ರೈತರ ಟ್ರ್ಯಾಕ್ಟರ್ ರ್‍ಯಾಲಿ ಮುಂದೂಡಿಕೆ- ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ಗಡುವು ನೀಡಿದ ಎಸ್‌ಕೆಎಂ

ನವದೆಹಲಿ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು​ ಪಡೆಯುವ ಮಸೂದೆ ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಅಧಿವೇಶನದ ಮೊದಲ ದಿನದಂತೆ ಮಂಡನೆಯಾಗಲಿದೆ. ಗುರುನಾನಕ್‌ ಜಯಂತಿ ದಿನದಂದು ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವುದಾಗಿ ಘೋಷಣೆ ಮಾಡಿದ ನಂತರ ಸಂಸತ್ತಿನಲ್ಲಿ ಕಾಯ್ದೆಗಳು ವಾಪಸ್ಸು ಆಗುವವರೆಗೂ ರೈತ ಆಂದೋಲನ ಮುಂದುವರೆಯುತ್ತದೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಸ್ಪಷ್ಟಪಡಿಸಿತ್ತು.

ಸಿಂಘು ಗಡಿಯಲ್ಲಿ ಇಂದು ನಡೆದ ಸಂಯುಕ್ತ ಕಿಸಾನ್​ ಮೋರ್ಚಾ ರೈತರ ಸಭೆಯು ಇಂದು ಸೇರಲಾಗಿದ್ದು, ಆರು ಪ್ರಮುಖ ಪ್ರಶ್ನೆಗಳು ಹಾಗೂ ಮುಖ್ಯವಾಗಿ ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯ ಬಗ್ಗೆ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದೆ.

ಸಭೆಯಲ್ಲಿ ಟ್ರಾಕ್ಟರ್ ರ‍್ಯಾಲಿ ಮುಂದುಡೂವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ನವೆಂಬರ್ 29 ರಂದು ನಡೆಸಲು ಉದ್ದೇಶಿಸಿದ್ದ ಟ್ರಾಕ್ಟರ್ ರ‍್ಯಾಲಿ ರದ್ದುಗೊಳಿಸಿರುವ ಬಗ್ಗೆ ಕಿಸಾನ್ ಯೂನಿಯನ್ ಹೇಳಿಕೆ ನೀಡಿದೆ.

ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ ವಿಚಾರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ರೈತ ಸಂಘಟನೆಗಳು ಪತ್ರ ಬರೆದಿದ್ದು, ಡಿಸೆಂಬರ್​ 4ರವರೆಗೆ ಕಾಲಾವಕಾಶ ನೀಡಿವೆ. ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ಎಂಎಸ್‌ಪಿ ಸಂಬಂಧ ಸಮಿತಿಯನ್ನು ರಚಿಸಬೇಕು. ಈ ವಿಚಾರ ಸೇರಿದಂತೆ ನಮ್ಮ ಬೇಡಿಕೆಗಳ ಬಗ್ಗೆ ವಿವರಿಸಲಾಗಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ದರ್ಶನ್ ಪಾಲ್​ ಸಿಂಗ್​, ನಾವು ಬರೆದಿರುವ ಪತ್ರಕ್ಕೆ ಡಿಸೆಂಬರ್ 4ರವರೆಗೆ ಪ್ರಧಾನಿಗೆ ಉತ್ತರಿಸಲು ಅವಕಾಶ ನೀಡಿದ್ದೇವೆ. ನವೆಂಬರ್​ 29ರಂದು ನಡೆಸಲು ನಿರ್ಧರಿಸಲಾಗಿದ್ದ ಟ್ರ್ಯಾಕ್ಟರ್ ರ‍್ಯಾಲಿಯನ್ನು ನಿಜವಾಗಿ ಹಿಂಪಡೆದಿಲ್ಲ, ಮುಂದೂಡಿದ್ದೇವೆ. ಕೇಂದ್ರ ಸರ್ಕಾರ ನಮ್ಮೊಂದಿಗೆ ಮಾತುಕತೆ ನಡೆಸುವವರೆಗೂ ಪ್ರತಿಭಟನೆ ಹಿಂಪಡೆದುಕೊಳ್ಳುವುದಿಲ್ಲ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *