ಪರಿಶಿಷ್ಟ ಜಾತಿ ಒಳಮೀಸಲಾತಿ ಅಥವಾ ಉಪವರ್ಗೀಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೋರಾಟದ ಫಲಿತಾಂಶ; ದಲಿತ ಕೆನೆಪದರ ಮುಂದುವರಿಯಲಿ

-ನಾಗರಾಜ ನಂಜುಂಡಯ್ಯ
-ಪಿ. ಸಂಪತ್

ಭಾರತ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಪಯಣದಲ್ಲಿ , ಎಸ್‌ಸಿ ಗಳ ಒಳ ಮೀಸಲಾತಿ ಅಥವಾ ಉಪವರ್ಗೀಕರಣ ಕುರಿತಂತೆ ಸುಪ್ರೀಂ ಕೋರ್ಟ್ ನ ಇತ್ತೀಚಿನ ತೀರ್ಪು ಐತಿಹಾಸಕವೆಂದು‌ ಪರಿಗಣಿಸ ಬಹುದು. ಜಾತಿ

ಸಂವಿಧಾನ ಪೀಠದ ಏಳು ನ್ಯಾಯಾಧೀಶರಲ್ಲಿ ಆರು ಮಂದಿ ಆಯಾ ರಾಜ್ಯ ಸರ್ಕಾರಗಳು SC/ST ಸಮುದಾಯಗಳನ್ನು ದೃಢೀಕರಿಸಲು ಉಪ-ವರ್ಗೀಕರಿಸುವ ಹಕ್ಕನ್ನು ಹೊಂದಿವೆ ಎಂದು ತೀರ್ಪು ನೀಡಿರುವುದು ಸ್ವಾಗತಾರ್ಹವಾದದ್ದು.

ಇದು ಕೇವಲ ಕಾನೂನಾತ್ಮಕ ಜಯವಾಗಿರದೆ ಈ ನೆಲದ ಮೇಲೆ ದಲಿತ ಸಮುದಾಯಾದಗಳು ನಡೆಸಿದ ದೀರ್ಘಾವಧಿ ‌ಹೋರಾಟಗಳಿಗೆ‌ ಸಂದ ಜಯವಿದಾಗಿದೆ. ಪ್ರಮುಖವಾಗಿ ದಲಿತ ಶೋಷಣ್ ಮುಕ್ತಿ ಮಂಚ್ (ಡಿಎಸ್ಎಂಎಂ), ಕರ್ನಾಟಕದಲ್ಲಿ ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್) ಮತ್ತು ಹಲವು ದಲಿತ ಸಂಘರ್ಷ ಸಮಿತಿಗಳು, ತಮಿಳುನಾಡು ಅಸ್ಪೃಶ್ಯತಾ‌ ನಿರ್ಮೂಲನ ಪ್ರಂಟ್ ( ಟಿಎನ್ ಯುಇಎಫ್ ) ಇವುಗಳೊಂದಿಗೆ ಸಿಪಿಎಂ ಪಕ್ಷದ ಸುದೀರ್ಘ ಜಂಟೀ ಹೋರಾಟಗಳ ಫಲ‌ ಈ ತೀರ್ಪು ಎಂದು ಗುರುತಿಸಬಹುದು.

ಇದನ್ನೂ ಓದಿ: ತಂತ್ರಜ್ಞಾನ ನೀಡಿದ ಎಚ್ಚರಿಕೆ: ಉತ್ತರ ಪ್ರದೇಶದಲ್ಲಿ ತಪ್ಪಿದ ರೈಲು ದುರಂತ!

ಮೀಸಲಾತಿ ನೀತಿಯು ಕರ್ನಾಟಕ, ಆಂಧ್ರಪ್ರದೇಶ, ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮಾದಿಗರಂತಹ ಎಲ್ಲಾ ಉಪ-ಜಾತಿಗಳು, ಸಮುದಾಯಗಳಿಗೆ ಏಕರೂಪದ ಸಮಾನತೆಯ ಪ್ರಯೋಜನವನ್ನು ನೀಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದವು. ಜೊತೆಯಲ್ಲಿ ತಮಿಳುನಾಡಿನಲ್ಲಿ ಅರುಂದತಿಯರು; ಮತ್ತು ಪಂಜಾಬ್ ನಲ್ಲಿ ವಾಲ್ಮೀಕಿಗಳು ಮತ್ತು ಮಜಬಿಗಳು ಬಹಳ ಹಿಂದಿನಿಂದಲೂ ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಒಳಮೀಸಲಾತಿ ‌ಕುರಿತಂತೆ 2013 ರಲ್ಲಿ ಸದಾಶಿವ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದೀಗ ಇದನ್ನು ಸಾರ್ವಜನಿಕಗೊಳಿಸಿ ಸೂಕ್ತ ವಿಮರ್ಶೆಗೆ ಒಳಪಡಿಸಬೇಕಾಗಿದೆ. ಅದೇ ರೀತಿ ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳು ಉಪಜಾತಿಗಳ ನಡುವಿನ ನಿರ್ದಿಷ್ಟ ಅಸಮಾನತೆಗಳನ್ನು ಪರಿಶೀಲಿಸಿದ ರಾಜ್ಯ ಮಟ್ಟದ ಆಯೋಗಗಳ ಶಿಫಾರಸುಗಳ ಆಧಾರದ ಮೇಲೆ ಎಸ್ಸಿ ಕೋಟಾದೊಳಗೆ ಉಪ-ವರ್ಗೀಕರಣವನ್ನು ಈಗಾಗಲೇ ಜಾರಿಗೆ ತಂದಿವೆ.

ಇಂತಹ ಉಪವರ್ಗೀಕರಣವನ್ನು ಪ್ರಶ್ನಿಸಿ ವಿವಿಧ ರಾಜ್ಯಗಳಿಂದ ವಿವಿಧ ಹೈಕೋರ್ಟ್ ಗಳು ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ ಏಳು ನ್ಯಾಯಾಧೀಶರ ಪೀಠವು ಉಪ-ವರ್ಗೀಕರಣ ಮತ್ತು ಸಿಂಧುತ್ವದ ವಿಷಯದ ಬಗ್ಗೆ ಇದೀಗ ಈ ತೀರ್ಪಿನ ‌ಮೂಲಕ ಕಾನೂನಾತ್ಮಕ ಗೊಳಿಸಿದೆ. ಇದು ಅತ್ಯಂತ ಸ್ವಾಗತಾರ್ಹ‌ ಮತ್ತು ಐತಿಹಾಸಿಕ ತೀರ್ಪು. ಈ ಹಿಂದೆ ಇ.ವಿ ಚೆನ್ನಯ್ಯ ಮತ್ತು ಆಂದ್ರಪ್ರದೇಶ ರಾಜ್ಯದ ತೀರ್ಪಿನಲ್ಲಿ ಉಪ-ವರ್ಗೀಕರಣವನ್ನು ಪ್ರಸ್ತುತ ತೀರ್ಪಿನ ಸಿಂಧುತ್ವವನ್ನು ತಮಿಳುನಾಡಿನ ಅನುಭವದಿಂದ ನೋಡಬೇಕು.

2007ಕ್ಕೂ ಮುನ್ನ ಅರುಂಧತಿಯಾರ್ ಸಮುದಾಯಗಳು ಉಪವರ್ಗೀಕರಣ ಮತ್ತು ಒಳಮೀಸಲಾತಿಗಾಗಿ ಕಾಲು ಶತಮಾನಕ್ಕೂ ಹೆಚ್ಚು ಕಾಲ ಹೋರಾಟ ನಡೆಸುತ್ತಿದ್ದರೂ ಸಹಾ, ರಾಜ್ಯ ಸರಕಾರ ಕಿಂಚಿತ್ತೂ ಗಮನಹರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ 2007ರಲ್ಲಿ ಸಿಪಿಐ(ಎಂ) ಮತ್ತು ತಮಿಳುನಾಡು ಅಸ್ಪೃಶ್ಯತಾ ನಿರ್ಮೂಲನಾ ರಂಗ (ಟಿ.ಎನ್. ಐ.ಇ.ಎಫ್) ಒಟ್ಟಾಗಿ ಸೇರಿ, ಇದರಲ್ಲಿ ಅರುಧಂತಿಯಾರ್ ಸಮುದಾಯದ ವಿವಿಧ ಸಂಘಗಳೊಂದಿಗೆ ಒಗ್ಗೂಡಿಸಿಕೊಂಡು ಆಂದೋಲನದ ಸರಣಿಯನ್ನು ಆರಂಭಿಸಿತ್ತು, ಅದು ಮಹತ್ವದ ತಿರುವು ಪಡೆದಿತ್ತು.

ಈ ಉಪ-ವರ್ಗೀಕರಣ ಏಕೆ?

ಈ‌ ಉಪವರ್ಗೀಕರಣಕ್ಕಾಗಿ, ಹೋರಾಟವನ್ನು ಕೈಗೆತ್ತು ಕೊಳ್ಳವ ಮುನ್ನಾ, ಮೊದಲು, ಸಿಪಿಐ(ಎಂ) ಮತ್ತು ಟಿಎನ್ ಯುಇಎಫ್ ನೇತೃತ್ವದಲ್ಲಿ ಅರುಂಧತಿಯಾರ್ ಸಮುದಾಯವು ಪ್ರಧಾನವಾಗಿ ಬೀಡುಬಿಟ್ಟಿರುವ ಪ್ರದೇಶಗಳಲ್ಲಿ, ಪ್ರಮುಖವಾಗಿ ವಿರುಧುನಗರ, ದಿಂಡಿಗಲ್ ಮತ್ತು ತಮಿಳುನಾಡಿನ ಪಶ್ಚಿಮ ಜಿಲ್ಲೆಗಳ ಹಲವಾರು ಕ್ಷೇತ್ರಗಳಲ್ಲಿ ಸಮೀಕ್ಷೆಗಳನ್ನು ನಡೆಸಲಾಯಿತು. ಈ ಸಮೀಕ್ಷೆಯ ಮೂಲಕ ಹೊರಬಂದ ಅಂಕಿಅಂಶಗಳು ದಲಿತ ಜನಸಂಖ್ಯೆಯಲ್ಲಿ ಅರುಂಧತಿಯರು ಗಣನೀಯ ವರ್ಗವನ್ನು ಹೊಂದಿದ್ದರೂ ಅವರಲ್ಲಿ ಒಬ್ಬರೂ ಜಿಲ್ಲಾಧಿಕಾರಿಯಾಗಿರಲಿಲ್ಲ ಎಂದು ಸಮೀಕ್ಷೆಗಳಲ್ಲಿ ಬಹಿರಂಗವಾಯಿತು.

ಕೆಲವರು ಮಾತ್ರ ವೈದ್ಯರು ಅಥವಾ ಸರ್ಕಾರಿ ನೌಕರರಾಗಿದ್ದು, ಪದವೀಧರರ ಸಂಖ್ಯೆಯೂ ಬಹಳ ಕಡಿಮೆ ಇತ್ತು. ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅವರ ಪ್ರಾತಿನಿಧ್ಯವು ಶೇಕಡಾ 0.5 ಕ್ಕಿಂತ ಕಡಿಮೆಯಿತ್ತು. ಅವರ ಜೀವನ ಪರಿಸ್ಥಿತಿಗಳು ಅತ್ಯಂತ ಕಳಪೆಯಾಗಿತ್ತು, ಹೆಚ್ಚಿನ ಕುಟುಂಬಗಳು ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದವು, ಅಲ್ಲಿ ಪೋಷಕರು ಮತ್ತು ವಿವಾಹಿತ ಪುತ್ರರು ಮಲಗುವ ಜಾಗವನ್ನು ಹಂಚಿಕೊಂಡಿದ್ದರು. ಅವರಿಗೆ ಯಾವುದೇ ಗೌಪ್ಯತೆ ಎಂಬುದು ಇರಲೇ ಇಲ್ಲ. ಇಂತಹ ವಾತಾವರಣದಲ್ಲಿ ಅವರ ಬದುಕು ಸಾಗಿತ್ತು. ಮಗು-ಪಾಲನೆ ಮತ್ತು ಶಿಕ್ಷಣವು ಪ್ರಮುಖ ಸವಾಲುಗಳಾಗಿದ್ದವು, ಏಕೆಂದರೆ ಅವರು ನೈರ್ಮಲ್ಯ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದರು. ಮುಂಜಾನೆ ಎದ್ದ ತಕ್ಷಣ ಆರಂಭದ ಕೆಲಸವೆಂದರೆ, ಮಾನವ ಮಲವಿಸರ್ಜನೆ ಮತ್ತು ಒಂದು ಬಗೆಯ ಕಸವನ್ನು (ಎಕ್ಸ್ಕ್ರೇಟಾ) ವನ್ನು ಹೊತ್ತು ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು.

ಈ ಪರಿಸ್ಥಿತಿಯು ಜಾತಿ ವ್ಯವಸ್ಥೆಯ ವಿನಾಶಕಾರಿ ಸ್ವರೂಪವನ್ನು ಜೀವಂತವಾಗಿ ಪ್ರತಿಬಿಂಬಿಸುತ್ತಿತ್ತು. ಅಲ್ಲಿ ಕೆಲವು ಉಪ-ಜಾತಿಗಳು ತಮ್ಮ ವೃತ್ತಿಯಾಗಿ ಅವಮಾನಕರ ಕೆಲಸವನ್ನು ಮಾಡುತ್ತಿದ್ದರು.

ಪಶ್ಚಿಮ ಜಿಲ್ಲೆಗಳಲ್ಲಿ, ಗಣನೀಯ ಸಂಖ್ಯೆಯ ಅರುಂಧತಿಯಾರು ಗಳು ಭೂರಹಿತ ಕೃಷಿ ಕಾರ್ಮಿಕರಾಗಿದ್ದರು. ದಲಿತ ಸಮುದಾಯದೊಳಗಿನ ಅಂತರ್ಜಾತಿ ವಿವಾಹಗಳು, ವಿಶೇಷವಾಗಿ ಅರುಂಧತಿಯಾರ್ ರನ್ನು ಒಳಗೊಂಡಂತೆ, ಹೆಚ್ಚಾಗಿ ಸ್ವೀಕಾರಾರ್ಹವಾಗಿಲ್ಲ, ಮತ್ತು ಈ ಕಾರಣಕ್ಕಾಗಿ ರಾಜ್ಯದಲ್ಲಿ ಕೆಲವು ಮರ್ಯಾದಾ ಹತ್ಯೆಗಳು ಸಂಭವಿಸಿದ್ದವು. ದಲಿತರಲ್ಲಿ ಅವರು ನಿಜವಾಗಿಯೂ ಕೀಳು ಅಸ್ಪೃಶ್ಯ ದಲಿತರಾಗಿದ್ದರು.

ಸಿಪಿಐ(ಎಂ) ಸಾಮಾನ್ಯವಾಗಿ ದಲಿತರು ಮತ್ತು ನಿರ್ದಿಷ್ಟವಾಗಿ ಅರುಂಧತಿಯಾರು ಜಾತಿ-ಮುಕ್ತ ಸಮಾಜದಲ್ಲಿ ಕಾರ್ಮಿಕ ವರ್ಗದ ಅತ್ಯಂತ ತುಳಿತಕ್ಕೊಳಗಾದ ವರ್ಗವನ್ನು ಪ್ರತಿನಿಧಿಸುತ್ತದೆ. ಜಾತಿ ದಮನದ ಸಮಸ್ಯೆಯನ್ನು ಪರಿಹರಿಸದೆ ವರ್ಗ ಹೋರಾಟಗಳಲ್ಲಿ ಅವರನ್ನು ಸಂಯೋಜಿಸಲು ಸಾಧ್ಯವಿಲ್ಲ ಎಂಬುದು ಸಿಪಿಎಂ ನ ತಿಳುವಳಿಕೆ. ಈ ಹಿನ್ನೆಲೆಯಲ್ಲಿ ಸಿಪಿಐ(ಎಂ) ಮತ್ತು ಟಿಎನ್ ಯುಇಎಫ್ ಎರಡೂ ಜಂಟಿಯಾಗಿ ಮೀಸಲಾತಿಗಾಗಿ ಉಪವರ್ಗೀಕರಣ ಸೇರಿದಂತೆ ತಮ್ಮ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗಾಗಿ ರಾಜಿರಹಿತ ಹೋರಾಟ ನಡೆಸಲು ನಿರ್ಧರಿಸಿದವು, ಈಗಲೂ ಈ ಹೋರಾಟ ‌ಮುಂದುವರಿಯುತ್ತಿದೆ.

ಸಿಪಿಐ(ಎಂ); ಡಿಎಸ್ಎಂಎಂ ಮತ್ತು ಟಿಎನ್ ಯು ಇಎಫ್ ವತಿಯಿಂದ ನಿರಂತರ ಹೋರಾಟಗಳು;

ಅರುಂಧತಿಯಾರ್ ಸಮುದಾಯದ ನಿಜವಾದ ಕುಂದುಕೊರತೆಗಳನ್ನು ಎತ್ತಿ ಹಿಡಿಯಲು ಅನೇಕ ಹೋರಾಟಗಳನ್ನು ಕೈಗೊಳ್ಳಲಾಯಿತು. ಕೆಲವನ್ನು ಉಲ್ಲೇಖಿಸುವುದಾದರೆ, ಸಾವಿರಾರು ಜನರು ಭಾಗವಹಿಸುವ ಜಿಲ್ಲಾ ಸಮ್ಮೇಳನಗಳು ನಡೆದವು. ಜೂನ್ 12, 2007 ರಂದು ಚೆನ್ನೈನಲ್ಲಿ ಒಂದು ಬೃಹತ್ ಪ್ರತಿಭಟನಾ ಮೆರವಣಿಗೆ ಯನ್ನು ಆಯೋಜಿಸಲಾಗಿತ್ತು, ಅಲ್ಲಿ 20,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ಉಪವರ್ಗೀಕರಣ ಹೋರಾಟದಲ್ಲಿ ಮಹತ್ವ ತಿರುವು ಪಡೆದುಕೊಂಡಿತು. ಈ ಹೋರಾಟಗಳಲ್ಲಿ ಅರುಂಧತಿಯರು ಮತ್ತು ಇತರ ದಲಿತ ಗುಂಪುಗಳು ಮಾತ್ರವಲ್ಲದೆ ಬೇರೆ ಇನ್ನಿತರೆ ಜಾತಿ ರೇಖೆಗಳಾದ್ಯಂತ ಗಮನಾರ್ಹ ಸಂಖ್ಯೆಯ ದುಡಿಯುವ ಜನರು ಭಾಗವಹಿಸಿದರು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಕಲೈಂಜರ್ ಕರುಣಾನಿಧಿ ನಮ್ಮನ್ನು ಮಾತುಕತೆಗೆ ಆಹ್ವಾನಿಸಿದ್ದರು. ಎನ್.ವರದರಾಜನ್, ಕೆ.ವರದರಾಜನ್, ಪಿ.ಸಂಪತ್, ಪಿ.ಶುಣ್ಮುಗಂ, ಮತ್ತು ಎಸ್.ಕೆ. ಮಹೇಂದ್ರನ್, ಅರುಂಧತಿಯಾರ್ ಸಂಘಟನೆಗಳ ಮುಖಂಡರಾದ ಕೆ ಜಕ್ಕಯಾನ್ ಮತ್ತು ಆರ್ ಅಥಿಯಮಾನ್ ಈ ಚರ್ಚೆಯಲ್ಲಿ ಭಾಗವಹಿಸಿದ್ದರು.

ಮನವಿಗಳನ್ನು ಆಲಿಸಿದ ಮುಖ್ಯಮಂತ್ರಿಗಳು ಉಪವರ್ಗೀಕರಣ ಸೇರಿದಂತೆ ಹಲವು ಬೇಡಿಕೆಗಳನ್ನು ಒಪ್ಪಿಕೊಂಡರು. ಅದೇ ದಿನ, ಅರುಂಧತಿಯರ ಕಲ್ಯಾಣವನ್ನು ಸುಧಾರಿಸಲು ನೈರ್ಮಲ್ಯ ಕಾರ್ಮಿಕರ ಕಲ್ಯಾಣ ಮಂಡಳಿಯ ರಚನೆಯನ್ನು ಘೋಷಿಸಲಾಯಿತು. TNUEF ನ ನಾಲ್ಕು ಪ್ರತಿನಿಧಿಗಳು ಸೇರಿದ್ದಾರೆ.

ರಾಜ್ಯ ಸರ್ಕಾರವು ತಕ್ಷಣವೇ ನ್ಯಾಯಮೂರ್ತಿ ಜನಾರ್ಧನಂ ಸಮಿತಿಯನ್ನು ಸ್ಥಾಪಿಸುವ ಮೂಲಕ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಅರುಂಧತಿಯಾರ್ ಸಮುದಾಯದ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ಡೇಟಾವನ್ನು ಸಂಗ್ರಹಿಸಲು ನಿರ್ದೇಶಿಸಿತು. ಒಂಬತ್ತು ತಿಂಗಳೊಳಗೆ ವರದಿ ಸಲ್ಲಿಸಲಾಗಿದೆ. CPI(M) ಮತ್ತು TNUEF ಆಯೋಗಕ್ಕೆ ಹೆಚ್ಚಿನ ಪ್ರಮಾಣದ ಡೇಟಾವನ್ನು ಪ್ರಸ್ತುತ ಪಡಿಸಿದವು, ಮತ್ತು
ಹಲವಾರು ಅರುಂಧತಿಯಾರ್ ಸಂಘಟನೆಗಳು ಸಹ ತಮ್ಮ ‌ನಿಲುವುಗಳನ್ನು ಸಲ್ಲಿಸಿದ್ದರು.

ಜನಾರ್ದನಂ ಸಮಿತಿ ಸಲ್ಲಿಸಿದ ವರದಿಯು ಸುಪ್ರೀಂ ಕೋರ್ಟ್ ಪ್ರಸ್ತುತ ತೀರ್ಪಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಜನಾರ್ದನ ಸಮಿತಿ ತನ್ನ ವರದಿಯಲ್ಲಿ
ತಮಿಳುನಾಡಿನಲ್ಲಿ ದಲಿತರಿಗೆ 18 ಪ್ರತಿಶತ ಮೀಸಲಾತಿಯಲ್ಲಿ 3 ಪ್ರತಿಶತದಷ್ಟು ಒಳ ಮೀಸಲಾತಿಯನ್ನು ಶಿಫಾರಸು ಮಾಡಿತು ಎಂಬುದನ್ನು ನಾವಿಲ್ಲಿ‌ ಗಮನಿಸಬೇಕು.

ಸರ್ವಪಕ್ಷ ಸಭೆ ನಡೆಸಿದ್ದು, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಅರುಂಧತಿಯಾರ್ ಸಮುದಾಯಕ್ಕೆ ಶೇ 3 ರಷ್ಟು ಒಳ ಮೀಸಲಾತಿಗೆ ಮುಖ್ಯಮಂತ್ರಿ ನಿರ್ಣಯ ಮಂಡಿಸಿದರು. ಪುತಿಯಾ ತಮಿಳಗಂ’ನ ಕೃಷ್ಣಸಾಮಿ ಹೊರತುಪಡಿಸಿ ಎಲ್ಲಾ ರಾಜಕೀಯ ನಾಯಕರು ಈ ನಿರ್ಣಯದ ಕ್ರಮವನ್ನು ಬೆಂಬಲಿಸಿದರು. ವಿಸಿಕೆ ನಾಯಕ ತೋಲ್ ಎಂಬುವವರು, ಅಂದರೆ, ತಿರುಮಾವಳವನ್ ಸಹ ಉಪ-ವರ್ಗೀಕರಣವನ್ನು ಬೆಂಬಲಿಸಿದರು. ನಂತರ, ಆಗಿನ ಸ್ಥಳೀಯ ಆಡಳಿತ ಸಚಿವರು ಮತ್ತು ಹಾಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದರು, ಅಲ್ಲಿ ಅದು ಬಹುಮತದೊಂದಿಗೆ ಅಂಗೀಕರಿಸಲ್ಪಟ್ಟಿತು, ಅಂತಿಮವಾಗಿ ಅದು ಕಾಯ್ದೆಯಾಯಿತು.

ನ್ಯಾಯಾಲಯದ ಪ್ರಕರಣಗಳು

ಉಪ-ವರ್ಗೀಕರಣ ಮತ್ತು ಒಳ ಮೀಸಲಾತಿ ಕಳೆದ 15 ವರ್ಷಗಳಲ್ಲಿ ಅರುಂಧತಿಯಾರ್ ಸಮುದಾಯದವರ ಜೀವನವನ್ನು ಗಣನೀಯವಾಗಿ ಸುಧಾರಿಸಿದೆ. ಆದರೆ, ಕೃಷ್ಣಸಾಮಿ ಸೇರಿದಂತೆ ಕೆಲವು ವ್ಯಕ್ತಿಗಳು ಈ ಕಾಯ್ದೆಯ ವಿರುದ್ಧ ಮದ್ರಾಸ್ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿದರು.  ಮದ್ರಾಸ್ ಹೈಕೋರ್ಟ್ ಈ ಪ್ರಕರಣವನ್ನು ಈಗಾಗಲೇ ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿರುವ ವಿವಿಧ ರಾಜ್ಯಗಳ ಇದೇ ರೀತಿಯ ಪ್ರಕರಣಗಳೊಂದಿಗೆ ಸಂಯೋಜಿಸಲು ಸೂಚಿಸಿದೆ. ಮುಖ್ಯವಾಗಿ, ಮಧ್ಯಂತರ ಅವಧಿಯಲ್ಲಿ, ಮದ್ರಾಸ್ ಹೈಕೋರ್ಟ್ ಕೂಡ ಈ ಕಾಯಿದೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು.

ಹಲವು ವರ್ಷಗಳ ಮತ್ತು ವ್ಯಾಪಕವಾದ ಚರ್ಚೆಗಳ ನಂತರ, ಸುಪ್ರೀಂ ಕೋರ್ಟ್ ಈಗ ಪ್ರಕರಣವನ್ನು ಆಲಿಸಿದೆ ಮತ್ತು ಬಹುಮತದ ತೀರ್ಪಿನ ಮೂಲಕ ಉಪ-ವರ್ಗೀಕರಣವು ಕಾನೂನುಬದ್ಧವಾಗಿದೆ ಮತ್ತು ರಾಜ್ಯ ಸರ್ಕಾರಗಳು ದತ್ತಾಂಶದ ಆಧಾರದ ಮೇಲೆ ಉಪ-ವರ್ಗೀಕರಿಸುವ ಹಕ್ಕನ್ನು ಹೊಂದಿದೆ ಎಂದು ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ, ಸಿಪಿಐ(ಎಂ) ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿತು. ಮೊದಲು ಎನ್ ವರದರಾಜನ್ ಮತ್ತು ನಂತರ ಜಿ ರಾಮಕೃಷ್ಣನ್ ಅವರ ಹೆಸರಿನಲ್ಲಿ. ಹಾಗೂ ಪಿ ಸಂಪತ್ ಟಿಎನ್ ಯುಇಎಫ್ ಹೆಸರಿನಲ್ಲಿ ಕೂಡ ಮಧ್ಯಪ್ರವೇಶಿಸಿದರು. ನಾವು ಕೊನೆಯವರೆಗೂ ಕಾನೂನು ಹೋರಾಟಕ್ಕೆ ಬದ್ಧರಾಗಿದ್ದೇವೆ ಎಂಬುದನ್ನು ಎತ್ತಿ ಹಿಡಿಯಲಾಗಿದೆ.

ಶೇ.3 ರಷ್ಟು ಒಳ ಮೀಸಲಾತಿಯ ನಿರ್ಧಾರವು ತಮಿಳುನಾಡಿನಲ್ಲಿ ಅರುಂಧತಿಯಾರ್ ಸಮುದಾಯಕ್ಕೆ ಮಾತ್ರವಲ್ಲದೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಬದ್ಧವಾಗಿರುವ ಮತ್ತು ಜಾತಿ ತಾರತಮ್ಯವನ್ನು ವಿರೋಧಿಸುವ ಎಲ್ಲಾ ಪ್ರಜಾಪ್ರಭುತ್ವ ಮತ್ತು ಪ್ರಗತಿಪರ ಜನರಿಗೆ ಅಪಾರ ಸಂತೋಷವನ್ನು ತಂದಿದೆ. ಡಿಎಸ್ ಎಂಎಂ/ ಡಿಎಚ್ಎಸ್ /ಟಿಎನ್ ಯುಇಎಫ್ ಈ ತೀರ್ಪನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತದೆ. ಈ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಕಂಡುಬಂದಿಲ್ಲ ಎಂಬ ಅಂಶವನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

ಕರ್ನಾಟಕದಲ್ಲಿ ನ್ಯಾ.ಮೂರ್ತಿ ಸದಾಶಿವ ಆಯೋಗವನ್ನು ಸಾರ್ವಜನಿಕವಾಗಿ ಬಹಿರಂಗ‌ ಪಡಿಸಿ, ವಿಮರ್ಶೆಗೆ‌ ಒಳಪಡಿಸಬೇಕು‌. ಆನಂತರ ಒಳಮೀಸಲಾತಿ ‌ಮತ್ತು ಉಪವರ್ಗೀಕರಣವನ್ನು ಪುನರ್ ರೂಪಿಸಿ, ಅದಕ್ಕನುಗುಣವಾಗಿ ಶೇಕಡಾವಾರು ಉಪವರ್ಗೀಕರಿಸಿ
ಅನುಷ್ಠಾನಕ್ಕೆ ತರಬೇಕು ಎಂದು ಡಿಎಚ್ಎಸ್ ನ ಆಗ್ರಹವಾಗಿದೆ.

ದಲಿತ ಕೆನೆ ಪದರ ( ಕ್ರೀಮಿಲೇಯರ್) ಮೀಸಲಾತಿ‌ ಮುಂದುವರಿಯಲಿ; ಡಿಎಸ್ಎಂಎಂ

ಉಪ ವರ್ಗೀಕರಣ ಕುರಿತ ತೀರ್ಪು ನೀಡಿದ ನ್ಯಾಯಾಧೀಶರ ಪೈಕಿ ನಾಲ್ವರು ದಲಿತ ಮತ್ತು ಬುಡಕಟ್ಟು ಜನರಿಗೆ ಅವರ ಆರ್ಥಿಕ ಸ್ಥಿತಿಗತಿಗಳ ಆಧಾರದ ಮೇಲೆ ಕೆನೆ ಪದರ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂದರೆ, ಕೆನೆಪದರ’ವನ್ನು ಮೀಸಲಾತಿ ಯಿಂದ ಹೊರಗಿಡ ಬೇಕು ಎಂಬರ್ಥ. ಎಸ್ಸಿ/ಎಸ್ಟಿಗಳಿಗೆ ಸಂಬಂಧಿಸಿದಂತೆ ಡಿಎಸ್‌ಎಂಎಂ ಈ ನಾಲ್ಕು ‌ನ್ಯಾಯವಾದಿಗಳ ಅಭಿಪ್ರಾಯವನ್ನು ಒಪ್ಪುವುದಿಲ್ಲ ಇದು ಸ್ವೀಕಾರಾರ್ಹವಲ್ಲ ಎಂದು ದೃಡಪಡಿಸುತ್ತವೆ. ದಲಿತ ಕೆನೆ ಪದರ ವನ್ನು ಒಬಿಸಿ ರೀತಿಯಲ್ಲಿ ಪರಿಗಣಿಸುವುದು ಸೂಕ್ತವಲ್ಲ. ಕೆನಪದರ ಮುಂದುವರಿಯಲಿ ಎಂದು ಸ್ಪಷ್ಟ ಗೊಳಿಸಲಾಗಿದೆ. ಅಸ್ಪೃಶ್ಯತೆ ಸೇರಿದಂತೆ ಜಾತಿ ವ್ಯವಸ್ಥೆಯ ಕೆಟ್ಟ ಬಲಿಪಶುಗಳಾದ ದಲಿತ ಮತ್ತು ಬುಡಕಟ್ಟು ಜನರಿಗೆ ಮೀಸಲಾತಿಗೆ ಕೆನೆಪದರವನ್ನು ಅನ್ವಯಿಸಬಾರದು ಎಂಬುದು ಸರಿಯಾದ ನಿಲುವು. ಇದರ‌ ವಿರುದ್ದ ಪ್ರಜಾಸತ್ತಾತ್ಮಕ ಚಳವಳಿಗಳೂ ಕೂಡ ಧ್ವನಿ ಎತ್ತಬೇಕು ಎಂಬುದು ಡಿಎಸ್‌ಎಂಎಂ ನ‌ ಒತ್ತಾಯವಾಗಿದೆ.

ಡಿಎಸ್ ಎಂಎಂ/ ಡಿಎಚ್ಎಸ್ ನಡೆಸಿದ ಹೋರಾಟಗಳಲ್ಲಿ ಪಾಲ್ಗೊಂಡ ಕಾರ್ಯಕರ್ತರಿಗೆ, ಅರುಂಧತಿಯಾರ್ ಸಮುದಾಯ, ಅವರ ಸಂಘಟನೆಗಳಿಗೆ, ಕಾನೂನು ಹೋರಾಟದಲ್ಲಿ ತೊಡಗಿರುವ ವಕೀಲರಿಗೆ ಮತ್ತು ಅರುಂಧತಿಯರಿಗೆ ಮೀಸಲಾತಿಯ ಉಪವರ್ಗೀಕರಣಕ್ಕಾಗಿ ತೀವ್ರವಾಗಿ ಹೋರಾಡಿದ ಪ್ರಜಾಸತ್ತಾತ್ಮಕ ಚಳುವಳಿಗಳನ್ನು ಡಿಎಸ್‌ಎಂಎಂ ಅಭಿನಂದಿಸುತ್ತದೆ. ಡಿಎಂಕೆ ಸರ್ಕಾರವು ಉಪ-ವರ್ಗೀಕರಣವನ್ನು ಕಾಯಿದೆಯನ್ನಾಗಿ ಪರಿವರ್ತಿಸುವ ಮೂಲಕ ಪ್ರಸ್ತಾಪಿಸಿ ಅನುಷ್ಠಾನಗೊಳಿಸಿದ್ದಕ್ಕಾಗಿ ಅವರನ್ನು ಡಿಎಸ್‌ಎಂಎಂಶ್ಲಾಘಿಸುತ್ತದೆ. DSMM ಮತ್ತು ವರ್ಗ ಮತ್ತು ಸಾಮೂಹಿಕ ಸಂಘಟನೆಗಳು ಜಾತಿ ವ್ಯವಸ್ಥೆ ಮತ್ತು ದೌರ್ಜನ್ಯಗಳ ವಿರುದ್ಧ ಹೋರಾಟದಲ್ಲಿ ಅಚಲವಾಗಿ ಉಳಿಯುತ್ತವೆ. ಆ‌ ನಿಟ್ಟಿನಲ್ಲಿ ಕಾರ್ಮಿಕ ವರ್ಗದ ದೃಷ್ಟಿಕೋನಕ್ಕೆ ದೃಢವಾದ ಬದ್ಧತೆ ಇರುತ್ತದೆ. ಅಚಲ ಬದ್ದತೆಯುಳ್ಳ ಹೋರಾಟಕ್ಕೆ ಎಂದಿಗೂ ‌ಜಯ‌ ಲಭಿಸುತ್ತದೆ. ಹಾಗಾಗಿ, ಜಾತಿ ವಿನಾಶ ನಮ್ಮ ಮೂಲ ಗುರಿ ಆ ದಿಕ್ಕಿನಲ್ಲಿ ‌ಮತ್ತಷ್ಟು ಅಚಲವಾಗಿ‌ ಮುನ್ನಡೆಯೋಣ.

ಇದನ್ನೂ ನೋಡಿ: ನಾದಧ್ವನಿ | ‘ಹಿಂದೆಲ್ಲೋ ಇಲ್ಲಿ ನಾಡಿರುತ್ತಿತ್ತು.. ಆ ನಾಡಲಿ ಹೊಳೆ ಇರುತ್ತಿತ್ತು; Janashakthi Media

Donate Janashakthi Media

Leave a Reply

Your email address will not be published. Required fields are marked *