ಕನಕಗಿರಿ: ಇಲ್ಲಿನ ಪೊಲೀಸ್ ಠಾಣೆಗೆ ಮಗಳು ಕಾಣೆಯಾಗಿದ್ದಾಳೆ ಹುಡುಕಿಕೊಡಿ ಎಂದು ದೂರು ನೀಡಲು ಬಂದಿದ್ದವರಿಗೆ ಮುಖ್ಯ ಪೇದೆಯೊಬ್ಬ ಮೂರು ಬಂಡಲ್ ಎ-4 ಸೈಜ್ ಪೇಪರ್ಬಂಡಲ್ ತರುವಂತೆ ಬೇಡಿಕೆ ಇಟ್ಟಿರುವುದಾಗಿ ತಿಳಿದುಬಂದಿದೆ.
ಈ ಬೇಡಿಕೆ ಇಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದೂ, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಇನಾಂವೀರಾಪುರ ಮಾನ್ಯ ಹತ್ಯೆ ಪ್ರಕರಣದಲ್ಲಿ ಗಾಯಗೊಂಡಿದ್ದ ವಿವೇಕಾನಂದ ದೊಡ್ಡಮನಿ ಕುಟುಂಬಕ್ಕೆ ₹5 ಲಕ್ಷ ಚೆಕ್ ವಿತರಿಸಿದ ಡಿಸಿ
2 ತಿಂಗಳ ಹಿಂದೆ ಸಮೀಪದ ಅರಳಹಳ್ಳಿ ಗ್ರಾಮದ ಮಗಳು ಕಾಣೆಯಾದ ಕುರಿತು ಸ್ಥಳೀಯ ಠಾಣೆಗೆ ತಂದೆ ದೂರು ನೀಡಲು ಬಂದಿದ್ದರು. ಪೇಪರ್ ತಂದು ಕೊಟ್ಟ ಅನಂತರ ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು | ಚಿನ್ನಯ್ಯನಿಗೆ ಜಾಮೀನು! ಸತ್ಯ ಹೇಳಿದ್ದನಾ ಚಿನ್ನಯ್ಯ? Janashakthi Media
