ಮರ್ಯಾದೆಗೇಡು ಹತ್ಯೆ: ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೆ ಕೊಂದ ಕುಟುಂಬ

ಉತ್ತರ ಪ್ರದೇಶ :ಫೆ, 16:  ಮುಸ್ಲಿಂ ಧರ್ಮಿಯ ವ್ಯಕ್ತಿಯನ್ನು ಪ್ರೀತಿ ಮಾಡಿದ್ದಳು ಎಂಬ ಕಾರಣಕ್ಕೆ ಮಹಿಳೆಯೊಬ್ಬಳನ್ನು ಆಕೆಯ ಕುಟುಂಬದವರೇ ಜೀವಂತವಾಗಿ ಸುಟ್ಟುಹಾಕಿರುವ ಘಟನೆ ಉತ್ತರ ಪ್ರದೇಶದ ಜಿಗಿನಾ ಗ್ರಾಮದಲ್ಲಿ ನಡೆದ ಬಗ್ಗೆ  ಹಿಂದುಸ್ತಾನ ಟೈಮ್ಸ್ ವರದಿ ಮಾಡಿದೆ.

ಇದನ್ನು ಓದಿ : ಮರ್ಯಾದೆಗೇಡು ಹತ್ಯೆ: ಆರೋಪಿಗಳ ಬಂಧನಕ್ಕೆ ಒತ್ತಾಯ

ಫ್ರೆಬ್ರವರಿ 4 ರಂದು ಈ ಘಟನೆ ನಡೆದಿದ್ದು, ಧಂಗಾಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಜಿಗಿನಾ ಗ್ರಾಮದಲ್ಲಿ ಯುವತಿಯ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು. ಶೋಧನೆಯ ನಂತರ ಶವವನ್ನು ಗೋರಖ್‌ಪುರದ ಬೆಲ್ಘಾಟ್ ಪ್ರದೇಶದ ಮಹಿಳೆ ಎಂಬುದು ತಿಳಿದು ಬಂದಿದೆ.

ಪೋಲಿಸರು ಹೇಳುವಂತೆ ಆ ಮಹಿಳೆಯು ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸುತ್ತಿರುವುದನ್ನು ಸಹಿಸದ ಕುಟುಂಬಸ್ಥರು ಅವನನ್ನು ಬಿಡುವಂತೆ ಒತ್ತಾಯಿಸಿದ್ದಾರೆ. ಮಗಳು ಬಿಡಲು ನಿರಾಕರಿಸಿದ್ದಕ್ಕೆ ಕುಪಿತಗೊಂಡಿದ್ದ ಕುಟುಂಬಸ್ಥರು ಕೊಲೆ ಮಾಡಲು ಕಾಂಟ್ರಾಕ್ಟ್ ಕಿಲ್ಲರ್ ವರುಣ್ ತಿವಾರಿ ಎಂಬಾತನನ್ನು ನೇಮಿಸಿ ₹ 1.5 ಲಕ್ಷ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : ನನ್ನ ಆಯ್ಕೆ ನನ್ನ ಹಕ್ಕು , ಅನ್ಯರಿಗಿಲ್ಲಿ ಅವಕಾಶವಿಲ್ಲ, ಭಿನ್ನರಾಗ ಬೇಕಿಲ್ಲ

ಫ್ರೆಬ್ರವರಿ 3 ರಂದು ಜಿಗಿನಾ ಗ್ರಾಮದ ನಿರ್ಜನ ಸ್ಥಳಕ್ಕೆ ಯುವತಿಯನ್ನು ಕರೆದೊಯ್ದು, ಯುವತಿಯ ಬಾಯಿ ಮತ್ತು ಕೈಗಳಿಗೆ ಬಟ್ಟೆ ಕಟ್ಟಿದ್ದಾರೆ, ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಈ ಘಟನೆಗೆ ಸಂಬಂಧಿಸಿದ ಸಂತ್ರಸ್ತೆಯ ತಂದೆ ಕೈಲಾಶ್ ಯಾದವ್, ಅಣ್ಣ ಅಜಿತ್ ಯಾದವ್, ಮಾವ ಸತ್ಯಪ್ರಕಾಶ್ ಯಾದವ್ ಮತ್ತು ಸೀತಾರಾಮ್ ಯಾದವ್ ಎಂಬುವವರನ್ನು  ಪೋಲಿಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಆರೋಪಿ ಕಾಟ್ರಾಂಕ್ಟ್ ಕಿಲ್ಲರ್‌ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *