ಅಡಿಕೆ ಹಾಳೆ ರಪ್ತಿಗೆ ಆಮೇರಿಕಾದ ಸುಂಕಯೇತರ ಅಡ್ಡಿ ನಿವಾರಣೆಗೆ KPRS ಆಗ್ರಹ

ಭಾರತದಿಂದ ರಪ್ತಾಗುವ ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆ, ಲೋಟ ಮತ್ತಿತರ ಊಟದ ಪರಿಕರಗಳು ಆರೋಗ್ಯಕ್ಕೆ ಹಾನಿಕರ ಹಾಗೂ ಕ್ಯಾನ್ಸರ್ ಕಾರಕ ಎಂದು ಆಮೇರಿಕಾ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (FDA) ಮೇ 8 ,2025 ರಂದು ಹೊರಡಿಸಿರುವ ಆಮದು ನಿರ್ಬಂಧ ವನ್ನು ತೆರವುಗೊಳಿಸಲು ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

ಇದನ್ನು ಓದಿ :-ನೀಟ್-ಪಿಜಿ 2025: ಪರೀಕ್ಷೆ ಒಂದೇ ಪಾಳಿಯಲ್ಲಿ ನಡೆಸಬೇಕು – ಸುಪ್ರೀಂ ಕೋರ್ಟ್ ಆದೇಶ

ಆಮೇರಿಕಾದ ಈ ನಿರ್ಭಂದವು ಆಮೇರಿಕಾ ಮಾತ್ರವಲ್ಲದೆ ಇಡೀ ಜಗತ್ತಿನ ಅಡಿಕೆ ಹಾಳೆ ಮಾರುಕಟ್ಟೆ ಮೇಲೆ ಕರಾಳ ಪರಿಣಾಮ ಬೀರುತ್ತಿದೆ. ಅಡಿಕೆ ಹಾಳೆಗಳಿಂದ ತಯಾರಾಗುತ್ತಿದ್ದ ಊಟದ ಪರಿಕರಗಳು ಜಾಗತಿಕವಾಗಿ ಸುಮಾರು ಮೂರುವರೆ ಸಾವಿರ ಕೋಟಿ ವಹಿವಾಟು ಇದ್ದು ಇದರಲ್ಲಿ ಕರ್ನಾಟಕ ರಾಜ್ಯದ ಕೊಡುಗೆಯೇ ಸುಮಾರು ಎರಡೂವರೆ ಸಾವಿರ ಕೋಟಿ ರೂ ನಷ್ಟಿದೆ. ದೇಶದಲ್ಲೇ ಅತಿ ದೊಡ್ಡ ಅಡಿಕೆ ಬೆಳೆ ಬೆಳೆಯುವ ರಾಜ್ಯ ಕರ್ನಾಟಕವಾಗಿದ್ದು ,ಈ ನಿರ್ಭಂಧದಿಂದ ಅಡಿಕೆ ಬೆಳೆಗಾರರು ಸೇರಿದಂತೆ ಈ ಉದ್ಯಮದಲ್ಲಿ ತೊಡಗಿರುವ ಸಹಸ್ರಾರು ಜನರ ಉದ್ಯೋಗದ ಮೇಲೆ ದುಷ್ಪರಿಣಾಮಗಳು ಕಂಡು ಬರುತ್ತಿದ್ದು ದಕ್ಷಿಣ ಕನ್ನಡ ಮುಂತಾದ ಜಿಲ್ಲೆಗಳಿಂದ ನಡೆಯುತ್ತಿದ್ದ ರಪ್ತು ವಹಿವಾಟು ತೀವ್ರ ಪ್ರಮಾಣದಲ್ಲಿ ಕುಸಿದಿದೆ ಎಂದು ತಿಳಿಸಿದ್ದಾರೆ.

ಎಲೆ ಚುಕ್ಕಿ ರೋಗ, ಕೊಳೆ ರೋಗ ಮುಂತಾದ ಸಮಸ್ಯೆಗಳು ಸೇರಿದಂತೆ ಹಲವಾರು ವರ್ಷಗಳ ಬೆಲೆ ಕುಸಿತದ ಸಮಸ್ಯೆ ಅನುಭವಿಸಿ ಸತತ ನಷ್ಟದ ನಂತರ ಈ ವರ್ಷ ಸ್ವಲ್ಪ ಉತ್ತಮ ಬೆಲೆ ಪಡೆಯುವ ನಿರೀಕ್ಷೆ ಯಲ್ಲಿ ಇರುವಾಗಲೇ ಇಂತಹ ನಿರ್ಬಂಧಗಳು ಅಡಿಕೆ ಬೆಳೆಗಾರರನ್ನು‌ ಮತ್ತಷ್ಟು ಕಷ್ಟಕ್ಕೆ ಸಿಲುಕಿಸುತ್ತದೆ. ಅದ್ದರಿಂದ ಅಡಿಕೆ ಬೆಳೆ ಬೆಳೆಯುವ ಪ್ರದೇಶದ ಸಂಸತ್ ಸದಸ್ಯರು ಪ್ರಧಾನ ಮಂತ್ರಿ ಗಳ ಮೇಲೆ ಈ ತೊಡಕು ನಿವಾರಿಸುವಂತೆ ಒತ್ತಡ ತರಬೇಕು. ರಾಜ್ಯ ಸರ್ಕಾರ ಕೂಡ ತಕ್ಷಣ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನು ಓದಿ :-ನೀಟ್ ಪರೀಕ್ಷೆ: ಒಂದೇ ಪಾಳಿಯಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ

ಒಂದು ಕಡೆ ತನ್ನ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಯಾವುದೇ ರೀತಿಯ ಸುಂಕ ವಿಧಿಸದಂತೆ ಆಮೇರಿಕಾ ಹಾಗೂ ಯೂರೋಪಿಯನ್ ದೇಶಗಳು ಭಾರತದ ಮೇಲೆ ಒತ್ತಡ ಹಾಗೂ ಬೆದರಿಕೆ ಹಾಕುತ್ತಿವೆ. ಅದೇ ಸಂದರ್ಭದಲ್ಲಿ ಭಾರತದ ಸರಕುಗಳು ತನ್ನ ದೇಶದೊಳಗೆ ಬರದಂತೆ ಸುಂಕ ಮತ್ತು ಸುಂಕಯೇತರ ಅಡ್ಡಿ ಸೃಷ್ಟಿಸುತ್ತಿದೆ. ಇತ್ತೀಚೆಗೆ ಮಾವು ಬೆಳೆಯನ್ನು ಇಂತಹದ್ದೆ ನೆಪ ಒಡ್ಡಿ ತಿರಸ್ಕರಿಸಿದ್ದರಿಂದ ಕೋಟ್ಯಾಂತರ ರೂ ಬೆಳೆ ನಾಶವಾಗಿದೆ. ರಬ್ಬರ್ ಬೆಳೆಗೂ ಕೂಡ ಅರಣ್ಯ ನಾಶ ಮಾಡಿ ಬೆಳೆದಿಲ್ಲ ಎಂದು ಸರ್ಟಿಫಿಕೇಟ್ ಒದಗಿಸಲು ನಿರ್ಬಂಧ ಒಡ್ಡುತ್ತಿವೆ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಳಪಡಿಸಲು ಇತ್ತೀಚಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಸಂದರ್ಭವನ್ನು ಕೂಡ ದುರುಪಯೋಗ ಮಾಡಿಕೊಂಡಿದೆ. ಇಂತಹ ಕತ್ತು ಹಿಸುಕುವ ಆಮೇರಿಕಾ ಕ್ರಮಗಳನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಟುವಾಗಿ ಖಂಡಿಸುತ್ತಿಲ್ಲ. ಚೀನಾ ಮತ್ತಿತರ ದೇಶಗಳ ರೀತಿ ತಿರುಗೇಟು ನೀಡಿ ನಮ್ಮ ದೇಶದ ಸ್ವಾವಲಂಬನೆ ಮತ್ತು ರೈತರ ಹಿತ ಕಾಪಾಡುವ ಕ್ರಮ ಕೈಗೊಳ್ಳದೇ ಟ್ರಂಪ್ ನ ಅಡಿಯಾಳಾಗಿ ವರ್ತಿಸುತ್ತಿದೆ . ಮೇಲಿಂದ ಮೇಲೆ ಆಮೇರಿಕಾದ ಒತ್ತಡಗಳಿಗೆ ಮಣಿಯುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಕ್ರೋಶ ವ್ಯಕ್ತಪಡಿಸುತ್ತದೆ ಎಂದು ಆಗ್ರಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *