ಶ್ರೀಲಂಕಾದಲ್ಲಿ ಹೆಚ್ಚಿದ ಆರ್ಥಿಕ ಬಿಕ್ಕಟ್ಟು : ಪೆಟ್ರೋಲ್‌ ದರ 254 ರೂ, 1 ಪೌಂಡ್‌ ಬ್ರೆಡ್‌ ಬೆಲೆ 130 ರೂ

ಕೊಲಂಬೊ :  ಸಾಲದ ಸುಳಿಯಲ್ಲಿ ಸಿಲುಕಿರುವ ನೆರೆಯ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಕೊರತೆಯಿಂದಾಗಿ ದಿನನಿತ್ಯ ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ದೇಶಗಳ ಭಾರೀ ಸಾಲದ ಅಡಿಯಲ್ಲಿ ಸಿಲುಕಿರುವ ಶ್ರೀಲಂಕಾ, ಬಹುತೇಕ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಅಲ್ಲಿನ ಜನರು ಪರ್ವತವನ್ನು ಮುರಿಯುವ ರೀತಿಯಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.  ಇಲ್ಲಿ ಸಾಮಾನ್ಯ ಬಳಕೆಯ ವಸ್ತುಗಳ ಬೆಲೆಗಳು ಏಳು ಪಟ್ಟು ಹೆಚ್ಚಳವಾಗಿದೆ.

ಬ್ರೆಡ್ ಮತ್ತು ಹಿಟ್ಟಿನ ಬೆಲೆ ಅತ್ಯಧಿಕ ಮಟ್ಟದಲ್ಲಿದೆ : ಅಮೇರಿಕಾದ ಡಾಲರ್‌ ಎದರು ಶ್ರೀಲಂಕಾ ದೇಶದ  ರೂಪಾಯಿ ಮೌಲ್ಯ ಕುಸಿದ ಕಾರಣ , ಶುಕ್ರವಾರ ಹಲವಾರು ಅಗತ್ಯ ವಸ್ತುಗಳ ಬೆಲೆಗಳು ಗಮನಾರ್ಹ ಏರಿಕೆ ದಾಖಲಿಸಿವೆ. ಆಲ್ ಸಿಲೋನ್ ಬೇಕರಿ ಮಾಲೀಕರ ಸಂಘವು ಬ್ರೆಡ್ ಪ್ಯಾಕೆಟ್‌ನ ಬೆಲೆಯನ್ನು 30 ರೂ  ಹೆಚ್ಚಿಸಿದೆ ಮತ್ತು ಈಗ ಬ್ರೆಡ್ ಪ್ಯಾಕೆಟ್‌ನ ಹೊಸ ಬೆಲೆ 110 ರಿಂದ 130 (LKR) ರೂಪಾಯಿಗಳ ನಡುವೆ ಇದೆ ಎಂದು ಲಂಕಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ದೇಶದ ಅತಿದೊಡ್ಡ ಗೋಧಿ ಆಮದುದಾರ ಪ್ರೈಮಾ ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆಯನ್ನು 35 ( LKR) ರೂ ಹೆಚ್ಚಿಸಿದೆ.

ಪೆಟ್ರೋಲ್ ಬೆಲೆ ಲೀಟರ್‌ಗೆ 254 ರೂ : ಏತನ್ಮಧ್ಯೆ, ದೇಶದ ಎರಡನೇ ಅತಿ ದೊಡ್ಡ ಚಿಲ್ಲರೆ ಇಂಧನ ವಿತರಕ ಲಂಕಾ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗುರುವಾರ ಮಧ್ಯರಾತ್ರಿ ಡೀಸೆಲ್‌ನ ಮಾರಾಟ ಬೆಲೆಯನ್ನು ಲೀಟರ್‌ಗೆ 75  ರೂ(LKR) ಮತ್ತು ಪೆಟ್ರೋಲ್‌ಗೆ 50ರೂ  (LKR) ರಷ್ಟು ಹೆಚ್ಚಿಸಿದೆ. ಲಂಕಾ ಇಂಡಿಯಾ ಆಯಿಲ್ ಕಾರ್ಪೊರೇಷನ್ ಇಂಧನ ಬೆಲೆ ಏರಿಕೆಯಿಂದ ಪ್ರಯಾಣ ದರದಲ್ಲಿ ಭಾರಿ ಏರಿಕೆಯಾಗಲಿದೆ ಎಂದು ತ್ರಿಚಕ್ರ ವಾಹನ ಮತ್ತು ಬಸ್ ಮಾಲೀಕರ ಸಂಘ ಇಂಧನ ಸಬ್ಸಿಡಿಗೆ ಒತ್ತಾಯಿಸಿದೆ. ಅಖಿಲ ಸಿಲೋನ್ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಂಜನಾ ಪ್ರಿಯಾಂಜಿತ್ ಕನಿಷ್ಠ ಬಸ್ ದರವು 30 ರಿಂದ 35 ಎಲ್‌ಕೆಆರ್ ನಡುವೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಖಾಸಗಿ ಬಸ್ ಮಾಲೀಕರಿಗೆ ಡೀಸೆಲ್ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.

ವಿಮಾನಯಾನ ದರಗಳು ಶೇ 27ರಷ್ಟು ಏರಿಕೆಯಾಗಿದೆ : ವಿಮಾನಯಾನ ಟಿಕೆಟ್ ದರವನ್ನು ಶೇ.27ರಷ್ಟು ಹೆಚ್ಚಿಸಲಾಗಿದೆ ಎಂದು ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಜನರಿಗೆ ಬೇಕಾದ ಮೂಲ ಸೌಲಭ್ಯಗಳು ಸಿಗದ ಕಾರಣ ಜನ ಇನ್ನಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ವಿದೇಶಿ ವಿನಿಮಯದ ಕೊರತೆಯ  ಕಾರಣಕ್ಕಾಗಿ ಶ್ರೀಲಂಕಾವು ಆಹಾರ, ಔಷಧ, ಇಂಧನ ಮತ್ತು ಇತರ ಅಗತ್ಯ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗದ ಹಿನ್ನಲೆಯಲ್ಲಿ ಇನ್ನಷ್ಟು ಸಂಕಷ್ಟಗಳು ಎದುರಾಗಬಹುದು.

ಸಾಲದ ಬಲೆಯಲ್ಲಿ ಸಿಲುಕಿರುವ ಶ್ರೀಲಂಕಾದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅಲ್ಲಿನ ಜನ ಸರಕಾರದ ವಿರುದ್ಧ ದಂಗೆ ಎದ್ದಿದ್ದಾರೆ.  ವಿದೇಶಿ ಮೀಸಲು ಕಡಿಮೆಯಾಗಲು, ಆಹಾರ ಪದಾರ್ಥಗಳ ಬೆಲೆ ಹೆಚ್ಚಳ, ಹಾಲಿನ ಪುಡಿ, ಅಡುಗೆ ಅನಿಲ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಗೆ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ನೀತಿಗಳೇ ಕಾರಣ ಎಂದು ವಿರೋಧ ಪಕ್ಷವಾದ ಯುನೈಟೆಡ್ ಪೀಪಲ್ಸ್ ಫೋರ್ಸ್  ಆರೋಪಿಸಿದೆ.

Donate Janashakthi Media

Leave a Reply

Your email address will not be published. Required fields are marked *