ಅಭಿವೃದ್ಧಿ ತೆರಿಗೆ ರದ್ಧುಗೊಳಿಸಿ ಏಕರೂಪದ ಕನಿಷ್ಠ ದರ ನಿಗದಿಪಡಿಸಿ: ಎಸ್‌.ಆರ್‌.ವಿಶ್ವನಾಥ್‌ ಬಿಡಿಎಗೆ ಒತ್ತಾಯ

ಯಲಹಂಕ: ಡಾ. ಕೆ.ಶಿವರಾಮ ಕಾರಂತ ಬಡಾವಣೆಯ ಮನೆಗಳಿಗೆ ಅವೈಜ್ಞಾನಿಕವಾಗಿ ವಿಧಿಸಿರುವ ಪುರೋಭಿವೃದ್ಧಿ ತೆರಿಗೆ (ಅಭಿವೃದ್ಧಿ ತೆರಿಗೆ) ಯನ್ನು ರದ್ಧುಗೊಳಿಸಿ, ಎಲ್ಲ ಗ್ರಾಮಗಳಿಗೂ ಏಕರೂಪದ ಕನಿಷ್ಠ ದರ ನಿಗದಿಪಡಿಸಬೇಕು ಎಂದು ಅರಿವು ಮೂಡಿಸುವ ಸಭೆಯಲ್ಲಿ ಮಾತನಾಡಿದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವನ್ನು ಒತ್ತಾಯಿಸಿದರು. ಅಭಿವೃದ್ಧಿ

ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಗೆ ಒಳಪಡುವ 17 ಹಳ್ಳಿಗಳ ಗ್ರಾಮಸ್ಥರ ವತಿಯಿಂದ ರಾಮಗೊಂಡನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಅರಿವು ಮೂಡಿಸುವ ಸಭೆಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿ ಚಂದ್ರಶೇಖರ್‌ ಸಮಿತಿಯಿಂದ (ಜೆಸಿಸಿ) ದೃಢೀಕರಣ ಪತ್ರ ನೀಡಿರುವ ಮನೆಗಳಿಗೆ ಅವೈಜ್ಞಾನಿಕವಾಗಿ ತೆರಿಗೆ ವಿಧಿಸಲಾಗಿದೆ. ಬಡಾವಣೆಯಲ್ಲಿ ಈ ಹಿಂದೆಯೇ ನಿವೇಶನ ಖರೀದಿಸಿ, ನಿರ್ಮಿಸಿಕೊಂಡಿರುವ ಮನೆಗಳನ್ನು ತೆರವುಗೊಳಿಸದಂತೆ ಕ್ರಮವಹಿಸಲಾಗಿದೆ. ಆದರೆ, ಬಡಾವಣೆ ವ್ಯಾಪ್ತಿಯ 17 ಗ್ರಾಮಗಳಲ್ಲಿ ಪುರೋಭಿವೃದ್ಧಿ ಶುಲ್ಕ ನಿಗದಿ ವಿಷಯದಲ್ಲಿ ಬಿಡಿಎ ಸರಿಯಾದ ಮಾನದಂಡ ಅನುಸರಿಸಿಲ್ಲ ಎಂದು ದೂರಿದರು.

ಇದನ್ನೂ ಓದಿ: ಹುಣಸೂರು |ಅತಿಥಿ ಉಪನ್ಯಾಸಕರ ನೇಮಕಾತಿ ಹಾಗೂ ಪರೀಕ್ಷಾ ಶುಲ್ಕ ಪಾವತಿ ದಿನಾಂಕ ಮತ್ತು ಪರೀಕ್ಷೆ ಮೂಂದುಡುವಂತೆ ಎಸ್‌ ಫ್‌ ಐ ಪ್ರತಿಭಟನೆ

ಒಂದೊಂದು ಗ್ರಾಮಗಳಿಗೆ ಒಂದೊಂದು ರೀತಿಯಲ್ಲಿ ತೆರಿಗೆ ವಿಧಿಸಿರುವುದು ಸ್ಥಳೀಯ ಗ್ರಾಮಸ್ಥರ ಆಕ್ಷೇಪ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಮೊದಲೇ ತಮ್ಮ ಜಮೀನುಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ದಿಸೆಯಲ್ಲಿ ಎಲ್ಲಾ ಗ್ರಾಮಗಳಿಗೂ ಏಕರೂಪದ ಮತ್ತು ಕಡಿಮೆ ತೆರಿಗೆಯನ್ನು ವಿಧಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.  ಈ ಕುರಿತು  ಬಿಡಿಎ ಆಯುಕ್ತರ ಬಳಿ ಮಾತನಾಡಿ, ಸ್ಥಳೀಯರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದ್ದೇನೆ ಎಂದರು.

ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿರುವ ಸಂತ್ರಸ್ತ ರೈತರಿಗೆ ಪರಿಹಾರವಾಗಿ ಶೇಕಡ 40 ನಿವೇಶನಕ್ಕೆ ರೈತರು ಒಪ್ಪಿಕೊಂಡಿದ್ದಾರೆ. ತಮ್ಮ ಸ್ವಂತ ಜಮೀನಿನಲ್ಲೇ ನಿವೇಶನ ನೀಡಬೇಕು, ಸಾಧ್ಯವಾಗದಿದ್ದರೆ ಪಕ್ಕದ ಅಥವಾ ಅದೇ ಗ್ರಾಮಕ್ಕೆ ಒಳಪಡುವ ಪ್ರದೇಶದಲ್ಲಿ ನಿವೇಶನ ನೀಡಬೇಕೆಂಬುದು ರೈತರ ಬೇಡಿಕೆಯಾಗಿದೆ.  ಅಧಿಕಾರಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ರೈತ ಮುಖಂಡರಾದ ರಾಮಗೊಂಡನಹಳ್ಳಿ ರಮೇಶ್‌, ಮುನಿರಾಜು, ಬಸವರಾಜ ಪಾದಯಾತ್ರಿ, ಎಚ್‌.ಸುರೇಶ್‌, ಪ್ರಭಾಕರ್‌, ಕೆ.ಪ್ರಕಾಶ್‌, ಗ್ರಾಮಪಂಚಾಯಿತಿ ಸದಸ್ಯರಾದ ನಾಗರಾಜ್‌.ಎನ್‌, ಆಂಜಿನಮ್ಮ, ಅಕ್ಕಯಮ್ಮ, ಆರ್‌.ರಾಜೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಜಿಎಸ್ ಟಿ 1.O: ಲೂಟಿ ಉತ್ಸವ್, ಜಿಎಸ್ ಟಿ 2.O: ಜುಮ್ಲಾ‌ ಉತ್ಸವ್ Janashakthi Media

Donate Janashakthi Media

Leave a Reply

Your email address will not be published. Required fields are marked *