ಪುದುಚೇರಿ: ಕೇಂದ್ರ ಸರಕಾರವು ಅಲೋಪಥಿ ಮತ್ತು ಆಯುರ್ವೇದಗಳನ್ನು ಒಳಗೊಂಡ ಒಂದೇ ಕೋರ್ಸ್ ಪರಿಚಯಿಸಲು ಯೋಜನೆವೊಂದು ರೂಪಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವ ಪ್ರತಾಪ್ ರಾವ್ ಜಾಧವ್ ಹೇಳಿದ್ದಾರೆ.
ಎಂಬಿ ಬಿಎಸ್ ಮತ್ತು ಬಿಎಎಂಎಸ್(ಆಯುರ್ವೇದಿಕ್ ಮೆಡಿಸನ್ ಮತ್ತು ಸರ್ಜರಿ) ಒಳಗೊಂಡ ಸಂಯೋಜಿತ ಕೋರ್ಸ್ ಅನ್ನು ಪುದುಚೇರಿಯ ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನ ಸಂಸ್ಥೆ(ಜಿಐಪಿಎಂಇಆರ್)ಯಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ನೀಟ್-ಪಿಜಿ 2025: ಪರೀಕ್ಷೆ ಒಂದೇ ಪಾಳಿಯಲ್ಲಿ ನಡೆಸಬೇಕು – ಸುಪ್ರೀಂ ಕೋರ್ಟ್ ಆದೇಶ
ಸದ್ಯಕ್ಕೆ ಈ ಕೋರ್ಸ್ ಇನ್ನೂ ಆರಂಭಿಕ ಹಂತದಲ್ಲಿದೆ. ಈ ಬಗ್ಗೆ ಪಠ್ಯಕ್ರಮ ರೂಪಿಸುವ ಕೆಲಸ ನಡೆಯುತ್ತಿದೆ. ಇದಾದ ಬಳಿಕ ಹೊಸ ಕೋರ್ಸ್ ಆರಂಭಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ನೋಡಿ: ಗಾಂಧೀ ಸೆಂಟರ್ ಅಫ್ ಸೈನ್ಸ್ಗೆ ಆಹ್ವಾನ ನೀಡಿದ್ದೇ ಡಾ. ಎಸ್. ಬಾಲಚಂದ್ರ ರಾವ್ – ಪಾಲಹಳ್ಳಿ ವಿಶ್ವನಾಥ್