ಎಚ್​ಡಿ ಕುಮಾರಸ್ವಾಮಿಯವರಿಗೆ ಅಕ್ರಮ ಗಣಿಗಾರಿಕೆಗೆ ಅನುಮತಿ; ಕ್ರಮಕ್ಕೆ ರಾಜ್ಯಪಾಲರು ವಿಳಂಬ ನೀತಿ

ಬೆಂಗಳೂರು : ಕೇಂದ್ರ ಮಂತ್ರಿ ಎಚ್​ಡಿ ಕುಮಾರಸ್ವಾಮಿಯವರಿಗೆ ಅಕ್ರಮ ಗಣಿಗಾರಿಗೆ ಅನುಮತಿ ನೀಡಿದ್ದು, ಅಕ್ರಮ ಗಣಿಗಾರಿಗೆ ಕಾನೂನು ಬಾಹಿರವಾಗಿ ಅವಕಾಶ ಮಾಡಿಕೊಟ್ಟದ್ದಾರೆ ಎಂವ ಆರೋಪ ಕೇಳಿಬಂದಿದೆ.

ಬಿಜೆಪಿ ಮತ್ತು ಜೆಡಿಎಸ್​ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಅಕ್ರಮ ಸೈಟ್​ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​ ಸರ್ಕಾರದ ವಿರುದ್ದ ಪಾದಯಾತ್ರೆ ಮಾಡುತ್ತಿದ್ದಾರೆ. ಇದರ ಮದ್ಯೆ ಕೇಂದ್ರ ಮಂತ್ರಿ ಹೆಚ್​ಡಿ ಯವರಿಗೆ ಅಕ್ರಮ ಗಣಿಗಾರಿಗೆ ಅನುಮತಿ ನೀಡಿರುವ ಸಂಕಷ್ಟಗಳು ಎದುರಾಗಿದೆ.

ಇದನ್ನು ಓದಿ : ವಕ್ಫ್ ಮಂಡಳಿ ಅಧಿಕಾರ ಮೊಟಕುಗೊಳಿಸುವ ತಿದ್ದುಪಡಿ ಮಸೂದೆ ಮಂಡನೆ: ಪ್ರತಿಪಕ್ಷಗಳಿಂದ ಪ್ರತಿಭಟನೆ

ಕೇಂದ್ರ ಮಂತ್ರಿ ಕುಮಾರಸ್ವಾಮಿ 12 ವರ್ಷಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 550 ಎಕರೆಗಳಷ್ಟು ಅಕ್ರಮ ಗಣಿಗಾರಿಗೆ ಕಾನೂನು ಬಾಹಿರವಾಗಿ ಅವಕಾಶ ನೀಡಿದ್ದರು. ಮತ್ತು ಇದಕ್ಕೆ ಸಾಕ್ಷಿಎಂಬಂತೆ ಅನುಮತಿಗೆ ಎಚ್​ಡಿಕೆಯವರೇ ಸಹಿ ಮಾಡಿದ್ದಾರೆ ಎಂದು FSL​ ವರದಿಯಿಂದ ಸಾಬೀತಾಗಿತ್ತು.

ಈ ಪ್ರಕರಣ ನಡೆದು 12 ವರ್ಷಗಳಾದರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹೆಚ್​ಡಿಕೆ ವಿರುದ್ದ ಕ್ರಮಕ್ಕೆ ರಾಜ್ಯಪಾಲರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಇದನ್ನು ನೋಡಿ : ರಾಜಭವನ,ಪಕ್ಷಾತೀತವಾಗಿರಬೇಕು,ಬಿಜೆಪಿಯ ಕಚೇರಿ ಆಗಬಾರದುJanashakthi Media

 

Donate Janashakthi Media

Leave a Reply

Your email address will not be published. Required fields are marked *