ಪರ್ಯಾಯ ಮಾಧ್ಯಮ ಏಕೆ? ಹೇಗೆ? ವೆಬಿನಾರ್ – ಅಕ್ಟೋಬರ್ 17 ಕ್ಕೆ

  • ಕೊರೊನಾ ಕಾಲದಲ್ಲಿ, ಮೊದಲು ಮತ್ತು ನಂತರ
  • ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆಯ ವೆಬಿನಾರ್ ಸರಣಿ

ಬೆಂಗಳೂರು : ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆ ಮತ್ತು ವೆಬಿನಾರ್ ಸರಣಿಕರ್ನಾಟಕ 2020 ಕೊರೊನಾ ಕಾಲದಲ್ಲಿ ಮತ್ತು ನಂತರ ಥೀಮ್ ಅಡಿಯಲ್ಲಿಪರ್ಯಾಯ ಮಾಧ್ಯಮ ಏಕೆ? ಹೇಗೆ?ಎಂಬ ವಿಷಯದ ಕುರಿತು ಅಕ್ಟೋಬರ್ 17ರಂದು ಸಂಜೆ 5 ಗಂಟೆಗೆ ವೆಬಿನಾರ್ ನಡೆಯಲಿದೆ.  

ಈ ವೆಬಿನಾರ್ ನ  ದಿಕ್ಸೂಚಿ ಭಾಷಣವನ್ನು PARI ನ ಸ್ಥಾಪಕ ಮತ್ತು ಸಂಪಾದಕಾರದ ಪಿ.ಸಾಯಿನಾಥ್ ರವರು ಮಾಡಲಿದ್ದು, ವೆಬಿನಾರ್ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಡಿ.ಉಮಾಪತಿಯವರು ವಹಿಸಲಿದ್ದಾರೆ.

ಈ ಸರಣಿ ವೆಬಿನಾರ್ ನಲ್ಲಿ ಸಂವಾದ ನಡೆಯಲಿದ್ದು ಈ ಸಂವಾದದಲ್ಲಿ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮ, ಸಂವಾದ ಸಂಪಾದಕರಾದ ಇಂದೂರ ಹೊನ್ನಾಪುರ, ಗೌರಿ ಮೀಡಿಯಾದ ಸಂಪಾದಕರಾದ ಹೆಚ್.ವಿ.ವಾಸು, ಹಿರಿಯ ಪತ್ರಕರ್ತರಾದ ಗೌರೀಶ್ ಅಕ್ಕಿ, ಭಾಗವಹಿಸಲಿದ್ದಾರೆ. ಈ ಸಂವಾದದ ನಿರ್ವಹಣೆಯನ್ನು ಸಂವಹನ ಸಮಾಲೋಚಕರಾದ ಸತ್ಯಾ ಎಸ್. ರವರು ನಿರ್ವಹಿಸಲಿದ್ದಾರೆ.

ಈ ವೆಬಿನಾರ್ ಜನಶಕ್ತಿ ಮೀಡಿಯಾದ ಯುಟ್ಯೂಬ್ , ಫೇಸ್ ಬುಕ್ ಮೂಲಕವು ವಿಕ್ಷಿಸಬಹುದಾಗಿದೆ.

ವೆಬಿನಾರ್ ಐಡಿ : 83559982994

ಪಾಸ್ ವರ್ಡ್ : 720532

ಸಮಯ : ಅಕ್ಟೋಬರ್ 17 ರಂದು, ಸಂಜೆ 5.00ಕ್ಕೆ

ಈ ಲೋಕಾರ್ಪಣೆ ಸರಣಿ ಕಾರ್ಯಕ್ರಮಗಳ ಸಾಮಾನ್ಯ ಥೀಮ್ ಆಗಿರುತ್ತದೆ. ಈ ಸಾಮಾನ್ಯ ಥೀಮ್ ಅಡಿಯಲ್ಲಿ ಹಲವು ಉಪಥೀಮ್ ಗಳ ಕುರಿತು ಬರಹ, ಅಡಿಯೊ/ವಿಡಿಯೊ ಪ್ರತಿಕ್ರಿಯೆಗಳ ಮತ್ತು ವೆಬಿನಾರ್ ನ ಮೂಲಕ ಸಂವಾದ ನಡೆಸಲಾಗುತ್ತದೆ. ಸಾರ್ವಜನಿಕ ಆರೋಗ್ಯ, ಮಾನವ ಹಕ್ಕುಗಳು, ಸಾಮಾಜಿಕ ಭದ್ರತೆ, ವೈಜ್ಞಾನಿಕ ಮನೋವೃತ್ತಿ, ಪ್ರದರ್ಶನ ಕಲೆಗಳು, ಪರ್ಯಾಯ ಮಾಧ್ಯಮ – ಇವು ಉಪಥೀಮ್ ಗಳಾಗಿರುತ್ತವೆ. ಈ ವಿಷಯಗಳ ಕುರಿತು ಈಗಾಗಲೇ ಬರಹ, ಅಡಿಯೊ/ವಿಡಿಯೊ ಪ್ರತಿಕ್ರಿಯೆಗಳು ವೆಬ್ ಪತ್ರಿಕೆಯಲ್ಲಿ ಪ್ರಕಟವಾಗಲಾರಂಭಿಸಿವೆ.

ಈ ಕೆಳಗಿನ ಲಿಂಕ್ ಒತ್ತಿ ಕಾರ್ಯಕ್ರಮಕ್ಕೆ ಜೊತೆಯಾಗಿ.

Join Zoom Meeting

ಲಿಂಕ್ ಕ್ಲಿಕ್ ಮಾಡಿ  :  ಪರ್ಯಾಯ ಮಾಧ್ಯಮ ಏಕೆ? ಹೇಗೆ? ವೆಬಿನಾರ್ 

 

Donate Janashakthi Media

Leave a Reply

Your email address will not be published. Required fields are marked *