ಯುಗಾದಿ–ರಂಜಾನ್: ಸಾಮರಸ್ಯ ಸಂದೇಶ ಸಾರಲು ಬಹುಭಾಷಾ ಕವಿಗೋಷ್ಠಿ ಮಾ. 20ಕ್ಕೆ

ಬೆಂಗಳೂರು: ಯುಗಾದಿ ಹಾಗೂ ರಂಜಾನ್ ಹಬ್ಬಗಳ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಮಾರ್ಚ್‌ 20ರಂದು ಸಂಜೆ 4 ಗಂಟೆಗೆ ಸಮರಸ್ಯವನ್ನು ಪ್ರತಿಪಾದಿಸುವ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ಆಯೋಜಕರ ಪರವಾಗಿ ವಿಮಲಾ ಕೆ.ಎಸ್. ತಿಳಿಸಿದ್ದಾರೆ.

ವಿವಿಧ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿಶ್ವ ಮಟ್ಟದಲ್ಲಿ ದುರಾಕ್ರಮಣಗಳು ಮತ್ತು ವಿಸ್ತರಣಾದಾಹಗಳು ಜನರ ಬದುಕನ್ನೇ ಪುಡಿಗೈಯುತ್ತಿರುವ ಈ ಸಂದರ್ಭದಲ್ಲಿ, ದೇಶದೊಳಗೂ ಸಾಮರಸ್ಯ ಕದಡುವ ಘಟನೆಗಳು ನಡೆಯುತ್ತಿರುವ ಹಿನ್ನೆಲೆ, ಸಾಹಿತ್ಯ–ಸಾಂಸ್ಕೃತಿಕ ಅಭಿವ್ಯಕ್ತಿಯ ಭಾಗವಾಗಿ ಇದೊಂದು ಕಿರುಪ್ರಯತ್ನವಾಗಿದೆ.

ಇದನ್ನೂ ಓದಿ: ಚುನಾವಣೆ: ಎಲ್‌ಡಿಎಫ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್‌.ಜಿ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆಯನ್ನು ಕುಮಾರಸ್ವಾಮಿ ಬಿಜ್ಜಹಳ್ಳಿ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕವಿತಾ ವಾಚನ, ಭಾಂದ್ರತೆಯ ಸಂದೇಶ ಸಾರುವ ಭಾಷಣಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾಹಿತ್ಯ, ಸಾಮಾಜಿಕ ವಲಯದ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಈ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಜನಶಿಕ್ಷಣ ಟ್ರಸ್ಟ್‌, ಕಾವ್ಯ ಸಂಜೆಯು ಮತ್ತು ಜಾಗೃತ ನಾಗರಿಕರು ಕರ್ನಾಟಕ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಜಿಗ್ನೇಶ್ ನಾಗೇಕರ ಅವರು ಸಂಯೋಜನೆ ಮಾಡುತ್ತಿದ್ದಾರೆ.

ಇದನ್ನೂ ನೋಡಿ: ₹1ಕ್ಕೆ 1 ಲೀಟರ್ ಹಾಲು – ಫ್ಲಿಪ್‌ಕಾರ್ಟ್ ವಿರುದ್ಧ ಸಿಡಿದೆದ್ದ ರೈತರು Janashakthi Media

Donate Janashakthi Media

Leave a Reply

Your email address will not be published. Required fields are marked *