ಇಂಫಾಲ್: ಮತ್ತೆ ಹಿಂಸಾಚಾರ ಘಟನೆಗಳು ಮಣಿಪುರದಲ್ಲಿ ಆರಂಭವಾಗಿದೆ. ಹಲವಾರು ಕಣಿವೆ ಜಿಲ್ಲೆಗಳಲ್ಲಿ ಹೊಸ ಹಿಂಸಾಚಾರ ಮತ್ತು ಉದ್ವಿಗ್ನತೆ ಉಂಟಾಗಿದ್ದು, ಹಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಮೈತೆಯಿ ಸಂಘಟನೆಯ ನಾಯಕ ಮತ್ತು ಇತರ ಕೆಲವು ಸದಸ್ಯರ ಬಂಧನದ ವರದಿಗಳ ನಂತರ ಜೂನ್ 7 ಶನಿವಾರ ರಾತ್ರಿ ಅಶಾಂತಿ ಭುಗಿಲೆದ್ದಿತು.
ಇದನ್ನೂ ಓದಿ: ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ; ಗ್ರಾಮಸ್ಥರು ಪ್ರತಿಭಟನೆ
ಪ್ರತಿಭಟನಾಕಾರರು ರಸ್ತೆಗಳ ಮಧ್ಯದಲ್ಲಿ ಟೈರ್ಗಳು ಮತ್ತು ಹಳೆಯ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿದರು. ವಿಮಾನ ನಿಲ್ದಾಣದ ಪ್ರವೇಶದ್ವಾರಕ್ಕೆ ಘೇರಾವ್ ಹಾಕಿದರು. ತಮ್ಮ ನಾಯಕನ ಬಿಡುಗಡೆಗೆ ಒತ್ತಾಯಿಸಿ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದರು. ಅವರಲ್ಲಿ ಕೆಲವರು ಇಂಫಾಲ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಪ್ರಯತ್ನಿಸಿದರು. ಭಾನುವಾರವೂ ಪರಿಸ್ಥಿತಿ ಉದ್ವಿಗ್ನವಾಗಿತ್ತು.
ಬಿಷ್ಣುಪುರ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೌಬಲ್ ಮತ್ತು ಕಾಕ್ಚಿಂಗ್ ಕಣಿವೆ ಜಿಲ್ಲೆಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸುವ ನಿಷೇಧಾಜ್ಞೆಗಳನ್ನು ಜಾರಿಗೊಳಿಸಲಾಗಿದೆ.
ಮೇ 2023 ರಿಂದ ಇದುವರೆಗೆ ಮೈತೆಯಿ ಮತ್ತು ಕುಕಿ-ಝೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 260 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಕೇಂದ್ರ ಸರ್ಕಾರವು ಫೆಬ್ರವರಿಯಲ್ಲಿ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತ್ತು.
ಇದನ್ನೂ ನೋಡಿ: ಚರ್ಚೆ | ತ್ಯಾಗದ ಹಬ್ಬ ಬಕ್ರೀದ್- ಆಹಾರ ರಾಜಕಾರಣ – ಸೈಯದ್ ಶಫಿವುಲ್ಲಾ ಮತ್ತು ಕೆ ಎಸ್ ವಿಮಲಾ ಮಾತುಕತೆJanashakthi