ಮತದಾರರ ಭಾವಚಿತ್ರಗಳು ಇರಲಿಲ್ಲ. ಇದನ್ನು ಬೂತ್ ಏಜೆಂಟ್ ಗಮನಿಸಿ ಚುನಾವಣೆ ಅಧಿಕಾರಿಗಳ ಗಮನಕ್ಕೆ ತಂದರು. ಆದರೆ, ಅಧಿಕಾರಿಗಳು ಯಲಹಂಕ ತಹಶೀಲ್ದಾರ್ ನರಸಿಂಹಮೂರ್ತಿ ಅವರೇ ಈ ಪಟ್ಟಿಯನ್ನು ನೀಡಿದ್ದಾರೆ ಎಂದು ಹೇಳಿ ಭಾವಚಿತ್ರಗಳು ಇಲ್ಲದ ಸುಮಾರು 237 ಜನರಿಗೆ ಮತದಾನ ಮಾಡಲು ಅವಕಾಶವನ್ನು ನೀಡಿದರು. ಇದು ಅಕ್ರಮ ಮತದಾನ. ಹಾಗಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು’ ಎಂದು ದೂರುದಾರರಾದ  ಸ್ವಾತಿ ಮತ್ತು ಗ್ರಾಮದ ಕೆಲ ಮುಖಂಡರು ತಿಳಿಸಿದ್ದಾರೆ.

ಬಿಜೆಪಿ ಚಿಹ್ನೆ ಬಳಕೆ : ‘ಗ್ರಾಮ ಪಂಚಾಯಿತಿ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳ ಚಿಹ್ನೆ ಮತ್ತು ಶಾಸಕರ ಭಾವಚಿತ್ರ ಉಪಯೋಗಿಸಕೂಡದು ಎಂದು ರಾಜ್ಯ ಚುನಾವಣಾ ಆಯೋಗ ಸುತ್ತೋಲೆಯನ್ನು ಹೊರಡಿಸಿತ್ತು. ಆದರೆ, ನಾಲ್ವರು ಅಭ್ಯರ್ಥಿಗಳು ಬಿಜೆಪಿಯ ಚಿಹ್ನೆ ಬಳಸಿದ್ದಾರೆ. ಅಲ್ಲದೇ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಭಾವಚಿತ್ರವನ್ನು ತಮ್ಮ ಕರಪತ್ರಗಳಲ್ಲಿ ಮುದ್ರಿಸಿದ್ದಾರೆ. ಇದು ಚುನಾವಣೆ ನೀತಿಸಂಹಿತೆಯ ಉಲ್ಲಂಘನೆ. ಹಾಗಾಗಿ ಇವರ ವಿರುದ್ದ ಮೊಕದ್ದಮೆ ಹೂಡಿದೆ’ ಎಂಬುದು ದೂರುದಾರರ ವಾದವಾಗಿದೆ.

              ಇದನ್ನೂ ಓದಿ : ಗ್ರಾ.ಪಂ ಚುನಾವಣೆ: ಪಕ್ಷದ ಹೆಸರು ಬಳಕೆಗೆ ಆಯೋಗ ಆಕ್ಷೇಪ

‘ಗ್ರಾಮದಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯ ಒಂದರಲ್ಲಿ 730 ಮತದಾರರಿದ್ದಾರೆ. ಅವರಲ್ಲಿ ಕೆಲವರು ಕೊರೊನಾ ಸಮಯದಲ್ಲಿ ತಮ್ಮ ಸ್ವಂತ ಗ್ರಾಮಗಳಿಗೆ ತೆರಳಿದ್ದಾರೆ. ಶೇಕಡ 30ರಷ್ಟು ಮತದಾರರು ಇಲ್ಲ. ಆದರೆ ಅದುಹೇಗೆ ಅಷ್ಟೊಂದು ಮತಗಳನ್ನು ಅಭ್ಯರ್ಥಿಗಳು ಪಡೆಯಲು ಸಾಧ್ಯವಾಯಿತು. ಈ ಬಗ್ಗೆ ತನಿಖೆ ನಡೆಸಿ ನೈಜ ಸಂಗತಿಯನ್ನು ತಿಳಿಸಬೇಕು  ಎಂದು ಸ್ವಾತಿ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *