ಶ್ರೀಲಂಕಾ ಚುನಾವಣೆ : ರಾಜಪಕ್ಸ ಸಹೋದರರಿಗೆ ಭಾರೀ ಬಹುಮತ

ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಅವರ ಸಹೋದರ ಮಹಿಂದ ರಾಜಪಕ್ಸ ರವರು ಸ್ಥಾಪಿಸಿದ ಹೊಸ ಪಕ್ಷ  ಎಸ್ ಎಲ್ ಪಿ ಪಿ ( ಶ್ರೀಲಂಕಾ ಪೀಪಲ್ಸ್‌ ಪ್ರಂಟ್- ಶ್ರೀಲಂಕಾ ಪೊದುಜನ ಪೆರಮುನ) ಯು  ಶ್ರೀಲಂಕಾದ 16 ನೇ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಒಟ್ಟು  225 ಸ್ಥಾನಗಳ ಸದಸ್ಯರಲ್ಲಿ 145 ಸ್ಥಾನಗಳನ್ನು ಗೆದ್ದುಕೊಂಡಿದೆ. ಇವರ ಮೈತ್ರಿ ಕೂಟದ ಐದು ಮಿತ್ರ ಪಕ್ಷಗಳ ಬೆಂಬಲದೊಂದಿಗೆ,  ಒಟ್ಟು 150 ಸ್ಥಾನಗಳನ್ನು ಪಡೆದು ಮೂರನೇ ಎರಡರಷ್ಟು ಸ್ಥಾನಗಳನ್ನು ಸುಲಭವಾಗಿ ತಲುಪಿದೆ. ಇದು ಶ್ರೀಲಂಕಾದ ಪ್ರಮಾಣಾತ್ಮಕ ಪ್ರಾತಿನಿಧ್ಯ ವ್ಯವಸ್ಥೆ ಯಲ್ಲಿನ ರಾಜಕೀಯದ ಅತ್ಯುತ್ತಮ ಸಾಧನೆ ಎಂದು ಪರಿಗಣಿಸಲಾಗಿದೆ.

ಕಳೆದ ಭಾನುವಾರ ಮಹಿಂದಾ ರಾಜಪಕ್ಸ ಪ್ರಧಾನ ಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದರು.  ಈ ಎಲ್ಲಾ ಬೆಳವಣಿಗೆಗಳು ಕೋವಿಡ್-19 ರ ಮಹಾ ಮಾರಿ  ಹರಡುವಿಕೆಯ ಅಪಾಯಕಾರಿ ವಾತಾವರಣದಲ್ಲಿಯೇ ನಡೆಯಿತು.

ಚುನಾವಣಾ ಫಲಿತಾಂಶವು ಎಸ್ ಎಲ್ ಪಿಪಿ ಗೆ ಸೂಪರ್ ಬಹುಮತ ತಂದು ಕೊಟ್ಟಿದೆ ಎಂಬುದು ವಾಸ್ತವಿಕ.  ಆದರೆ, ಈಗಾಗಲೇ ಪ್ರತಿಪಕ್ಷಗಳಿಗೆ ಸಂದೇಹ ಮತ್ತು ಕಳವಳ ಉಂಟಾಗಿದೆ.  2/3 ರಷ್ಟು ‘ ‘ಬಹುಮತ ಕೆಟ್ಟದನ್ನು ನೀರಿಕ್ಷಿಸಬಹುದು ಅಥವಾ ಉತ್ತಮವಾದುದ್ದನ್ನು  ಆಶಿಸಲುಬಹುದು ?  ಇದನ್ನು ಸಾಭೀತು ಪಡಿಸಿ ಮಿಸ್ಟರ್ ಪ್ರೆಸಿಡೆಂಟ್ ಎಂದು‌ ಯುಎನ್ ಪಿ  ಪಕ್ಷದ ಮಾಜಿ ಮಂತ್ರಿ ಮಂಗಳ ಸಮರವೀರ ಆತಂಕದಿಂದ ಟ್ವೀಟ್ ಮಾಡಿದ್ದಾರೆ.

ಭಾರೀ ಬಹುಮತ ಏಕೆ?

ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ರ ಯುಎನ್ ಪಿ  ಪಕ್ಷವು ಕೇವಲ ಒಂದು ಸ್ಥಾನವನ್ನು ಮಾತ್ರ ಗಳಿಸಿ ಹೀನಾಯ ಸೋಲನ್ನು ಅನುಭವಿಸಿದೆ. ಭ್ರಷ್ಟಾಚಾರ ಮುಕ್ತ ಉತ್ತಮ ಆಡಳಿತ ನೀಡುವುದಾಗಿ ಭರವಸೆ ಮೂಡಿಸಿದ್ದ ವಿಕ್ರಮಸಿಂಘೆ ಸರ್ಕಾರದ ಆಡಳಿತವು ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿತ್ತು.

ಪ್ರಮುಖವಾಗಿ, 2019 ರ ಏಪ್ರಿಲ್‌ನಲ್ಲಿ ನಡೆದ ‘ಈಸ್ಟರ್ ಸಂಡೇ’ ಘಟನೆಯಲ್ಲಿ,  ಕೊಲೊಂಬೊ ನಗರದಲ್ಲಿ ನ ಮೂರು ಚರ್ಚ್ ಗಳು ಮತ್ತು ಮೂರು ಸುಸಜ್ಜಿತ ಹೋಟೆಲ್ ಗಳ ಮೇಲೆ ಉಗ್ರರ ದಾಳಿಯಿಂದಾಗಿ 260 ಕ್ಕೂ ಹೆಚ್ಚು ಜನರ ಸಾವು ಸಂಭವಿಸಿತ್ತು.   ಈ ದಾಳಿ ಕುರಿತಂತೆ ಮುಂಜಾಗ್ರತಾ ಮಾಹಿತಿಗಳು ಲಭ್ಯವಿದ್ದಾಗ್ಯೂ ಪರಿಣಾಮಕಾರಿ ಕ್ರಮ ವಹಿಸುವಲ್ಲಿ ವಿಫಲವಾಗಿದ್ದು,  ವಿಕ್ರಮಸಿಂಘೆ ಪಕ್ಷದ ಹೀನಾಯ ಸೋಲಿಗೆ ಕಾರಣವೆನ್ನಲಾಗಿದೆ.

ಇದರೊಂದಿಗೆ ಉಂಟಾದ ಪಕ್ಷ ದೊಳಗಿನ ಒಳಜಗಳ ದಿಂದಾಗಿ,  ಸಜಿತ್ ಪ್ರೇಮದಾಸ ಅವರು ಯು ಎನ್ ಪಿ ಪಕ್ಷದಿಂದ ಹೊರಹೋಗಿ, ಎಸ್ ಜೆ ಪಿ ಪಕ್ಷ ಕಟ್ಟಿ ಕೊಂಡರು. ಇದೀಗ ಈ ಚುನಾವಣೆಯಲ್ಲಿ 54 ಸ್ಥಾನಗಳನ್ನು ಇವರ ಪಕ್ಷ ಗೆದ್ದು ಪ್ರಮುಖ ಪ್ರತಿ ಪಕ್ಷವಾಗಿದೆ.

ಪ್ರಸ್ತುತ ಅಧ್ಯಕ್ಷರಾದ,  ಗೊತಬಯ ರಾಜಪಕ್ಸ 2009 ರಲ್ಲಿ ರಕ್ಷಣಾ ಕಾರ್ಯದರ್ಶಿ ಯಾಗಿದ್ದರು. ಆಗ ತಮಿಳು ಟೈಗರ್’  ಪ್ರತ್ಯೇಕತಾ ವಾದಿ ಬಂಡುಕೋರರನ್ನು ಹತ್ತಿಕ್ಕಿದ್ದರು. ಹೀಗಾಗಿ, ಶ್ರೀಲಂಕಾ ಜನರ ಮದ್ಯೆ ಜನಪ್ರಿಯ ರಾಗಿದ್ದರು. ಕಳೆದ ನವೆಂಬರ್ ನಲ್ಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ನಂತರ, ‘ಕೋವಿಡ್-19 ರ ಹರಡುವಿಕೆಯನ್ನು ತಡೆಯುವಲ್ಲಿ, ಏಕಾಂಗಿಯಾಗಿ ಸ್ಥಿರತೆಯನ್ನು ತಂದುಕೊಟ್ಟಿದ್ದಾರೆ ಎಂದು ಬಹುತೇಕ ಮತದಾರರು ಇವರ ಆಡಳಿತಕ್ಕೆ ಮನ್ನಣೆ ನೀಡಿದ್ದಾರೆ ಎನ್ನಲಾಗಿದೆ.

ಶ್ರೀಲಂಕಾ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ‘ಮೂಲ ಕಾರಣಗಳು’ 1956, 1977 ಮತ್ತು 2010 ರಲ್ಲಿ ಸರ್ಕಾರ ಗಳು ಸದನದಲ್ಲಿ ಮೂರನೇ ಎರಡರಷ್ಟು, ಬಹುಮತಗಳನ್ನು  ಹೊಂದಿದ್ದ ಸಂದರ್ಭ ಎಂದು ಗುರುತಿಸಬಹುದು. ಹಾಗಾಗಿ, ತಪ್ಪುಗಳು ಮತ್ತು ಅಪಘಾತಗಳು ಸಂಭವಿಸಬಹುದು ಎಂದು ಪ್ರತಿಪಕ್ಷಗಳು ಆತಂಕಿತರಾಗಿದ್ದಾರೆ. ಮತದಾನಕ್ಕೆ ಮುಂಚೆಯೇ, ರಾಜಪಕ್ಷೆ’ ಗಳು ಸಂವಿಧಾನದ 19 ನೇ ತಿದ್ದು ಪಡಿಯನ್ನು ಬದಲಾಯಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಸಂವಿಧಾನದ 19 ನೇ ತಿದ್ದುಪಡಿ

1948 ರಲ್ಲಿ ಸ್ವಾತಂತ್ರ್ಯ ಬಂದ ನಂತರ ಮೊದಲ ಗಣತಂತ್ರ ಸಂವಿಧಾನ ಜಾರಿಗೆ ಬಂದದ್ದು. ಎರಡನೇ ಬಾರಿಗೆ 1972 ರಲ್ಲಿ ಪುನಃ ರಚನೆಗೊಂಡ ಸಂವಿಧಾನವು, ‘ ಸಿಲೋನ್ ಎಂಬ ಹೆಸರನ್ನು ‘ ಶ್ರೀಲಂಕಾ’ ವೆಂದು ಬದಲಾಯಿಸಿತು. ಮೇ 22, 1972 ರಿಂದ ಹೊಸ ಸಂವಿಧಾನವಾಗಿ ಅನುಷ್ಟಾನಕ್ಕೆ ತರಲಾಯಿತು. ಅಲ್ಲಿಂದ ಇಲ್ಲಿಯವರೆಗೂ, ಸುಮಾರು 19 ತಿದ್ದುಪಡಿಗಳನ್ನು ಮಾಡಲಾಗಿದೆ.

2015 ರಲ್ಲಿ ವಿಕ್ರಮಸಿಂಘೆ ಆಡಳಿತದ ಸರ್ಕಾರ ವು ಸಂವಿಧಾನಕ್ಕೆ 19 ನೇ ತಿದ್ದುಪಡಿಯನ್ನು ತಂದಿತ್ತು. ಆ ಮೂಲಕ ಅವರ ಆಡಳಿತದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಯಿತು. ಒಬ್ಬ ಅಧ್ಯಕ್ಷ ಮತ್ತು ಪ್ರಧಾನಿ ಗೆ ಎರಡು ಬಾರಿ ಮಾತ್ರ ಅವಕಾಶ ನಿಗಧಿ ಪಡಿಸಿತ್ತು. ಹೊಸ ಸರ್ಕಾರ ಇದೀಗ ಇದನ್ನು ಬದಲಾಯಿಸುತ್ತದೆ. ಪ್ರಬಲ ಸರ್ಕಾರ ನೀಡುತ್ತೇವೆ ಎಂಬ ಚುನಾವಣಾ ಭರವಸೆಗೆ ಜನ ಮನ್ನಣೆ ಸಿಕ್ಕಿದೆ. ಸಿಂಹಳ ಬೌದ್ದ ರಾಷ್ಟ್ರೀಯತೆ ಚುನಾವಣಾ ಪ್ರಚಾರದಲ್ಲಿ ಪ್ರಮುಖ ವಾಗಿತ್ತು ಮತ್ತು ದ್ವೇಷದ ಪ್ರಚೋದಕ ಭಾಷಣಗಳು ಗಂಭೀರವಾಗಿ ಗಮನ ಸೆಳೆದಿದ್ದವು ಎಂದು ಸುದ್ದಿಯಾಗಿದೆ. ಇದೀಗ ಅಲ್ಪ ಸಂಖ್ಯಾತರಾದ ಮುಸ್ಲಿಂರು ಮತ್ತು ತಮಿಳರ ಪ್ರಾತಿನಿಧ್ಯ ಸಂಸತ್ತಿನಲ್ಲಿ ಕಡಿಮೆಯಾಗಿದೆ.

ಈ ಇಬ್ಬರು ಅಣ್ಣ ತಮ್ಮಂದಿರು ಸಂವಿಧಾನದ 19 ನೇ ತಿದ್ದುಪಡಿಗೆ ಮಾತ್ರ ಸೀಮಿತವಾಗಿಲ್ಲ. ಇವರ  ಆಡಳಿತದೊಂದಿಗೆ ಸಂಬಂಧ ಹೊಂದಿರುವ ರಾಜಕಾರಣಿ ಗಳು 13 ನೇ ತಿದ್ದುಪಡಿ ಯ ಅಗತ್ಯವನ್ನು ಪ್ರಶ್ನಿಸಿದ್ದಾರೆ.  ಇದನ್ನು ಇವರು ಕೆದಕುವ ಸಂಭವ ಇದೆ ಎಂದು ವರದಿಯಾಗಿದೆ. ಇದು ಇಂಡೋ-ಲಂಕಾ ಒಪ್ಪಂದದ ನಂತರ ಅಲ್ಪಸಂಖ್ಯಾತ ತಮಿಳರು ವಾಸಿಸುವಂತಹ ಪ್ರಾಂತ್ಯಗಳಿಗೆ ಸಂಬಂಧಿಸಿದ ತಿದ್ದುಪಡಿಯಾಗಿದೆ.

ಬಹು ಜನಾಂಗ ಗಳ ದ್ವೀಪ ರಾಷ್ಟ್ರ ವು ಧರ್ಮ ಮತ್ತು ಜನಾಂಗದ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಸೊರಗಿದೆ. ಇದೀಗ ಕೋವಿಡ್-19 ರಿಂದಾಗಿ ಪ್ರವಾಸೋದ್ಯಮ ಮತ್ತು ಒಟ್ಟಾರೆಯ ಆರ್ಥಿಕತೆ ಕುಸಿದಿದೆ. ಸಿಕ್ಕಿರುವ ಅವಕಾಶವನ್ನು ಬಳಸಿ ಈಗಿನ ಸರಕಾರ ಅಧಿಕಾರದ ಕೇಂದ್ರಿಕರಣ ಮಾಡಿಕೊಂಡು ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *