ಹೆದ್ದಾರಿ ಕಾಮಗಾರಿ ವೇಳೆ ಕ್ರೇನ್‌ ಕುಸಿದು ಸ್ಥಳದಲ್ಲೇ 16 ಜನರ ಸಾವು

ಮುಂಬೈ: ಇಂದು ಮುಂಜಾನೆ ಥಾಣೆ ಜಿಲ್ಲೆಯ ಶಹಾಪುರ ತಹಸಿಲ್‌ನ ಸರ್ಲಾಂಬೆ ಗ್ರಾಮದ ಬಳಿ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಮೂರನೇ ಹಂತದ ನಿರ್ಮಾಣ ಕಾಮಗಾರಿ ವೇಳೆ ಕ್ರೇನ್‌ ಕುಸಿದು 16 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ.ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಾರ್ಗವನ್ನು ಹಿಂದೂ ಹೃದಯ ಸಾಮ್ರಾಟ್‌ ಬಾಬಾ ಸಾಹೇಬ್‌ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ ಎಂದು ಹೆಸರಿಸಲಾಗಿದ್ದು,ಮಾರ್ಗದ ಮೂರನೇ ಮತ್ತು ಕೊನೆಯ ಹಂತದ ಕಾಮಗಾರಿಯನ್ನು ಈ ವರ್ಷದ ಕೊನೆಯಲ್ಲಿ ಮುಗಿಸಲು ಸರ್ಕಾರ ನಿರ್ಧರಿಸಿತ್ತು. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಈ ಮಾರ್ಗದ ನಿರ್ಮಾಣ ಜವಾಜ್ದಾರಿಯನ್ನು ವಹಿಸಿಕೊಂಡಿದೆ.

ಇದನ್ನೂ ಓದಿ:ಚಲಿಸುತ್ತಿರುವ ರೈಲಿನಲ್ಲಿ ಗುಂಡಿನ ದಾಳಿ 4 ಜನರ ಸಾವು

ಮುಂಬೈ-ನಾಗ್ಪುರ ಸಂಪರ್ಕಿಸುವ 701 ಕಿಮೀ ಉದ್ದದ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ನಾಗ್ಪುರ, ವಾಶಿಮ್‌, ವಾರ್ಧಾ, ಅಹ್ಮದ್‌ನಗರ, ಬುಲ್ಧಾನ, ಔರಂಗಾಬಾದ್‌, ಅಮರಾವತಿ ಜಲ್ನಾ,ನಾಸಿಕ್‌ ಮತ್ತು ಥಾಣೆ ಸೇರಿದಂತೆ ಹತ್ತು ಜಿಲ್ಲೆಗಳನ್ನು ಹಾದು ಹೋಗುತ್ತದೆ.

Donate Janashakthi Media

Leave a Reply

Your email address will not be published. Required fields are marked *