ಹುಬ್ಬಳ್ಳಿ | ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್‌ನಲ್ಲಿ 11 ಕೆ.ಜಿ ಗಾಂಜಾ ಪತ್ತೆ

ಹುಬ್ಬಳ್ಳಿ: ಶನಿವಾರ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್‌ನಲ್ಲಿ ರೈಲ್ವೆ ಸುರಕ್ಷಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ ವೇಳೆ  ಅಂದಾಜು 11 ಲಕ್ಷ ರೂ ಮೊತ್ತದ 11 ಕೆ.ಜಿ ಗಾಂಜಾ ಪತ್ತೆಯಾಗಿದೆ. ವಾರಸುದಾರರಿಲ್ಲದ ಒಂದು ದೊಡ್ಡ ಬ್ಯಾಗ್ ಕಂಡಿದೆ.

ಇದನ್ನೂ ಓದಿ: ಮಳೆಗಾಲ ಮುಗಿದ ತಕ್ಷಣ ತುಂಗಭದ್ರಾ ಜಲಾಶಯದ ಗೇಟ್ ಗಳ ಬದಲಾವಣೆ: ಸಿಎಂ ಸಿದ್ದರಾಮಯ್ಯ

ಅದನ್ನು ಬಿಚ್ಚಿ ಪರಿಶೀಲನೆ ನಡೆಸಿದಾಗ 10 ಬಂಡಲ್ ನಲ್ಲಿ 11 ಕೆಜಿ ಇರುವುದು ಪತ್ತೆಯಾಗಿದೆ. ವಶಕ್ಕೆ ಪಡೆದ ಆರ್ ಪಿ ಎಫ್ ಅಧಿಕಾರಿಗಳು ಧಾರವಾಡ ಜಿಲ್ಲಾ ಅಬಕಾರಿ ಇನ್ ಸ್ಪೆಕ್ಟರ್ ಗೆ ಹಸ್ತಾಂತರಿಸಿದ್ದಾರೆ. ಅಬಕಾರಿ ಇನ್ ಸ್ಪೆಕ್ಟರ್ ದೂರು ದಾಖಲಿಸಿಕೊಂಡಿದ್ದಾರೆ.

ಪತ್ತೆ ಮಾಡಿದ ತಂಡ : ಈ ಅಪಾರ ಮೊತ್ತದ ಗಾಂಜಾವನ್ನು ಆರ್ ಪಿ ಎಫ್ ನ ಎಸ್ ಐ ಅಭಿಷೇಕರೆಡ್ಡಿ, ಎಎಸ್ ಐ ಎಂ.ಜಿ. ನಾಯಕ, ಹೆಡ್ ಕಾನ್ ಸ್ಟೇಬಲ್ ಎಂ. ಗೋಪಾಲ್, ಕಾನ್ ಸ್ಟೇಬಲ್ ಗಳಾದ ಸಿ.ವಿ ಬಂಗಾರಿ, ಎಸ್.ಎಂ ರಫಿ, ಆರ್ ಪಿಎಫ್ ಶ್ವಾನ ದಳದ ಹೆಡ್ ಕಾನ್ ಸ್ಟೇಬಲ್ ಗಳಾದ ಎಚ್.ಎಫ್ ಕಕಣಿ, ಎಚ್ಎಂ. ಚವ್ಹಾಣ ಅವರನ್ನೊಳಗೊಂಡ ತಂಡವು ಪತ್ತೆ ಮಾಡಿದೆ.

ಇದನ್ನೂ ನೋಡಿ: ಪರಿಷ್ಕೃತ ಜಿಎಸ್ ಟಿ : ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ? Janashakthi Media

Donate Janashakthi Media

Leave a Reply

Your email address will not be published. Required fields are marked *