ಐಪಿಎಲ್‌ 2025: ಫೈನಲ್ಸ್ ತಲುಪಿದ ಆರ್‌ಸಿಬಿ ತಂಡ

ನವದೆಹಲಿ: ಮೇ 29 ಗುರುವಾರದಂದು ನಡೆದ ಐಪಿಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಮೋಘ ಗೆಲುವು ಸಾಧಿಸಿದೆ. ಗೆಲುವಿನ ಬಳಿಕ ಮಾತನಾಡಿದ ರಜತ್ ಪಾಟಿದಾರ್, ಪಂದ್ಯದಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ನಾವು ಸ್ಪಷ್ಟವಾಗಿ ಯೋಜನೆ ಹಾಕಿಕೊಂಡಿದ್ದೇವು ಎಂದರು. ಐಪಿಎಲ್‌

ಆರ್​ಸಿಬಿಯ ವೇಗದ ಬೌಲರ್‌ಗಳು ಚೆನ್ನಾಗಿ ಆಡಿದರು. ಆದರೆ ಇವರಿಗಿಂತ ಸುಯಶ್ ಶರ್ಮಾ ಸ್ಪಿನ್​ ಎಲ್ಲರನ್ನೂ ಬೆರಗುಗೊಳಿಸಿತು. ಸುಯಶ್ ಶರ್ಮಾ ಬೌಲಿಂಗ್ ಮಾಡಿದ ರೀತಿ ಹಾಗೂ ಅವರು ಬೌಲಿಂಗ್​ ಲೈನ್ಸ್ ಅಂಡ್ ಲೆಂತ್‌ಗಳನ್ನು ಎಲ್ಲ ರೀತಿ ನಿಜಕ್ಕೂ ಚೆನ್ನಾಗಿತ್ತು ಎಂದು ಹೇಳಿದರು.

ನಾನು ನಾಯಕನಾಗಿ ಸುಯಶ್ ಸ್ಪಿನ್​ ಬೌಲಿಂಗ್​​ ಅನ್ನು ಚೆನ್ನಾಗಿ ಬಲ್ಲೇ. ಸ್ಟಂಪ್​ಗಳನ್ನು ಟಾರ್ಗೆಟ್ ಮಾಡೋದೇ ಸುಯಶ್ ಸ್ಟ್ರೆಂಥ್​ ಆಗಿದೆ. ಅವರ ಬೌಲಿಂಗ್ ಅನ್ನು ಜಡ್ಜ್​​ ಮಾಡೋದು ತುಂಬಾ ಕಷ್ಟ.

ಇದನ್ನೂ ಓದಿ: ಕೊಡಗು| ಡೆತ್‌ ನೋಟ್‌ ಬರೆದು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಐಪಿಎಲ್‌

ಯಾವುದೇ ಕನ್​​ಫ್ಯೂಸ್​ ಮಾಡದೇ ಸುಯಶ್​​​ಗೆ ಕ್ಲೀಯರ್ ಐಡಿಯಾ ಕೊಟ್ಟಿದ್ದೆ. ಸಾಕಷ್ಟು ಅಭ್ಯಾಸ ಮಾಡಿದ್ದರಿಂದ ಈ ಯಶಸ್ಸು ಸಿಕ್ಕಿದೆ. ಗೆಲುವಿನ ಕ್ರೆಡಿಟ್​ ಏನಿದ್ದರೂ ಸುಯಶ್​ ಶರ್ಮಾದ್ದೇ ಎಂದರು.

ಫಿಲ್​ ಸಾಲ್ಟ್ ಬ್ಯಾಟಿಂಗ್ ಅಂದರೆ ನನಗೆ ತುಂಬಾ ಇಷ್ಟ. ಡಗೌಟ್​ ಅಲ್ಲಿ ಕುಳಿತು ಸಾಲ್ಟ್​ ಬ್ಯಾಟಿಂಗ್ ನೋಡುತ್ತಿರುತ್ತೇನೆ. ಅವರ ಬಿಗ್ ಫ್ಯಾನ್​ ನಾನು. ಇದರ ಜೊತೆಗೆ ಎಲ್ಲ ಆರ್​ಸಿಬಿ ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳನ್ನು ಹೇಳುತ್ತೇನೆ.

ಚಿನ್ನಸ್ವಾಮಿ ಸ್ಟೇಡಿಯಂ ಅಷ್ಟೇ ಅಲ್ಲ, ನಾವು ಎಲ್ಲೇ ಆಡಲು ಹೋದರೂ ಅದನ್ನು ಹೋಮ್​ ಗ್ರೌಂಡ್​ ಎಂದು ಭಾವಿಸುತ್ತೇವೆ. We love you, ಯಾವಾಗಲೂ ನಿಮ್ಮ ಸಪೋರ್ಟ್​ ಹೀಗೆ ಇರಲಿ. ಇನ್ನೊಂದು ಪಂದ್ಯ ಗೆದ್ದರೇ ಎಲ್ಲರೂ ಒಟ್ಟಿಗೆ ಸೆಲೆಬ್ರೆಷನ್ ಮಾಡೋಣ ಎಂದು ಫ್ಯಾನ್ಸ್​ಗೆ ರಜತ್ ಪಾಟಿದಾರ್ ಅವರು ಹೇಳಿದರು.

ಇದನ್ನೂ ನೋಡಿ: ಫ್ಯಾಸಿಸಂ ಹುಟ್ಟು ಹೇಗಾಯಿತು ಮತ್ತು ಅದನ್ನು ಮೊದಲಿನಿಂದಲೂ ವಿರೋಧಿಸಿದ ರಾಜಕೀಯ ಶಕ್ತಿಗಳು ಯಾವುವು? Janashakthi ಐಪಿಎಲ್‌

Donate Janashakthi Media

Leave a Reply

Your email address will not be published. Required fields are marked *