ಪಿರಿಯಡ್ಸ್ ಆಗಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿನಿಗೆ ಕ್ಲಾಸ್ ರೂಂ ಹೊರಗೆ ಪರೀಕ್ಷೆ ಬರೆಸಿದ ಶಾಲಾ ಆಡಳಿತ ಮಂಡಳಿ

​ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಿನಾಥುಕಡವು ಸಮೀಪದ ಖಾಸಗಿ ಶಾಲೆಯಲ್ಲಿ, ಪಿರಿಯಡ್ಸ್‌ನ ಸಮಯದಲ್ಲಿ 8ನೇ ತರಗತಿಯ ದಲಿತ ವಿದ್ಯಾರ್ಥಿನಿಯನ್ನು ತರಗತಿ ಕೊಠಡಿಯ ಹೊರಗೆ ಪರೀಕ್ಷೆ ಬರೆಯಲು ಕೂರಿಸಿರುವ ಘಟನೆ ನಡೆದಿದೆ.

ಸೆಂಗುಟ್ಟೈಪಾಳ್ಯಂ ಗ್ರಾಮದ ಸ್ವಾಮಿ ಚಿದ್ಭವಂದ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ:-ಎಲ್ಲಾ ಗ್ರಾಮಗಳು ಪೋಡಿಮುಕ್ತ, ಕೆರೆ-ಕಟ್ಟೆ ಒತ್ತುವರಿ ತೆರವುಗೊಳಿಸಿ : ಸಿದ್ದರಾಮಯ್ಯ ಖಡಕ್‌ ಸೂಚನೆ

ಏಪ್ರಿಲ್ 5ರಂದು ವಿದ್ಯಾರ್ಥಿನಿಗೆ ಪಿರಿಯಡ್ಸ್ ಆರಂಭವಾಗಿದ್ದು, ಶಾಲಾ ಆಡಳಿತವು ಏಪ್ರಿಲ್ 7ರಂದು ವಿಜ್ಞಾನ ಮತ್ತು ಏಪ್ರಿಲ್ 9ರಂದು ಸಮಾಜ ವಿಜ್ಞಾನ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಿತು. ಏಪ್ರಿಲ್ 7ರಂದು ವಿಜ್ಞಾನ ಪರೀಕ್ಷೆಯಲ್ಲಿ ತರಗತಿ ಕೊಠಡಿಯ ಹೊರಗೆ ಕೂರಿಸಿದ್ದನ್ನು ವಿದ್ಯಾರ್ಥಿನಿ ತಾಯಿಗೆ ತಿಳಿಸಿದಳು.

ಇದನ್ನೂ ಓದಿ:-ನೀರಾವರಿ ಇಲಾಖೆ, ಪಿಡಬ್ಲ್ಯೂ ಇಲಾಖೆಯಲ್ಲಿ ಸಚಿವರ ಪುತ್ರರ ದರ್ಬಾರ್ – ಗುತ್ತಿಗೆದಾರರ ಆರೋಪ

ಮುಂದಿನ ಪರೀಕ್ಷೆಯಲ್ಲಿ ಸಹ ಇದೇ ಸ್ಥಿತಿ ಕಂಡುಬಂದಾಗ, ತಾಯಿ ಈ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು, ಇದರಿಂದ ಸಾರ್ವಜನಿಕ ಆಕ್ರೋಶ ಹೆಚ್ಚಾಯಿತು. ಕೊಯಮತ್ತೂರು ಜಿಲ್ಲಾಧಿಕಾರಿ ಪವನಕುಮಾರ್ ಜಿ. ಗಿರಿಯಪ್ಪನವರ್ ಅವರು ಈ ವಿಷಯದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ವಿವರವಾದ ವರದಿ ಸಲ್ಲಿಸಲು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *