ಯಾದಗಿರಿ: ಮದುವೆ ಭರವಸೆ ನೀಡಿ ಲಕ್ಷಾಂತರ ರೂ ವಂಚನೆ, ನ್ಯಾಯಕ್ಕಾಗಿ ಮಹಿಳೆಯ ಧರಣಿ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಬಸವಂತಪುರ ಗ್ರಾಮದಲ್ಲಿ, ಹತ್ತು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದ ವಿಧವೆಯೊಬ್ಬರು, ಮದುವೆಯ ಆಶ್ವಾಸನೆ ನೀಡಿದ ವ್ಯಕ್ತಿಯೊಬ್ಬರಿಂದ ವಂಚಿತರಾಗಿರುವ ಘಟನೆ ನಡೆದಿದೆ.

ಈ ಮಹಿಳೆ ತನ್ನ ಮಗನೊಂದಿಗೆ ತವರು ಮನೆಯಲ್ಲಿದ್ದಾಗ, ಅಬ್ಬೆತುಮಕೂರು ಮಠದಲ್ಲಿ ಮಾಳಪ್ಪ ಹತ್ತಿಕುಣಿ ಎಂಬಾತನೊಂದಿಗೆ ಪರಿಚಯವಾಯಿತು. ಮಾಳಪ್ಪ ತನ್ನನ್ನು ಮದುವೆಯಾಗುವುದಾಗಿ ಹೇಳಿ, ಪ್ರೀತಿ ನಾಟಕವಾಡಿ, ದೈಹಿಕ ಸಂಬಂಧ ಬೆಳೆಸಿದನು.

ಇದನ್ನು ಓದಿ:ಪ್ರತ್ಯೇಕತಾವಾದಿಗಳೊಂದಿಗೆ ಬಿಜೆಪಿ ಗುಪ್ತ ಮೈತ್ರಿ – ಎಡ ಕಾರ್ಯಕರ್ತರ ಮೇಲೆ ಹಲ್ಲೆ– ಕೊಲೆ- ಗೂಂಡಾಗಿರಿ

ಮಾಳಪ್ಪ, ತನ್ನ ಕುಟುಂಬದ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ, ಮಹಿಳೆಯಿಂದ 4.5 ಲಕ್ಷ ರೂಪಾಯಿ ಸಾಲವಾಗಿ ಪಡೆದನು. ಆದರೆ, ಹಣ ಪಡೆದ ನಂತರ, ಮಾಳಪ್ಪ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿ, ಮಹಿಳೆಯೊಂದಿಗೆ ಸಂಪರ್ಕ ಕಡಿತಗೊಳಿಸಿದನು. ವಂಚನೆಗೊಳಗಾದೆನೆಂದು ಅರಿತ ಮಹಿಳೆ, ನ್ಯಾಯಕ್ಕಾಗಿ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ, ಸೂಕ್ತ ಕ್ರಮ ಕೈಗೊಳ್ಳಲಾಗಲಿಲ್ಲ.

ನ್ಯಾಯಕ್ಕಾಗಿ ಹೋರಾಡುತ್ತಿರುವ ಈ ಮಹಿಳೆ, ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ. ಅವರು ಮಾಳಪ್ಪನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ತಾನು ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಸಹಾಯ ಮಾಡುವಂತೆ ಬೇಡಿಕೊಂಡಿದ್ದಾರೆ.

ಇದನ್ನು ಓದಿ:ಬೆಳವಣಿಗೆಯ ಎರಡು ಪರ್ಯಾಯ ನಮೂನೆಗಳು

Donate Janashakthi Media

Leave a Reply

Your email address will not be published. Required fields are marked *