ಉತ್ತರಾಖಂಡ ಪ್ರವಾಹ ಕುಸಿತ ಪ್ರದೇಶಕ್ಕೆ ರೈತ-ಕಾರ್ಮಿಕ-ವಿದ್ಯಾರ್ಥಿಗಳ ನಿಯೋಗ ಭೇಟಿ

4 ದಿನಗಳ ನಂತರವೂ 38 ಕ್ಕೂ ಹೆಚ್ಚು ಕಾರ್ಮಿಕರನ್ನು ಹೂಳು ಮತ್ತು ಅವಶೇಷಗಳಿಂದ ತುಂಬಿರುವ ಸುರಂಗದಿಂದ ತೆಗೆಯಲು ಸಾಧ್ಯವಾಗಲಿಲ್ಲ. ದನಗಳನ್ನು ಮೇಯಿಸಲು ಅಥವಾ ಹುಲ್ಲು ಕತ್ತರಿಸಲು ಹೋಗಿದ್ದ ಕೆಲವು ಮಹಿಳಾ ಕುಟುಂಬಗಳು ಸೇರಿದಂತೆ ಸುಮಾರು 12 ಗ್ರಾಮಸ್ಥರು ಕಾಣೆಯಾಗಿದ್ದಾರೆ. ಎಲ್ಲಾ 13 ಸೇತುವೆಗಳಲ್ಲಿ 33 ಕ್ಕೂ ಹೆಚ್ಚು ಹಳ್ಳಿಗಳನ್ನು ಸಂಪರ್ಕ ಕಡಿತಗೊಂಡಿದೆ.

ಉತ್ತರಾಖಂಡ ಫೆ 11 :  ಸಿಐಟಿಯು, ಎಐಕೆಎಸ್ ಮತ್ತು ಎಸ್ಎಫ್ಐ ನಿಯೋಗವು ತಪೋವನ್ನಲ್ಲಿನ ಎನ್ಟಿಪಿಸಿಯ ತಪೋವನ್ ವಿಷ್ಣುಗಡ್ ಜಲವಿದ್ಯುತ್ ಯೋಜನೆ ಮತ್ತು ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈನಿ ಗ್ರಾಮದಲ್ಲಿರುವ ರಿಷಿ ಗಂಗಾ ಯೋಜನೆಗೆ ಭೇಟಿ ನೀಡಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅವರ ನೀಡಿದ  ಮಾಹಿತಿ ಪ್ರಕಾರ ದುರಂತದಲ್ಲಿ 204 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.

ನಿಯೋಗದ ನೇತೃತ್ವ ವಹಿಸಿದ್ಧ ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿಯಾಗಿರುವ ವಿಜೂ ಕೃಷ್ಣನ್ ರವರು ಅನುಭವ ಹಂಚಿಕೊಂಡಿದ್ದಾರೆ. ಸಿಐಟಿಯುಗೆ ಸಂಯೋಜಿತವಾಗಿರುವ ಸಂವಿಧಾ ಶ್ರಮಿಕ ಸಂಘ (ಕಾಂಟ್ರಾಕ್ಟರ್ಸ್ ಅಸೋಸಿಯೇಷನ್) ಕಚೇರಿಯು ಸಾಮಾನ್ಯ ದಿನಗಳಲ್ಲಿ ಬಹಳಷ್ಟು ಕಾರ್ಮಿಕರೊಂದಿಗೆ ಸಡಗರದ ಚಟುವಟಿಕೆಯನ್ನು ಕಂಡಿತು. ತಪೋವನ್ನಲ್ಲಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ರಿಟ್ವಿಕ್ ನಿರ್ಮಾಣ ಕಂಪನಿಯ 115 ಕಾರ್ಮಿರು ಮತ್ತು ಓಂ ಮೆಟಲ್ ಕಂಪನಿಯ (ಎನ್ಟಿಪಿಸಿ ಅಡಿಯಲ್ಲಿ) 21 ಕಾರ್ಮಿಕರು ಕಳೆದ ನಾಲ್ಕು ದಿನಗಳಿಂದ  ಕಾಣೆಯಾಗಿದ್ದಾರೆಂದು ಗುರುತಿಸಲಾಗಿದೆ.

ವಿಪತ್ತು ಸಂಭವಿಸುವ ಕೆಲವೇ ನಿಮಿಷಗಳ ಮೊದಲು ಒಕ್ಕೂಟದ ಅಧ್ಯಕ್ಷ ದೇವಿಂದರ್ ಖನೇರಾ ಅವರು ಪ್ರಾಜೆಕ್ಟ್ ಕಚೇರಿಗೆ ಬಂದಿದ್ದರಿಂದ ಅವರು ಸ್ವತಃ ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದಾರೆ, ಅವರ ಚಿಕ್ಕಪ್ಪ, ಸೋದರಳಿಯ ಮತ್ತು ಸೋದರ ಸಂಬಂಧಿಯನ್ನು ಬಿಟ್ಟು ಸೋದರಳಿಯನ ಶವಮಾತ್ರ ದೊರೆತಿದೆ , ದೇವಿಂದರ್ ಅವರ ವೈಯಕ್ತಿಕ ನಷ್ಟದ ಹೊರತಾಗಿಯೂ ಅಲ್ಲಿ ತೊಂದರೆಗೀಡಾದ ಇತರ ಕಾರ್ಮಿಕರಿಗೆ ಸಹಾಯ ಮಾಡಲು ಅಲ್ಲೆ ಉಳಿದಿದ್ದಾರೆ. ರಾಜಿಂದರ್ ರಾವತ್ ಮತ್ತು ರಾಜಿಂದರ್ ಕೆಂಟುರಾ  ಎಂಬ ಇಬ್ಬರೂ  ಚಾಲಕರು ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಒಂದು ವಾಹನ ಕಳೆಯಲ್ಪಟ್ಟಿತು.  ಆದರೂ ಎದೆಗುಂದದೆ ಇಬ್ಬರೂ ಸಹ ಒಕ್ಕೂಟದ ಚಟುವಟಿಕೆ,  ಹಾಗೂ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ನಿಯೋಗವು ಕಾರ್ಮಿಕ ಶಿಬಿರಕ್ಕೆ ಭೇಟಿ ನೀಡಿ ಬದುಕುಳಿದವರೊಂದಿಗೆ ಸಂವಾದ ನಡೆಸಿತು. ಈ ಘಟನೆ ಭಾನುವಾರದಂದು ಅನಾಹುತ ಸಂಭವಿಸಿದ ಕಾರಣ ಅನೇಕ ಕಾರ್ಮಿಕರು ಬದುಕುಳಿದರು. ಇಲ್ಲದಿದ್ದರೆ ಅತಿ ಹೆಚ್ಚು ಪ್ರಾಣಹಾನಿ ಸಂಭವಿಸುತ್ತಿತ್ತು. ನಾಪತ್ತೆಯಾದ ಕಾರ್ಮಿಕರ ಅನೇಕ ಸಂಬಂಧಿಕರು ತಮ್ಮ ಆತ್ಮೀಯರನ್ನು ಹುಡುಕಿಕೊಂಡು ಬಂದಿದ್ದರು. ಜಾರ್ಖಂಡ್ ನಿಂದ ಕೆಲಸಕ್ಕೆ ಬಂದಿದ್ದ 12 ಮಂದಿ  ಕಾರ್ಮಿಕರು ನಾಪತ್ತೆಯಾಗಿದ್ದಾರೆ.  ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸುಮಾರು 25 ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು  ಕಾರ್ಮಿಕ ಆಶಿಶ್ ಮಾಹಿತಿ ನೀಡಿದರು.  ಒಂದು ಶವವನ್ನು ಗುರುತಿಸಲಾಗಿದೆ ಅವರನ್ನು ಲಖಿಂಪುರ ಖೇರಿಗೆ ಕರೆದೊಯ್ಯಲಾಯಿತು. ನಾಪತ್ತೆಯಾಗಿದ್ದ ತನ್ನ ಸೋದರಳಿಯ ಸಾದಿಕ್ ನನ್ನು ಹುಡುಕಲು ಕಾನ್ಪುರದಿಂದ ವ್ಯಕ್ತಿಯೊಬ್ಬರು ಬಂದಿದ್ದರು.

ರವಿ ಎಂಬ ವ್ಯಕ್ತಿಯು ತೆಹ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಚಿಕ್ಕಪ್ಪನೊಂದಿಗೆ ಕಾಣೆಯಾಗಿದ್ದ ತನ್ನ ಸಹೋದರನನ್ನು ಹುಡುಕಿಕೊಂಡು ಬಂದಿದ್ದ. ವಿಚಲಿತರಾದ ಸಂಬಂಧಿಕರು ಮತ್ತು ಸ್ನೇಹಿತರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಿಂದ ಯಾವುದೇ ಸಹಾಯ ಸಿಗುತ್ತಿಲ್ಲ ಎಂದರು.  ಈವರೆಗೆ 18 ಶವಗಳು ಸಿಕ್ಕಿವೆ ಆದರಲ್ಲಿ , ಕೇವಲ 15 ಶವಗಳನ್ನು ಮಾತ್ರ ಗುರುತಿಸಲು ಸಾಧ್ಯವಾಯಿತು. ಶವವನ್ನು ಗುರುತಿಸುವುದು ಅಸಾಧ್ಯವಾಗುವಂತೆ ಕೆಲವು ವಿಕೃತ ಭಾಗಗಳು ಕೂಡಾ ಅಲ್ಲಿ ಕಂಡು ಬಂದಿವೆ.  4 ದಿನಗಳ ನಂತರವೂ 38 ಕ್ಕೂ ಹೆಚ್ಚು ಕಾರ್ಮಿಕರನ್ನು ಹೂಳು ಮತ್ತು ಅವಶೇಷಗಳಿಂದ ತುಂಬಿರುವ ಸುರಂಗದಿಂದ ತೆಗೆಯಲು ಸಾಧ್ಯವಾಗಲಿಲ್ಲ. ದನಗಳನ್ನು ಮೇಯಿಸಲು ಅಥವಾ ಹುಲ್ಲು ಕತ್ತರಿಸಲು ಹೋಗಿದ್ದ ಕೆಲವು ಮಹಿಳಾ ಕುಟುಂಬಗಳು ಸೇರಿದಂತೆ ಸುಮಾರು 12 ಗ್ರಾಮಸ್ಥರು ಕಾಣೆಯಾಗಿದ್ದಾರೆ. ಎಲ್ಲಾ 13 ಸೇತುವೆಗಳಲ್ಲಿ 33 ಕ್ಕೂ ಹೆಚ್ಚು ಹಳ್ಳಿಗಳನ್ನು ಸಂಪರ್ಕ ಕಡಿತಗೊಂಡಿದೆ.

ಅನೇಕ ಮನೆಗಳಿಗೆ ಹಾನಿಯಾಗಿದೆ. ಮೃತಪಟ್ಟ ಕುಟುಂಬಗಳಿಗೆ ಕೇವಲ 4 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಇದು ಹೆಚ್ಚು ಆಶ್ಚರ್ಯಕರವಾಗಿದೆ. ಎನ್ಟಿಪಿಸಿ ಪ್ರಧಾನಿ ಪರಿಹಾರ ನಿಧಿಯಿಂದ 20 ಲಕ್ಷ ಮತ್ತು 2 ಲಕ್ಷ ಪರಿಹಾರವನ್ನು ಘೋಷಿಸಿತು.  ಇದು ಯಾವಯದಕ್ಕೂ ಸಾಕಾಗುವುದಿಲ್ಲ. ಪ್ರತಿ ಕುಟುಂಬಕ್ಕೆ 50 ಲಕ್ಷ ಪರಿಹಾರ ಮತ್ತು ದುಃಖಿತ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು ಎಂದು ನಿಯೋಗ ಒತ್ತಾಯಿಸಿದೆ ಎಂದು ವಿಜೂ ಕೃಷ್ಣನ್ ತಿಳಿಸಿದರು.

ನಿಯೋಗದಲ್ಲಿ ಇನ್ನೋರ್ವ ರೈತ ಮುಖಂಡ, ರಾಜೇಂದ್ರ ನೇಗಿ, ಉತ್ತರಾಖಂಡನ  ಸಿಪಿಐಎಂ ರಾಜ್ಯ ಕಾರ್ಯದರ್ಶಿ ಭೂಪಾಲ್ ಸಿಂಗ್ ರಾವತ್, ಚಮೋಲಿ ಜಿಲ್ಲೆಯ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಮನಮೋಹನ್, ಮದನ್ ಮಿಶ್ರಾ, ಎಸ್ಎಫ್ಐ ರಾಜ್ಯ ಕಾರ್ಯದರ್ಶಿ  ಹಿಮಾಂಶು ಚೌಹಾನ್, ಶೈಲೇಂದರ್, ಎಸ್ಎಫ್ಐ ಮುಖಂಡ ಪುರುಷೋತ್ತಮ್ ಬಡೋನಿ, ಎಐಕೆಎಸ್ ಮುಖಂಡ ರತನ್ ಮಣಿ ದೋವಲ್  ಸೇರಿದಂತೆ ಅನೇಕರಿದ್ದರು.

Donate Janashakthi Media

Leave a Reply

Your email address will not be published. Required fields are marked *