ವಿಮಾನ ಪತನ: ಹಳೆಯ ನೆನಪುಗಳನ್ನ ಬಿಚಿಟ್ಟ ಸಚಿವ ರಾಮ್ ಮೋಹನ್ ನಾಯ್ಡು

ವದೆಹಲಿ: ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ವಿಮಾನ ಪತನ ಇಡಿ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಘೋರ ದುರಂತ. ಈ ಒಂದು ಅಪಘಾತದಲ್ಲಿ ವಿಮಾನದಲ್ಲಿದ್ದ ಪೈಲಟ್, ಸಿಬ್ಬಂದಿಗಳು ಸೇರಿ ಎಲ್ಲರೂ ಸಾವನಪ್ಪಿದ್ದಾರೆ. ಆದರೆ ಒಬ್ಬ ಪ್ರಯಾಣಿಕ ಮಾತ್ರ ಬದುಕು ಉಳಿದಿದ್ದು, ವಿಮಾನ ದುರಂತದ ಕುರಿತು ಜೂನ್‌ 14 ಶನಿವಾರದಂದು ವಿಮಾನಯಾನ ಸಚಿವರಾದ ರಾಮ್ ಮೋಹನ್ ನಾಯ್ಡು ಸುದ್ದಿ ಗೋಷ್ಠಿ ನಡೆಸಿದರು. ಪತನ

ಕಳೆದ ಎರಡು ದಿನದಿಂದ ಬಹಳ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ವಿಮಾನ ದುರಂತದಲ್ಲೇ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ತಮ್ಮವರನ್ನು ಕಳೆದುಕೊಂಡ ನೋವನ್ನು ನಾನು ಅನುಭವಿಸಿದ್ದೇನೆ. ರಕ್ಷಣಾ ತಂಡಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ ಕೆಲಸ ನಿರ್ವಹಿಸಿವೆ ಎಂದರು.

ಇದನ್ನೂ ಓದಿ: ಸಾಲ ಪಾವತಿ ವಿಳಂಬ: ಕುಟುಂಬಸ್ಥರನ್ನು ಹೊರಗೆ ಹಾಕಿದ ಖಾಸಗಿ ಫೈನಾನ್ಸ್‌

ಜೂನ್‌ 13 ಶುಕ್ರುವಾರ ಸಂಜೆ 5 ಗಂಟೆಗೆ ದುರಂತ ಸ್ಥಳದಲ್ಲಿ ಒಂದು ಬ್ಲಾಕ್ ಬಾಕ್ಸ್ ಸಿಕ್ಕಿದೆ. ಸದ್ಯ ಬ್ಲಾಕ್ ಬಾಕ್ಸ್ ಡಿಕೋಡ್ ಮಾಡುವ ಕೆಲಸ ನಡೆಯುತ್ತಿದೆ. ಬ್ಲಾಕ್ ಬಾಕ್ಸ್ ನಿಖರವಾದ ಮಾಹಿತಿ ಸಿಗಲಿದೆ. ತನಿಖೆಗೆ ಮತ್ತೊಂದು ಉನ್ನತ ಮಟ್ಟದ ಸಮಿತಿ ರಚಿಸಿದ್ದೇವೆ ಎಂದು ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮಾಹಿತಿ ನೀಡಿದರು.

ಇದನ್ನೂ ನೋಡಿ: ಅಭಿಮಾನಿಗಳ ಉನ್ಮಾದ, ಸರ್ಕಾರದ ಅತ್ಯುತ್ಸಾಹ ಮತ್ತು ಮಾರುಕಟ್ಟೆಯ ದಾಹ Janashakthi Media

Donate Janashakthi Media

Leave a Reply

Your email address will not be published. Required fields are marked *