2 ಸಾವಿರ ಇಂಡಿಗೋ ವಿಮಾನಗಳು ರದ್ದು; 3 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಪರೆದಾಟ

ನವದೆಹಲಿ: ಡಿಸೆಂಬರ್‌ 6ರಂದೂ ಕೂಡ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಸಾಮಾನ್ಯ ಸ್ಥಿತಿಗೆ ಮರಳಲಿಲ್ಲ. ಕಳೆದ ನಾಲ್ಕು ದಿನಗಳಿಂದ 2 ಸಾವಿರಕ್ಕೂ ಹೆಚ್ಚು ಇಂಡಿಗೋ ಫ್ಲೈಟ್ ಹಾರಾಟ ರದ್ದಾಗಿದೆ. ವಿಮಾನ ಸಂಸ್ಥೆ ಬಿಕ್ಕಟ್ಟು ಐದನೇ ದಿನವೂ ಮುಂದುವರೆದಿದ್ದೂ, ಇಂಡಿಗೋ ಫ್ಲೈಟ್ ನಂಬಿ ನಿಲ್ದಾಣಕ್ಕೆ ಬಂದಿದ್ದ 300,000 ಕ್ಕೂ ಹೆಚ್ಚು ಪ್ರಯಾಣಿಕರ ಪ್ಲಾನ್ ತಲೆಕೆಳಗಾಗಿದೆ. ಇಂಡಿಗೋ 

ವಿಮಾನ ನಿಲ್ದಾಣದಲ್ಲಿಯೇ ಅನೇಕ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಿಮಾನ ನಿಲ್ದಾಣದಲ್ಲಿ ಮಾತ್ರವಲ್ಲ ವಿಮಾನದಲ್ಲೂ ಎರಡು – ಮೂರು ಗಂಟೆ ಪ್ರಯಾಣಿಕರು ಕಾಯುವ ಸ್ಥಿತಿ ಬಂದಿದೆ. ಬೆಳಿಗ್ಗೆ 11 ಗಂಟೆಗೆ ವಿಮಾನ ಏರಿದ್ದ ಪ್ರಯಾಣಿಕರು ಸಂಜೆ 5 ಗಂಟೆಯವರೆಗೆ ವಿಮಾನದಲ್ಲಿ ಕುಳಿತಿದ್ದಾರೆ. ಆದ್ರೆ ವಿಮಾನ ಹಾರಾಟ ನಡೆಸಲಿಲ್ಲ. ಸಿಬ್ಬಂದಿಯಿಂದ ಸರಿಯಾದ ರೆಸ್ಪಾನ್ಸ್ ಪ್ರಯಾಣಿಕರಿಗೆ ಸಿಗಲಿಲ್ಲ. ವಿಮಾನ ನಿಲ್ದಾಣ ಹಾಗೂ ವಿಮಾನದಲ್ಲಿ ಕುಡಿಯೋ ನೀರಿನಿಂದ ಹಿಡಿದು ಆಹಾರದವರೆಗೆ ಯಾವುದೇ ವ್ಯವಸ್ಥೆ ಇರಲಿಲ್ಲ ಅಂತ ಪ್ರಯಾಣಿಕರು ತಮ್ಮ ನೋವು ತೋಡಿಕೊಂಡಿದ್ದಾರೆ.

ಪಾಟ್ನಾದಲ್ಲಿರುವ ಪತಿಗೆ ಅಪಘಾತವಾಗಿತ್ತು. ಬೇಗ ತಲುಪಬಹುದು ಎನ್ನುವ ಕಾರಣಕ್ಕೆ ಪತ್ನಿ ವಿಮಾನ ಪ್ರಯಾಣದ ಪ್ಲಾನ್ ಮಾಡಿದ್ಲು. ಆದ್ರೆ ಎಲ್ಲವೂ ಭಸ್ಮವಾಯ್ತು. ಗಂಡ ಕೊನೆ ಉಸಿರೆಳೆಯುತ್ತಿದ್ದರೆ, ಪತ್ನಿ ನಿಲ್ದಾಣದಲ್ಲಿ ವಿಮಾನಕ್ಕಾಗಿ ಕಾಯ್ತಿದ್ದರು. ಬೋರ್ಡಿಂಗ್ ಗೇಟ್ನಲ್ಲಿ ಅವರ ಫೋನ್ ರಿಂಗಾದಾಗ ಅವರ ಕಿರುಚಾಟ ಇಡೀ ವಿಮಾನ ನಿಲ್ದಾಣವನ್ನು ಸ್ಥಬ್ತಗೊಳಿಸಿತ್ತು.

ಇದನ್ನೂ ಓದಿ: ಡಿ.8; ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಜನತೆಯ ನಡಿಗೆ ಉತ್ತಮ ಬದುಕಿನ ಕಡೆಗೆ – ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆ

12 ವರ್ಷದ ಬಾಲಕಿಗೆ ಮೊದಲ ಬಾರಿ ಪಿರಿಯಡ್ ಕಾಣಿಸಿಕೊಂಡಿತ್ತು. ಬ್ಲೀಡಿಂಗ್ ಆಗ್ತಿದೆ. ಪ್ಯಾಡ್ ಗಾಗಿ ಅಸಹಾಯಕ ತಂದೆ ವಿಮಾನ ನಿಲ್ದಾಣ ಸುತ್ತಿದ್ದಾರೆ. ನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್ ಇಲ್ಲ, ಪ್ರತಿಕ್ರಿಯೆ ನೀಡಲು ಸಿಬ್ಬಂದಿ ಇಲ್ಲ. ಬಾಲಕಿ ನೋವಿನಿಂದ ಅಳ್ತಿದ್ರೆ ತಂದೆ ಕೈಚೆಲ್ಲಿ ಕುಳಿತಿದ್ದರು. ಈ ವಿಷ್ಯ ತಿಳಿದ ನೆಟ್ಟಿಗರು, ವಿಮಾನ ನಿಲ್ದಾಣದ ಮೆಡಿಕಲ್ ಶಾಪ್ ಹಾಗೂ ಟಾಯ್ಲೆಟ್ ನಲ್ಲಿ ಪ್ಯಾಡ್ ಲಭ್ಯವಿರುತ್ತೆ ಅಂತ ಸಲಹೆ ನೀಡಿದ್ದಾರೆ. ಆದ್ರೆ ಎಲ್ಲ ವಿಮಾನ ನಿಲ್ದಾಣದ ಟಾಯ್ಲೆಟ್ ನಲ್ಲಿ ಪ್ಯಾಡ್ ಇರೋದಿಲ್ಲ, ಭಾರತದ ಅನೇಕ ನಿಲ್ದಾಣಗಳಲ್ಲಿ ಪ್ಯಾಡ್ ಸಿಗೋದಿಲ್ಲ.

ವಿಮಾನ ಹಾರಾಟದಲ್ಲಿ ವಿಳಂಬ ಹಾಗೂ ರದ್ದಾದ ಕಾರಣ ತಂದೆಗೆ ಸರಿಯಾದ ಸಮಯಕ್ಕೆ ಮಗನ ಬಳಿ ಬರಲಾಗಲಿಲ್ಲ. ತಂದೆ ಬರುವಷ್ಟರಲ್ಲಿ ಮಗನನ್ನು ಐಸಿಯುಗೆ ಶಿಫ್ಟ್ ಮಾಡಿಯಾಗಿತ್ತು. ನಾನು ತುಂಬಾ ತಡವಾಗಿ ಬಂದೆ ಎನ್ನುವ ಮಾತು ಬಿಟ್ರೆ ಮತ್ತೇನೂ ಉಳಿದಿರಲಿಲ್ಲ ಎಂದು ತಂದೆಯೊಬ್ಬರು ತಮ್ಮ ನೋವು ತೋಡಿಕೊಂಡಿದ್ದಾರೆ.

17 ವರ್ಷದ ಹುಡುಗಿಯೊಬ್ಬಳು ಪ್ರವೇಶ ಪರೀಕ್ಷೆಗಾಗಿ ವಿಮಾನ ಬುಕ್ ಮಾಡಿದ್ಲು. ವರ್ಷದಿಂದ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಆದ್ರೆ ಎಲ್ಲ ಶ್ರಮ ವ್ಯರ್ಥವಾಯ್ತು. ಮೂರು ವಿಮಾನಗಳು ರದ್ದಾದ ಕಾರಣ ಪರೀಕ್ಷೆ ಬರೆಯುವ ಕನಸು ನನಸಾಗಲಿಲ್ಲ. ಪರೀಕ್ಷೆ ಮುಗಿಯುವವರೆಗೂ ಅವಳು ವಿಮಾನ ನಿಲ್ದಾಣದಲ್ಲೇ ಕುಳಿತಿದ್ದಳು. ನೋವಿನಲ್ಲಿ ಇಷ್ಟುದಿನ ರಾತ್ರಿ – ಹಗಲು ಎನ್ನದೆ ಓದಿದ್ದ ಎಜ್ಯುಕೇಷನ್ ಅಪ್ಲಿಕೇಶನ್ಗಳನ್ನು ಡಿಲಿಟ್ ಮಾಡಿದ್ಲು. ಮೂರು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಒಂದಲ್ಲ ಒಂದು ಮಹತ್ವದ ಉದ್ದೇಶಕ್ಕೆ ಪ್ರಯಾಣ ಬೆಳೆಸಿರ್ತಾರೆ. ಎಲ್ಲರ ಕೆಲ್ಸಕ್ಕೂ ಅಡ್ಡಿಯಾಗಿದೆ. ಅದೆಷ್ಟೋ ಮಂದಿ ಮೌನವಾಗಿ ಕಣ್ಣೀರಿಡ್ತಿದ್ದಾರೆ.

ಇದನ್ನೂ ನೋಡಿ: ಬೆಂಗಳೂರು | ಟನಲ್‌ ಟ್ರಬಲ್‌ !!? ಕಾತ್ಯಾಯಿನಿ ಚಾಮರಾಜ್ ಜೊತೆ ಕೆ.ಎಸ್. ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *