ಸೆ.19ರಂದು ರಾಜ್ಯಾದ್ಯಂತ ಇ-ಲೋಕ ಅದಾಲತ್

  • ಕೋವಿಡ್-19, ಮತ್ತಿತರ ಕಾರಣದಿಂದ ಬಾಕಿ ಉಳಿದಿರುವ ಸಾವಿರಾರು ಪ್ರಕರಣಗಳಿಗೆ ಮುಕ್ತಿ

ಬೆಂಗಳೂರು: ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಸೆ.19ರಂದು ಇ-ಲೋಕ ಅದಾಲತ್ ಏರ್ಪಡಿಸಲಾಗಿದ್ದು ರಾಜಿ ತೀರ್ಮಾನದ ಮೂಲಕ ಸಾವಿರಾರು ಪ್ರಕರಣಗಳ ಇತ್ಯರ್ಥ ನಿರೀಕ್ಷಿಸಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್  ತಿಳಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕವೇ ಎಲ್ಲಾ ಜಿಲ್ಲೆಯ ಸತ್ರ ನ್ಯಾಯಾಧೀಶರು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕೋವಿಡ್-19 ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ವಿಚಾರಣೆಗಳು ತಡವಾಗುತಿವೆ . ಹಾಗಾಗಿ ಬಾಕಿ ಇರುವ, ರಾಜಿ ಸಂಧಾನದ ಮೂಲಕ ಬಗೆ ಹರಿಸಬಹುದಾದ ಪ್ರಕರಣಗಳನ್ನು ವಿಲೇವಾರಿ ಮಾಡಿ ತ್ವರಿತ ನ್ಯಾಯ ಒದಗಿಸಲು ಇ ಲೋಕ ಅದಾಲತ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಸೆಪ್ಟಂಬರ್ 19 ರಂದು ಪ್ರಪ್ರಥಮವಾಗಿ ಇ-ಲೋಕ ಅದಾಲತ್ ಜಾರಿಗೊಳಿಸಲಾಗುತ್ತಿದೆ. ತಂತ್ರಜ್ಞಾನದ ಬಳಕೆ ಮೂಲಕ ಕಕ್ಷಿದಾರರು ತಮ್ಮ ವಕೀಲರ ಮೂಲಕ‌ ಅಥವಾ ನೇರವಾಗಿ ಕುಳಿತಲ್ಲಿಂದಲೇ ರಾಜಿ‌ ಸಂಧಾನದಲ್ಲಿ ಪಾಲ್ಗೊಂಡು ನ್ಯಾಯಾಲಯದ ತೀರ್ಪು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಸರ್ವರಿಗೂ ಒಂದೇ ರೀತಿಯ ನ್ಯಾಯ ಒದಗಿಸಲಾಗುವುದು .ಇಲ್ಲಿ ನೀಡುವ ತೀರ್ಮಾನವನ್ನು ಇತರ ನ್ಯಾಯಲಯಗಳಲ್ಲಿ ಪ್ರಶ್ನಿಸುವಂತಿಲ್ಲ . ಹೆಚ್ಚಾಗಿ ಅಪಘಾತ ಪ್ರಕರಣಗಳು, ಚೆಕ್ ಬೌನ್ಸ್ ಮತ್ತಿತರ ಸಿವಿಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು. ಈಗಾಗಾಲೇ ಇನ್ಷೂರೆನ್ಸ್ ಕಂಪನಿಗಳ ಪ್ರತಿನಿಧಿಗಳೊಂದಿಗೂ ಚರ್ಚಿಸಲಾಗಿದೆ.  8-10 ವರ್ಷಗಳ ಹಿಂದೆ ನಡೆದ ಅಪಘಾತಗಳು ಇನ್ನೂ ಪರಿಹಾರವಾಗಿಲ್ಲ. ಇವುಗಳನ್ನು ಇ-ಲೋಕ ಅದಾಲತ್ ಮೂಲಕ ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ಅವರು ತಿಳಿಸಿದರು.
ಯಾವುದಾದರು ಕೇಸ್‍ಗಳ ಇತ್ಯರ್ಥ ಮಾಡಿಕೊಳ್ಳಲು ಕೋರ್ಟ್ ಅಥವಾ ಕಚೇರಿಗಾಗಲಿ ಹೋಗುವ ಅವಶ್ಯಕತೆ ಇಲ್ಲ ಅವರ ಸ್ಥಾನದಲ್ಲಿಯೇ ಕುಳಿತು ತಮ್ಮ ವಕೀಲರ ಮುಖಾಂತರ ಎಲ್ಲಾ ರೀತಿಯ ಮೂಲಾಧಾರಗಳನ್ನು ಒದಗಿಸಿದರೆ ನಿಯಮಾನುಸಾರ ನೀಡಬೇಕಾದ ಪರಿಹಾರ ಇತ್ಯರ್ಥವಾಗಲಿದೆ ಎಂದು ನಾ|| ಅರವಿಂದ ಕುಮಾರ್ ಅವರು ಮಾಹಿತಿ ನೀಡಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಅಲೋಕ್ ಆರಾಧ್ಯ ಅವರೂ ಕೂಡ ಈ ಲೋಕ ಅದಾಲತ್‍ನ ಉದ್ದೇಶ ಹಾಗೂ ಆಶಯಗಳ ಬಗ್ಗೆ ವಿವರಿಸಿದರು. ಕಕ್ಷಿದಾರರ, ಪ್ರತಿವಾದಿಗಳು, ವಕೀಲರುಗಳು ಹಾಗೂ ನ್ಯಾದೀಶರುಗಳು ಇ ಲೋಕ ಅದಾಲತ್‍ನ ಯಶಸ್ವಿಗೆ ಸಹಕರಿಸಬೇಕು ಎಂದರು.

Donate Janashakthi Media

Leave a Reply

Your email address will not be published. Required fields are marked *