ನೇಪಾಳದಲ್ಲಿ ನದಿಗೆ ಭಾರತದ ಬಸ್ ಉರುಳಿಬಿದ್ದು 14 ಮಂದಿ ಸಾವು

ಬಸ್ ನದಿಗೆ ಬಿದ್ದ ಪರಿಣಾಮ 14 ಮಂದಿ ಭಾರತೀಯರು ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿರುವ ಭೀಕರ ಘಟನೆ ನೇಪಾಳದಲ್ಲಿ ಶುಕ್ರವಾರ ಸಂಭವಿಸಿದೆ.

ಭಾರತದ ಉತ್ತರ ಪ್ರದೇಶದಲ್ಲಿ ನೋಂದಣಿ ಹೊಂದಿರುವ ಬಸ್ 40 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾಗ ಮರ್ಸಗಂಡಿ ನದಿಗೆ ಬಿದ್ದಿದೆ.

ರಾಜಧಾನಿ ಕಠ್ಮಂಡುವಿನಿಂದ ಪೊಖಾರಾಗೆ ಪ್ರಯಾಣಿಸುತ್ತಿದ್ದ ಬಸ್ ಕಠ್ಮಂಡುವಿನಿಂದ 100 ಕಿ.ಮೀ. ದೂರದ ತಹಹುನ್ ಜಿಲ್ಲೆಯಲ್ಲಿ ನದಿಗೆ ಉರುಳಿಬಿದಿದ್ದೆ ಎಂದು ಹೇಳಲಾಗಿದೆ.

ಕಳೆದ ತಿಂಗಳಷ್ಟೇ ಭೂಕುಸಿತದಿಂದ ಎರಡು ಬಸ್ ಗಳು ನದಿಗೆ ಉರುಳಿ ಬಿದ್ದಿದ್ದರಿಂದ 7 ಭಾರತೀಯರು ಕೊಚ್ಚಿ ಹೋಗಿದ್ದರು. ಈ ಘಟನೆ ಬೆನ್ನಲ್ಲೇ ಮತ್ತೊಂದು ದುರ್ಘಟನೆ ವರದಿಯಾಗಿದ್ದು, ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.

 

Donate Janashakthi Media

Leave a Reply

Your email address will not be published. Required fields are marked *