ಉತ್ತರ ಪ್ರದೇಶ: SSP ಕಚೇರಿ ಎದುರು ಟೀ- ಮಾರುವ ಮೂಲಕ ಅಮಾನತುಗೊಂಡ ಇನ್ ಸ್ಪೆಕ್ಟರ್ ಒಬ್ಬರು ತನಗಾದ ಅನ್ಯಾಯದ ವಿರುದ್ಧ ವಿಶೇಷ ಪ್ರತಿಭಟನೆ ಮಾಡಿದ್ದಾರೆ. ಇದೀಗ ಈ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶ
ಇಲ್ಲಿನ ಝಾನ್ಸಿ ಜಿಲ್ಲೆಯ ಠಾಣೆಯೊಂದರಲ್ಲಿ ಇನ್ ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೋಹಿತ್ ಯಾದವ್ ಎನ್ನುವ ಪೊಲೀಸ್ ತಾನಗಾದ ಅನ್ಯಾಯ ಹೇಳಿಕೊಳ್ಳುವ ಸಲುವಾಗಿ ಎಸ್ಎಸ್ಪಿ ಕಚೇರಿ ಎದುರು ಟಿ- ಶಾಪ್ ತೆರೆದು ಟೀ ಮಾರಾಟ ಮಾಡಿದ್ದಾನೆ.ಇತ ಟೀ ಶಾಪ್ ತೆರೆದಿರುವುದು ವಿಶೇಷವೇನಲ್ಲ.
ಅದ್ರೆ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಉತ್ತರ ಪ್ರದೇಶ
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ: ಅನಧಿಕೃತವಾಗಿ ಸಾಲ ಕೊಟ್ಟರೆ ಮನ್ನಾ, 10 ವರ್ಷ ಶಿಕ್ಷೆ
ಇತನ ವಿರುದ್ಧದ ಪ್ರಕರಣ ಏನು?
ಇನ್ ಸ್ಪೆಕ್ಟರ್ ಮೋಹಿತ್ ಯಾದವ್ ಜ.15ರಂದು ರಜೆ ಕೇಳಲು ಆರ್ಐ(ಕೌಂಟರ್ ಇನ್ಸ್ಪೆಕ್ಟರ್) ಬಳಿ ತೆರಳಿದಾಗ ರಜೆ ಬಗ್ಗೆ ಇಬ್ಬರ ನಡುವೆ ಜಗಳವಾಗಿದೆ. ವಿವಾದದಲ್ಲಿ ಆರ್ಐ ಇನ್ ಸ್ಪೆಕ್ಟರ್ ಮೋಹಿತ್ ಯಾದವ್ ಅವರ ಜತೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಖಾಸಗಿ ಅಂಗಕ್ಕೆ ಒದ್ದು ರಜೆ ನೀಡಲ್ಲ ಎಂದು ಕಳುಹಿಸಿದ್ದಾರೆ.
ಈ ವಿವಾದದಲ್ಲಿ ಇನ್ ಸ್ಪೆಕ್ಟರ್ ಮೋಹಿತ್ ಅಮಾನತುಗೊಂಡಿದ್ದಾರೆ. ಹೀಗಾಗಿ, ಮೋಹಿತ್ ಈ ವಿವಾದಲ್ಲಿ ನನ್ನ ತಪ್ಪಿಲ್ಲ ಎಂದು ಹೇಳಿಕೊಂಡಿದ್ದರು. ಆದರೂ ಮೋಹಿತ್ನನ್ನು ಅಮಾನತಿನಲ್ಲಿಡಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ, ನನ್ನ ತಪ್ಪಿಲ್ಲ ಎಂದು ಮತ್ತೊಮ್ಮೆ ಹೇಳುವ ಉದ್ದೇಶದಿಂದ ಎಸ್ಎಸ್ಪಿ ಕಚೇರಿ ಎದುರು ಟೀ ಮಾರಾಟ ಮಾಡಿ ಪ್ರತಿಭಟನೆ ಮಾಡಿದ್ದಾನೆ.
ನನಗೆ ಸಂಬಳ ಬೇಡ, ಟೀ ಮಾರಿ ಕುಟುಂಬ ಸಾಕುವೆ
ನನಗೆ ಸಂಬಳ ಬೇಡ ಎಂದು ಡಿಐಜಿ ಕಚೇರಿಗೆ ಪತ್ರ ಬರೆದಿದ್ದೇನೆ. ನನ್ನ ಕುಟುಂಬವನ್ನು ಪೋಷಿಸಲು ಉದ್ದೇಶದಿಂದ ಟಿ-ಶಾಪ್ ತೆರೆದಿದ್ದೇನೆ. ಅಲ್ಲದೆ, ನನಗೆ ಆದ ಅನ್ಯಾಯದ ಬಗ್ಗೆ ತನಿಖಾಧಿಕಾರಿಗೆ ಪತ್ರ ಬರೆದಿದ್ದೇನೆ. ಇದಕ್ಕೆ ಯಾವುದೇ ಸ್ಪಂದನೆ ಇಲ್ಲ. ನನ್ನ ಮತ್ತು ಪತ್ನಿಯ ಪೋನ್ ಕದ್ದಾಲಿಕೆ ಮಾಡಲಾಗಿದೆ. ನನ್ನ ಮಕ್ಕಳು ಶಾಲೆಗೆ ಹೊಗುತ್ತಾರೆ. ಅಂತಹ ಸಂದರ್ಭದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂದು ಅಮಾನತುಗೊಂಡ ಇನ್ ಸ್ಪೆಕ್ಟರ್ ಮೋಹಿತ್ ಯಾದವ್ ಆರೋಪಿಸಿದ್ದಾರೆ.
ಇದನ್ನೂ ನೋಡಿ: ನಾನು ಹೀಗೆ ಇರೋದು, ಇದನ್ನೆ ತಿನ್ನೋದು ಎಂದು ಗಟ್ಟಿಯಾಗಿ ಹೇಳಬೇಕಿದೆ – ಬಂಜಗೆರೆ ಜಯಪ್ರಕಾಶ Janashakthi Media