ಬಿಜೆಪಿ ಸರಕಾರಕ್ಕೆ ಗೇಟ್ ಪಾಸ್ ಭಾಗ 03 : ಜೆಡಿಎಸ್ ಏಕೆ ಕುಸಿಯುತ್ತಿದೆ? ಕರ್ನಾಟಕ ಜನಾದೇಶದ ಪರಿಣಾಮಗಳೇನು?

ವಸಂತರಾಜ ಎನ್.ಕೆ

 

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಗೇಟ್ ಪಾಸ್ ನೀಡಿದ್ದಾರೆ. ಈ ಕುರಿತಾಗಿ ವಿವರವಾದ ಮಾಹಿತಿಯುಳ್ಳ ಲೇಖನವನ್ನು ಓದುಗರಿಗೆ ನೀಡಲಾಗುತ್ತಿದೆ. ಭಾಗ 1 ರಲ್ಲಿ ಸಾಮಾನ್ಯ ಚುನಾವಣಾ ಮಾಹಿತಿಗಳನ್ನು ನೋಡಿದ್ದೇವು. 2ನೇಭಾಗದಲ್ಲಿ ಬಿಜೆಪಿ ಸೋಲಲು ಕಾರಣವಾದ ಅಂಶಗಳ ಬಗ್ಗೆ ತಿಳಿಯಲಾಗಿತ್ತು. ಭಾಗ 03 ರಲ್ಲಿ ಕಾಂಗ್ರೆಸ್‌ ನ ಭಾರೀ ವಿಜಯಕ್ಕೆ ಕಾರಣಗಳೇನು ?ಎಂಬ ಅಂಶಗಳ ಬಗ್ಗೆ ತಿಳಿಯಲಾಗಿತ್ತು. ಈ ಭಾಗದಲ್ಲಿ  ಜೆಡಿಎಸ್ ಏಕೆ ಕುಸಿಯುತ್ತಿದೆ? ಕರ್ನಾಟಕ ಜನಾದೇಶದ ಪರಿಣಾಮಗಳೇನು? ಎನ್ನುವುದನ್ನು ತಿಳಿಯೋಣ

ಜೆಡಿ(ಎಸ್) ಏಕಕಾಲದಲ್ಲಿ ತಾನು “ರಾಷ್ಟ್ರೀಯ ಪಕ್ಷಗಳನ್ನು ವಿರೋಧಿಸುತ್ತದೆ” ಮತ್ತು “ಎರಡೂ ಪಕ್ಷಗಳು ನಮ್ಮನ್ನು ಸಂಪರ್ಕಿಸುತ್ತಿವೆ” ಎಂದು ಹೇಳುವ ಮೂಲಕ ಮತದಾರರನ್ನು ಗೊಂದಲಕ್ಕೀಡಉ ಮಾಡಿತು. ಜೆಡಿ(ಎಸ್) ಬರಿಯ ಒಂದು ಕುಟುಂಬದ, ಒಂದು ಸಮುದಾಯದ, ಒಂದು ಪ್ರದೇಶದ ಪಕ್ಷವಲ್ಲ ಎಂದು ತೋರಿಸಿಕೊಳ್ಳುವ ಪ್ರಯತ್ನವನ್ನೂ ಅದು ಮಾಡಲಿಲ್ಲ. ಸೀಟು ಹಂಚಿಕೆಯಲ್ಲಿ ಅದರ ಕುಟುಂಬದೊಳಗಿನ ದೀರ್ಘಕಾಲ ಸಾರ್ವಜನಿಕವಾಗಿ ನಡೆದ ವಿವಾದಗಳು ಪಕ್ಷದ ವಿರುದ್ಧ ಕೆಟ್ಟ ಪ್ರಚಾರವನ್ನು ನೀಡಿದವು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ನಿರಾಕರಿಸಿದವರಿಗೆ ಟಿಕೆಟ್ ನೀಡುವ ಅದರ ಸೀಟು ಹಂಚಿಕೆ ನೀತಿಯು ಅದರ ಇಮೇಜ್‌ಗೆ ಸಹಾಯ ಮಾಡಲಿಲ್ಲ. ಹಿರಿಯ ನಾಯಕ ದೇವೇಗೌಡ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಮಾತ್ರ ಸ್ಟಾರ್ ಪ್ರಚಾರಕರಾಗಿದ್ದು ವ್ಯಾಪಕ ಪ್ರಚಾರ ನಡೆಸಲಾಗಿರಲಿಲ್ಲ. ಅಭ್ಯರ್ಥಿಗಳ ಕಳಪೆ ಆಯ್ಕೆ ಅದರ ವಿಶ್ವಾಸಾರ್ಹತೆಯನ್ನು ಕುಂದಿಸಿತು. ಜಾತ್ಯತೀತತೆಯನ್ನು ಪ್ರತಿಪಾದಿಸುತ್ತಲೇ ಬಿಜೆಪಿಯೊಂದಿಗೆ ಅದರ ಹಿಂದಿನ ಅವಕಾಶವಾದಿ ಮೈತ್ರಿ ಮತ್ತು ಪ್ರಸ್ತುತ ಸಂದರ್ಭದಲ್ಲಿ ಅದನ್ನು ತಳ್ಳಿಹಾಕದಿರುವುದು ಕೂಡ ಬಿಜೆಪಿ ವಿರುದ್ಧದ ಬೃಹತ್ ಆಡಳಿತ ವಿರೋಧದ ಹಿನ್ನೆಲೆಯಲ್ಲಿ ಅದಕ್ಕೆ ಮುಳುವಾಯಿತು. ಅದರ ಭರವಸೆಗಳು ಮತ್ತು ಪ್ರಣಾಳಿಕೆಗಳು ಉತ್ತಮವಾಗಿದ್ದರೂ ಅದರ ಪ್ರಸ್ತುತತೆ ಪ್ರಶ್ನಾರ್ಹವಾಗಿತ್ತು ಮತ್ತು ಜನಸಾಮಾನ್ಯರಿಗೆ ಅದು ಬಹುಪಾಲು ತಲುಪಲಿಲ್ಲ.

ಕೋಷ್ಟಕಗಳು 1, 2 ಮತ್ತು 3 ರಿಂದ ಸ್ಪಷ್ಟವಾಗುವಂತೆ JD(S)  ತನ್ನ ಬಲವಾದ ನೆಲೆಯಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಗಣನೀಯವಾಗಿ ಕುಸಿದಿದೆ. ಗ್ರಾಮೀಣ ಮೂಲದ ಪಕ್ಷವಾಗಿದ್ದರೂ ಸಹ ಅದರ ಗ್ರಾಮೀಣ ಮತ್ತು ಅರೆ-ಗ್ರಾಮೀಣ ಮತ-ಪಾಲು ಕ್ರಮವಾಗಿ 3.7, 5.4 % ರಷ್ಟು ಕುಸಿದಿದೆ. ಸಿ ಎಂ ಇಬ್ರಾಹಿಂ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೂ ಮುಸ್ಲಿಮರಲ್ಲಿ ತನ್ನ ನೆಲೆಯನ್ನು ಹೆಚ್ಚಿಸಿಕೊಳ್ಳುವ ಅದರ ಪ್ರಯತ್ನ ಯಶಸ್ವಿಯಾಗಲಿಲ್ಲ. ಬಿಜೆಪಿಯೊಂದಿಗಿನ ಅದರ ಆಗಾಗ್ಗೆ ಸರಸಲ್ಲಾಪ ಮುಸ್ಲಿಮರಲ್ಲಿ ಯಾವುದೇ ವಿಶ್ವಾಸವನ್ನು ಉಂಟುಮಾಡುವುದಿಲ್ಲ.

ಕರ್ನಾಟಕ ಜನಾದೇಶದ ಪರಿಣಾಮಗಳೇನು?

ಈ ಐತಿಹಾಸಿಕ ಜನಾದೇಶದಿಂದ ಮುಂಬರುವ ರಾಜಸ್ಥಾನ, ಛತ್ತೀಸ್‌ಗಢದಂತಹ ಇತರ ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಪಾಠ ಕಲಿಯಬೇಕಾಗಿದೆ. ಕಾಂಗ್ರೆಸ್ ತನ್ನ ಭರವಸೆಗಳನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಜಾರಿಗೊಳಿಸಬೇಕು. ಪ್ರಣಾಳಿಕೆಯಲ್ಲಿನ ತನ್ನ ಇತರ ಭರವಸೆಗಳನ್ನೂ ತ್ವರಿತವಾಗಿ ಜಾರಿಗೊಳಿಸಬೇಕು. ಇದು ಈ ವರ್ಷ ಇತರ ರಾಜ್ಯಗಳ ಚುನಾವಣೆಗಳು ಮತ್ತು ಮುಂದಿನ ವರ್ಷ ನಡೆಯುವ ಅತ್ಯಂತ ಪ್ರಮುಖ ಲೋಕಸಭೆ ಚುನಾವಣೆಗಳ ಮೇಲೆ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಭಾರೀ ಪರಿಣಾಮ ಬೀರುತ್ತದೆ.

ಬಿಜೆಪಿ ಸೋತಿರಬಹುದು, ಆದರೆ ಅದರ ಸಾಮಾಜಿಕ ನೆಲೆ, ಸಂಘಟನಾ ಶಕ್ತಿ ಹಾಗೇ ಉಳಿದಿದೆ ಎಂಬುದನ್ನು ಮರೆಯುವಂತಿಲ್ಲ. ಉಡುಪಿ ಮತ್ತು ದಕ್ಷಿಣ ಕನ್ನಡದ ಕರಾವಳಿ ಜಿಲ್ಲೆಗಳಲ್ಲಿ ಅದರ ಭದ್ರಕೋಟೆಗಳು ಅಬೇಧ್ಯವಾಗಿವೆ ಮತ್ತು ಇನ್ನೂ ಕಟುವಾದ ಹಿಂದುತ್ವ ಬೇಡುತ್ತಿವೆ. ಬಿಜೆಪಿ ತನ್ನ ಈ ಲ್ಯಾಬ್ ಮಾದರಿಯನ್ನು ರಾಜ್ಯದ ಇತರ ಜಿಲ್ಲೆಗಳಲ್ಲಿ ಮತ್ತು ಹಿಂದೆಂದಿಗಿಂತಲೂ ಹೆಚ್ಚು ಹುರುಪಿನಿಂದ ಪುನರಾವರ್ತಿಸಬಹುದು. ಆದ್ದರಿಂದ ಎಡ, ಪ್ರಜಾಸತ್ತಾತ್ಮಕ ಜಾತ್ಯತೀತ ಶಕ್ತಿಗಳು ಪ್ರಚಾರವನ್ನು ಮುನ್ನಡೆಸುವ ಪ್ರಬಲ ಜಾಲದೊಂದಿಗೆ ತಳಮಟ್ಟದಲ್ಲಿ ಅವುಗಳನ್ನು ನಎದುರಿಸಸಬೇಕಾಗಿದೆ. ಕೋಮುವಾದಿ ಸಂಘಟನೆಗಳಿಗೆ ಬೆಂಬಲವನ್ನು, ಆಡಳಿತ ಮತ್ತು ರಾಜ್ಯ ಸಂಸ್ಥೆಗಳಲ್ಲಿ ಕೋಮುವಾದೀಕರಣವನ್ನು ಕಿತ್ತೊಗೆಯುವ ಕ್ರಮಗಳ ಮೂಲಕ ಇದಕ್ಕೆ  ಕಾಂಗ್ರೆಸ್ ಸರಕಾರ ಬೆಂಬಲಿಸಬೇಕು.

ಜೆಡಿಎಸ್‌ನ ಅವನತಿಗೆ ಮುಖ್ಯವಾಗಿ ಅದರ ನ್ಯೂನತೆಗಳೇ ಕಾರಣ ಎಂಬುದು ನಿಜ. ವಿಶ್ಲೇಷಣೆಯ ಪ್ರಕಾರ, 2018 ಕ್ಕೆ ಹೋಲಿಸಿದರೆ ನೇರ ಸ್ಪರ್ಧೆಗಳ % ಹೆಚ್ಚಾಗಿದೆ. ಕರ್ನಾಟಕವು ಉತ್ತರದ ರಾಜ್ಯಗಳಂತೆ ‘ಬೈನರಿ ರಾಜ್ಯ’  ಆಗುವ ಅಪಾಯದಲ್ಲಿದೆ. ಪರ್ಯಾಯ ನೀತಿಗಳ ಆಧಾರದ ಮೇಲೆ ಪರ್ಯಾಯ ರಾಜಕಾರಣವನ್ನು ಕಟ್ಟಲು ಹವಣಿಸುತ್ತಿರುವ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ದೃ಼್ಟಿಯಿಂದ ಇದು ಆರೋಗ್ಯಕರ ಬೆಳವಣಿಗೆಯಲ್ಲ. ಒಬ್ಬ ಸರ್ವೋದಯ ಪ್ರತಿನಿಧಿಯನ್ನು ಹೊರತುಪಡಿಸಿ, ಅದೂ ಕೂಡ ಕಾಂಗ್ರೆಸ್ ಬೆಂಬಲದೊಂದಿಗೆ, ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಈ ಚುನಾವಣೆಗಳಲ್ಲಿ ರಾಜಕೀಯ ಅವಕಾಶ ಮತ್ತಷ್ಟು ಕುಗ್ಗಿದೆ. ಕಾಂಗ್ರೆಸ್ ಜನವಿರೋಧಿ ನವ-ಉದಾರವಾದಿ ನೀತಿಗಳನ್ನು ಅನುಸರಿಸುವ ಸಾಧ್ಯತೆಯಿದೆ ಅಥವಾ ತನ್ನದೇ ಆದ ಪ್ರಣಾಳಿಕೆಯನ್ನು ಗಂಭೀರವಾಗಿ ಜಾರಿಗೆ ತರದಿರಬಹುದು. ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಜಾಗರೂಕರಾಗಿರಬೇಕು ಮತ್ತು ಜನಪರ ಕ್ರಮಗಳನ್ನು ಅನುಸರಿಸಲು ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರಬೇಕು.

ಕಾಂಗ್ರೆಸ್ ಇತ್ತೀಚಿನ ಯಶಸ್ಸನ್ನು ಗಮನಿಸಿದರೆ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಆದರೆ ರಾಜ್ಯ ಮತ್ತು ಕೇಂದ್ರದಲ್ಲಿ ಕರ್ನಾಟಕದ ಜನರು ಒಂದೇ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂಬ ಮತ್ತೊಂದು ರಾಜಕೀಯ ಪ್ರವೃತ್ತಿಯನ್ನು ಕಾಂಗ್ರೆಸ್ ತಿಳಿದಿರಬೇಕು! 2024 ರಲ್ಲಿ ಫ್ಯಾಸಿಸ್ಟ್ ಬಿಜೆಪಿ ವಿರುದ್ಧ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಣಾಯಕ ಪ್ರಾಮುಖ್ಯತೆಯನ್ನು ಗಮನಿಸಿ, ಕಾಂಗ್ರೆಸ್ ಜೆಡಿ (ಎಸ್) ಮತ್ತು ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳೊಂದಿಗೆ ರಾಜಕೀಯ ಮಾತುಕತೆ ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಕಾಂಗ್ರೆಸ್ ಅದನ್ನು ಮಾಡದಿದ್ದರೆ, ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಈ ಪ್ರಕ್ರಿಯೆಯನ್ನು ಪ್ರಾರಂಭಿಸಲು ಒತ್ತಡ ಹೇರಬೇಕಾಗುತ್ತದೆ.

 

ಕೋಷ್ಟಕ 1 : ಕರ್ನಾಟಕದ ಸ್ಥಾನಗಳು/ಮತಗಳ % ಲೆಕ್ಕಾಚಾರ (2023, 18 ಕ್ಕಿಂತ ಹೆಚ್ಚಿನ ಏರಿಕೆ/ಇಳಿಕೆ)

 ಪಕ್ಷ ಸೀಟುಗಳು (2023) +ಏರಿಕೆ/

-ಇಳಿಕೆ

 

ಮತಪ್ರಮಾಣ

% (2023)

+ಏರಿಕೆ/

-ಇಳಿಕೆ

 

ಬಿಜೆಪಿ 66 -38 36 -0.35
ಕಾಂಗ್ರೆಸ್ 135 +55 42.9 +4.74
ಜೆಡಿ(ಎಸ್) 19 -18 13.3 -5.0
ಇತರ 4 +1 7.8 +0.4

 

ಕೋಷ್ಟಕ 2 : ಕರ್ನಾಟಕ ಪ್ರದೇಶವಾರು ಮತಗಳು % (2023, 2018 ಕ್ಕಿಂತ ಏರಿಕೆ/ಇಳಿಕೆ)

ಪ್ರದೇಶ ಕಾಂಗ್ರೆಸ್ ಬಿಜೆಪಿ ಜೆಡಿ(ಎಸ್)
ಮತಪ್ರಮಾಣ

% (2023)

+ಏರಿಕೆ/

-ಇಳಿಕೆ

 

ಮತಪ್ರಮಾಣ

% (2023)

+ಏರಿಕೆ/

-ಇಳಿಕೆ

 

ಮತಪ್ರಮಾಣ

% (2023)

+ಏರಿಕೆ/

-ಇಳಿಕೆ

 

ಕರಾವಳಿ 42.4 +2.3 48.5 -3.1 3.8 -0.2
ಹೈದರಾಬಾದ್/

ಕಲ್ಯಾಣ

46.4 +4.2 35.8 -3.4 10.5 -0.2
ಮುಂಬಯಿ/ಕಿತ್ತೂರು 44.6 +5.9 39.7 -4.5 5.3 -2.9
ದಕ್ಷಿಣ+ಮಲೆನಾಡು 40.8 6.5 25.5 +3.1 26.1 -8.6
ಬೆಂಗಳೂರು ನಗರ 40.7 +1.0 46.4 +5.4 7.8 -7.7

 

ಕೋಷ್ಟಕ 3 : ಕರ್ನಾಟಕ ಪ್ರದೇಶವಾರು ಸೀಟುಗಳ ಸಂಖ್ಯೆ (2023, 2018 ಕ್ಕಿಂತ ಏರಿಕೆ/ಇಳಿಕೆ)

ಪ್ರದೇಶ ಕಾಂಗ್ರೆಸ್ ಬಿಜೆಪಿ ಜೆಡಿ(ಎಸ್) ಪ್ರದೇಶ
ಸೀಟು (2023) +ಏರಿಕೆ/

-ಇಳಿಕೆ

 

ಸೀಟು

(2023)

+ಏರಿಕೆ/

-ಇಳಿಕೆ

 

ಸೀಟು (2023) +ಏರಿಕೆ/

-ಇಳಿಕೆ

 

ಸೀಟು

(2023)

+ಏರಿಕೆ/

-ಇಳಿಕೆ

ಕರಾವಳಿ 6 +4 13 -4 0 0 0 0
ಹೈದರಾಬಾದ್/

ಕಲ್ಯಾಣ

26 +5 10 -5 3 -1 1 +1
ಮುಂಬಯಿ/ಕಿತ್ತೂರು 44 +24 18 -23 1 -1 1 0
ದಕ್ಷಿಣ+ಮಲೆನಾಡು 47 +26 9 -12 15 -14 2 0
ಬೆಂಗಳೂರು ನಗರ 12 -3 16 +5 0 -2 0 0
Total 135 +55 66 -38 19 -18 4 +1

 

Donate Janashakthi Media

Leave a Reply

Your email address will not be published. Required fields are marked *