ದೇವು ಪತ್ತಾರ್‌-ವಿದ್ಯಾರಶ್ಮಿಗೆ ಅವರಿಗೆ 2021ನೇ ಸಾಲಿನ ವಿ.ಕೃ.ಗೋಕಾಕ್‌ ಫೇಲೋಶಿಫ್‌

ಬೆಂಗಳೂರು: ವಿನಾಯಕ ಗೋಕಾಕ್‌ ವಾಙ್ಮಯ ಟ್ರಸ್ಟ್‌ ವತಿಯಿಂದ ನೀಡಲಾಗುವ ಪ್ರತಿಶಿಷ್ಠ 2021ನೇ ಸಾಲಿನ ವಿ.ಕೃ.ಗೋಕಾಕ್‌ ಫೇಲೋಶಿಪ್‌ ಅನ್ನು ದೇವು ಪತ್ತಾರ್‌ ಮತ್ತು ವಿದ್ಯಾರಶ್ಮಿ ಅವರಿಗೆ ನೀಡಲಾಗುತ್ತಿದೆ.

ʻಗೋಕಾಕರ ಮುನ್ನಡಿಗಳ ಅಧ್ಯಯನʼಕ್ಕಾಗಿ ದೇವು ಪತ್ತಾರ್‌ ಮತ್ತು ʻಗೋಕಾಕರನ್ನು ಕುರಿತ ಕವಿತೆಗಳ ಅಧ್ಯಯನʼಕ್ಕಾಗಿ ವಿದ್ಯಾರಶ್ಮಿ ಪೆಲತ್ತಡ್ಕ ಅವರಿಗೆ ಫೆಲೋಶಿಫ್‌ ಸಂದಿದೆ. ಪ್ರಶಸ್ತಿಯು ರೂ.10,000 ನಗದು ಮತ್ತು ಫಲಕವನ್ನು ಒಳಗೊಂಡಿದೆ.

2021ನೇ ಫೆಲೋಶಿಫ್‌ಗೆ ಆಯ್ಕೆಗಾಗಿ ಟ್ರಸ್ಟ್‌ನ ಅಧ್ಯಕ್ಷ ವೈ.ಎನ್‌.ಗಂಗಾಧರ ಶೆಟ್ಟಿ, ಕಾರ್ಯದರ್ಶಿ ಅನಿಲ್‌ ಗೋಕಾಕ್‌, ಸಹಕಾರಿ ಧುರೀಣ ಬಿ.ಎಸ್‌.ವಿಶ್ವನಾಥ್‌, ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಅಭಿನವ ರವಿಕುಮಾರ್‌ ಅವರನ್ನೊಳಗೊಂಡ ಸಮಿತಿ ಸದಸ್ಯರು ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *