ಉತ್ಪಾದಕರ ಹಾಲಿನ ಬೆಲೆ ಇಳಿಕೆ ಖಂಡಿಸಿ ಕೆಪಿಆರ್‌ಎಸ್‌ ಪ್ರತಿಭಟನೆ

ಕೋಲಾರ: ಕೋಚಿಮುಲ್ ಒಕ್ಕೂಟದಿಂದ ಉತ್ಪಾದಕರ ಹಾಲಿನ ಬೆಲೆ ಇಳಿಕೆ ಮಾಡಿರುವ ಆಡಳಿತ ಮಂಡಳಿಯ ನಿರ್ಧಾರವನ್ನು ಕೂಡಲೇ ವಾಪಸ್ಸು ಪಡೆದು ಹಾಲು ಉತ್ಪಾದಕರನ್ನು ರಕ್ಷಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘಟನೆಯ ಕಾರ್ಯಕರ್ತರು ಕೋಚಿಮುಲ್ ಒಕ್ಕೂಟದ ಆಡಳಿತ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕಳೆದ 40 ವರ್ಷಗಳಿಂದ ಸಹಕಾರ ಕ್ಷೇತ್ರವನ್ನು ಬಲಪಡಿಸಿಕೊಂಡು ಸುಮಾರು 1900 ಕ್ಕೂ ಅಧಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿನಿತ್ಯ 10 ಲಕ್ಷ ಲೀಟರುಗಳಷ್ಟು ಹಾಲು ಒಕ್ಕೂಟ ಸಂಗ್ರಹಿಸುತ್ತಿದೆ ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದು ಬಿಟ್ಟರೆ ಪ್ರತಿವರ್ಷದಂತೆ ಬರಗಾಲದ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ ರಾಸುಗಳಿಗೆ ಮೇವಿನ ಕೊರತೆಯ ಜೊತೆಗೆ ಪಶು ಆಹಾರದ ಬೆಲೆ ಹೆಚ್ಚಳದಿಂದ ಉತ್ಪಾದಕರು ಜಾನುವಾರುಗಳನ್ನು ನಿರ್ವಹಣೆ ಮಾಡಿ ಹಾಲು ಉತ್ಪಾದಿಸುವುದು ತುಂಬಾ ಕಷ್ಟದ ಕೆಲಸವಾಗಿದ್ದು ಇಂತಹ ಸಂದರ್ಭಗಳಲ್ಲಿ ಹಾಲಿನ ಬೆಲೆ ಕಡಿಮೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರು ರೇಷ್ಮೆ ತರಕಾರಿ ಬೆಳೆಗಳನ್ನು ಬೆಳೆಯುವರು ನಮ್ಮನ್ನು ಆಳುವ ಶ್ರೀಮಂತವರ್ಗದ ಪರವಾದ ರಾಜ್ಯ ಮತ್ತು ಕೇಂದ್ರ ಸರಕಾರಗಳ ಜನ ಹಾಗೂ ರೈತ ವಿರೋಧಿ ನೀತಿಗಳಿಂದ ಸರಿಯಾದ ಮಾರುಕಟ್ಟೆ ಇತ್ಯಾದಿ ಸಂಕಷ್ಟಗಳ ನಡುವೆ ಉತ್ತಮ ಬೆಲೆಗಳು ಸಿಗದೆ ದಿವಾಳಿಯಾಗಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಕೃಷಿ ಕೂಲಿಕಾರರು ರೈತರು ಹೈನುಗಾರಿಕೆಯನ್ನು ನಂಬಿ ತಮ್ಮ ಕುಟುಂಬಗಳ ಬದುಕನ್ನು ರೂಪಿಸಿಕೊಂಡಿದ್ದಾರೆ ಬೆಲೆ ಏರಿಕೆಯನ್ನು ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗದ ಸರಕಾರಗಳು ಹಾಲಿನ ಬೆಲೆ ಕಡಿಮೆ ಮಾಡಿರುವುದಕ್ಕೆ ಯಾವುದೇ ನೈತಿಕತೆ ಇಲ್ಲವಾಗಿದೆ ಎಂದು ಆರೋಪಿಸಿದರು.

ರೈತರ ಹಾಲಿನ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಸ್ಥಾಪಿಸಲು ಸಾಧ್ಯವಾಗದ ಕೆಎಂಎಫ್ ಮತ್ತು ಕೋಚಿಮಲ್ ಆಡಳಿತ ಮಂಡಳಿ ದುಂಡು ವೆಚ್ಚಕ್ಕೆ ಕಡಿವಾಣ ಹಾಕದ ಒಕ್ಕೂಟವು ಏಕಾಏಕಿ ಹಾಲಿನ ದರವನ್ನು ಕಡಿಮೆ ಮಾಡಿದ್ದಾರೆ ಹಿಂದೆಯೂ ಕೊರೊನಾ ಹಾಗೂ ಮಾರುಕಟ್ಟೆ ಹೆಸರಿನಲ್ಲಿ ಕಡಿತಗೊಳಿಸಲಾಗಿತ್ತು ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಕಂಗಾಲಾಗಿರುವ ರೈತರು ಕೇಂದ್ರ ಸರ್ಕಾರವು ರೈತರ ಮತ್ತು ಹಾಲು ಉತ್ಪಾದಕರ ವಿರೋಧದ ನಡುವೆಯೂ 12 ದೇಶಗಳಿಂದ ತೆರಿಗೆ ರಹಿತ ಹಾಲು ಉತ್ಪನ್ನಗಳನ್ನು ಖರೀದಿಸಲು ಸಿದ್ಧತೆ ನಡೆಸಿರುವುದಾದರೂ ಯಾಕೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕೆಎಂಎಫ್ ಮತ್ತು ಒಕ್ಕೂಟಗಳು ಈ ರೀತಿಯಲ್ಲಿ ದರ ಇಳಿಕೆ ಮಾಡುವುದು ದೇಶದ ಡೈರಿ ಉದ್ಯಮಕ್ಕೆ ನಷ್ಟವಾಗುವುದಲ್ಲದೆ ಮೂಲಸೌಕರ್ಯಗಳಿಂದ ಬರಗಾಲದ ನೆರಳಿನಿಂದ ಬದುಕುವ ಹಾಲು ಉತ್ಪಾದಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಆದ್ದರಿಂದ ಈ ಕೂಡಲೇ ಆಡಳಿತ ಮಂಡಳಿ ಹಾಲಿನ ದರ ಇಳಿಕೆ ಆದೇಶವನ್ನು ವಾಪಸ್ ಪಡೆದು ಇವತ್ತಿನ ಹೈನುಗಾರಿಕೆ ನಿರ್ವಹಣೆಗೆ ಅನುಗುಣವಾಗಿ ಪ್ರತಿ ಲೀಟರ್ ಹಾಲಿಗೆ 35ರಿಂದ 40 ರೂ ನಿಗದಿ ಮಾಡಬೇಕು ಮತ್ತು ಕೋಚಿಮುಲ್ ವತಿಯಿಂದ ಸರಬರಾಜು ಆಗುವ ಪಶು ಆಹಾರ ಬೆಲೆಯನ್ನು ಕಡಿಮೆ ಮಾಡಲು ಕೋಚಿಮುಲ್ ನಿರ್ದೇಶಕರುಗಳು ಮತ್ತು ಆಡಳಿತ ಮಂಡಳಿ ಕ್ರಮವಹಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೋಚಿಮಲ್ ಮುಂದೆ ಹಾಲು ಉತ್ಪಾದಕರ ಉಳಿವಿಗಾಗಿ ಮತ್ತಷ್ಟು ಹೋರಾಟಗಳನ್ನು ಸಂಘಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆಯ ನೇತೃತ್ವವನ್ನು ಕೆಪಿಆರ್ ಎಸ್ ಜಿಲ್ಲಾ ಅಧ್ಯಕ್ಷ ಪಿ.ಆರ್ ಸೂರ್ಯನಾರಾಯಣ, ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಮುನಿಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ಎನ್ ಎನ್ ಶ್ರೀರಾಮ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಪಾತಕೋಟ ನವೀನ್ ಕುಮಾರ್, ಮುಖಂಡರಾದ ಪುಣ್ಯಹಳ್ಳಿ ಶಂಕರ್,ಟಿ ಕೃಷ್ಣೇಗೌಡ, ಅಲಹಳ್ಳಿ ವೆಂಕಟೇಶ್, ಶ್ರೀಧರ್, ಅಪ್ಪಯ್ಯಣ್ಣ, ವೆಂಕಟೇಶಪ್ಪ, ನಾರಾಯಣಪ್ಪ, ದೊಡ್ಡ ಹಸಾಳ ಮಂಜುನಾಥ್ ಬಂಗಾರಪೇಟೆ ವೆಂಕಟೇಶಪ್ಪ, ಮಂಜು, ಮಂಜುಳ, ಕಲ್ಲೂರು ಚಲಪತಿ, ಮಾಧವ ಪ್ರಭಾಕರ್,ಮುಂತಾದವರು ಇದ್ದರು.

Donate Janashakthi Media

Leave a Reply

Your email address will not be published. Required fields are marked *