ಉಗಾಂಡದಲ್ಲಿ ಕಸ ಬಿದ್ದು 18 ಮಂದಿ ದುರ್ಮರಣ

ಭಾರೀ ಮಳೆಯಿಂದಾಗಿ ಕಸದ ರಾಶಿ ಮೈಮೇಲೆ ಬಿದ್ದು ಮಕ್ಕಳು ಸೇರಿದಂತೆ 18 ಮಂದಿ ಮೃತಪಟ್ಟ ಘಟನೆ ಉಗಾಂಡದಲ್ಲಿ ಸಂಭವಿಸಿದೆ.

ಉಗಾಂಡ ರಾಜಧಾನಿ ಕಾಂಪಾಲದಲ್ಲಿ ಕಿಟಿಜಿ ಬಳಿ ಕಸದ ರಾಶಿ ಭಾರೀ ಮಳೆಯಿಂದ ಕುಸಿದುಬಿದ್ದಿದೆ. ಕನಿಷ್ಠ ಇಬ್ಬರು ಮಕ್ಕಳು ಸೇರಿದಂತೆ 18 ಮಂದಿ ಮೃತಪಟ್ಟಿದ್ದು, 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕಸದ ರಾಶಿ ಹಾಕುವ ಜಾಗದಲ್ಲಿ ಈ ದುರ್ಘಟನೆ ನಡೆದಿದ್ದು, ಘಟನೆಯ ವಿವರಗಳು ಲಭಿಸದೇ ಇದ್ದರೂ ಭಾರೀ ಮಳೆಯಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಕಸದ ರಾಶಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮುಂತಾದ ವಸ್ತುಗಳನ್ನು ಆಯ್ದುಕೊಳ್ಳಲು ಜನರು ಬರುತ್ತಾರೆ. ಇದನ್ನೇ ಉದ್ಯೋಗ ಮಾಡಿಕೊಂಡ ಕೆಲವರು ಸಮೀಪದಲ್ಲಿಯೇ ಮನೆ ಕಟ್ಟಿಕೊಂಡಿದ್ದಾರೆ. ಇದಕ್ಕೆಲ್ಲಾ ಅವಕಾಶ ನೀಡಿದ್ದು ಕೂಡ ಅಧಿಕಾರಿಗಳ ಲೋಪವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *