ಮೋದಿ ವಿರುದ್ಧ ‘ಪನೌತಿ’ ಹೇಳಿಕೆ | ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನೀಡಿದ್ದ ‘ಪನೌತಿ’ (ಮಟಾಷ್ ಲೆಗ್) ಮತ್ತು ‘ಜೇಬ್‌ಕತ್ರಾ’ (ಪಿಕ್ ಪಾಕೆಟ್ ಮಾಡುವ ಕಳ್ಳ) ಎಂಬ ಹೇಳಿಕೆಯ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಗುರುವಾರ ನೋಟಿಸ್ ನೀಡಿದೆ. ಅವರ ವಿರುದ್ಧ ಬಿಜೆಪಿ ಚುನಾವಣಾ ಸಂಸ್ಥೆಗೆ ದೂರು ನೀಡಿದ ಒಂದು ದಿನದ ನಂತರ ಈ ನೋಟಿಸ್ ನೀಡಲಾಗಿದೆ.

ಚುನಾವಣಾ ಆಯೋಗವು ಶನಿವಾರ ಸಂಜೆ 6 ಗಂಟೆಯೊಳಗೆ ಉತ್ತರವನ್ನು ಸಲ್ಲಿಸುವಂತೆ ರಾಹುಲ್ ಗಾಂಧಿಗೆ ಸೂಚಿಸಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ವಿವರಿಸುವಂತೆ ಕೇಳಿದೆ. ಈ ವಾರದ ಆರಂಭದಲ್ಲಿ ರಾಜಸ್ಥಾನದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ, ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರನ್ನು ‘ಪನೌತಿ’ ಎಂದು ಕರೆಯುವ ಮೂಲಕ ಗೇಲಿ ಮಾಡಿದ್ದರು.

ಇದನ್ನೂ ಓದಿ: ದೆಹಲಿ | 350 ರೂ.ಗಾಗಿ 60 ಬಾರಿ ಇರಿದು, ದೇಹದ ಮೇಲೆ ಡ್ಯಾನ್ಸ್‌ ಮಾಡಿದ ಬಾಲಕ!

ಕಳೆದ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ 2023 ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋಲಲು ಪ್ರಧಾನಿ ಮೋದಿ ಪಂದ್ಯಾಟ ನೋಡಲು ತೆರಳಿದ್ದೇ ಕಾರಣ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದರು. ಅವರು ಭಾಷಣದಲ್ಲಿ “ನಮ್ಮ ಹುಡುಗರು ಬಹುತೇಕ ವಿಶ್ವಕಪ್ ಗೆಲ್ಲುತ್ತಿದ್ದರು, ಆದರೆ ‘ಪನೌತಿ’ ಅವರನ್ನು ಸೋಲುವಂತೆ ಮಾಡಿತು.” ಎಂದು ಹೇಳಿದ್ದಾರೆ.

ಪ್ರಧಾನಿಯೊಬ್ಬರಿಗೆ ‘ಜೇಬ್‌ಕತ್ರಾ’ ಮತ್ತು ‘ಪನೌತಿ’ ಪದವನ್ನು ಬಳಸುವುದು ರಾಷ್ಟ್ರೀಯ ಪಕ್ಷದ ಅತ್ಯಂತ ಹಿರಿಯ ನಾಯಕನಿಗೆ ತಕ್ಕುದಲ್ಲ ಎಂದು ಆರೋಪಿಸಲಾಗಿದೆ ಎಂದು ಚುನಾವಣಾ ಆಯೋಗ ನೀಡಿದ ನೋಟಿಸ್‌ನಲ್ಲಿ ಹೇಳಲಾಗಿದೆ. ಅಲ್ಲದೆ, ಕಳೆದ 9 ವರ್ಷಗಳಿಂದ 14,00,000 ಕೋಟಿ ರೂಪಾಯಿ ಮನ್ನಾ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ, ಆದರೆ ಇದು ವಾಸ್ತವವಲ್ಲ. ಅಷ್ಟೆ ಅಲ್ಲದೆ ರಾಹುಲ್ ಗಾಂಧಿ ಅವರು ಮಾದರಿ ನೀತಿ ಸಂಹಿತೆಯ ವಿವಿಧ ವಿಭಾಗಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಆಯೋಗ ನೀಡಿದ ನೋಟಿಸ್‌ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ತಮಿಳುನಾಡಿಗೆ ಡಿ.31 ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ CWRC ನಿರ್ದೇಶನ

“ಭ್ರಷ್ಟ ಆಚರಣೆಗಳ” ಕುರಿತು ಹೇಳುವ ನೀತಿ ಸಂಹಿತೆಯ ಒಂದು ವಿಭಾಗದ ಅಡಿಯಲ್ಲಿ “ಪನೌತಿ” ಎಂಬ ಪದವು ಅಭಿವ್ಯಕ್ತಿ “ನಿಷೇಧದ ಇಕ್ವಿಟಿಯಲ್ಲಿ ಬರುತ್ತದೆ” ಎಂದು ಚುನಾವಣಾ ಆಯೋಗವು ಹೇಳಿದೆ. ಆಯೋಗವು ಹಿಂದಿನ ಸಾಮಾನ್ಯ ಸಲಹೆಯನ್ನು ಉಲ್ಲೇಖಿಸಿ,”ಪ್ರಚಾರದ ಅವಧಿಯಲ್ಲಿ ರಾಜಕೀಯ ಭಾಷಣದ ಕುಸಿತದ ಮಟ್ಟದಲ್ಲಿ ಕಳವಳ ವ್ಯಕ್ತಪಡಿಸಿದ್ದು, ನೀತಿ ಸಂಹಿತೆಯ ಮಿತಿಯಲ್ಲಿ ಮತ್ತು ಸಾರ್ವಜನಿಕ ಭಾಷಣದಲ್ಲಿ ನಿರೀಕ್ಷಿತ ಸಭ್ಯತೆಯಂತೆ ಕಾರ್ಯನಿರ್ವಹಿಸಲು ಎಲ್ಲರಿಗೂ ಸಲಹೆ ನೀಡಿದೆ” ಎಂದು ಹೇಳಿದೆ.

ರಾಹುಲ್ ಗಾಂಧಿ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ನೀತಿ ಸಂಹಿತೆ ಮತ್ತು ವಾಕ್ ಸ್ವಾತಂತ್ರ್ಯದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿಕೆಗಳನ್ನು ಕೂಡಾ ಉಲ್ಲೇಖಿಸಲಾಗಿದೆ.

ರಾಹುಲ್ ಗಾಂಧಿಯವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೇಳಿಕೆಯು “ನಾಚಿಕೆಗೇಡಿನ ಮತ್ತು ಅವಮಾನಕರ”ವಾಗಿದ್ದು, ಅದಕ್ಕಾಗಿ ಕ್ಷಮೆಯಾಚಿಸಲು ಒತ್ತಾಯಿಸಿದೆ.

ವಿಡಿಯೊ ನೋಡಿ: ನೇಜಾರು ಹತ್ಯೆ ಪ್ರಕರಣ :ಕೊಲೆಗಾರನ ಹಿನ್ನೆಲೆ ತನಿಖೆಯಾಗಲಿ, ಕೋಮುವಾದದ ವಾಸನೆಯೂ ಬಡಿಯುತ್ತಿದೆ Nejaru murder case

Donate Janashakthi Media

Leave a Reply

Your email address will not be published. Required fields are marked *