ನ್ಯಾಯಾಧೀಶ ವಿಶ್ವನಾಥ್ ಮುಗುಟಿ ಹೃದಯಾಘಾತದಿಂದ ನಿಧನ

ಲಬುರಗಿ: ಜಿಲ್ಲೆಯ ಕೋರ್ಟ್‌ನಲ್ಲಿ ಮೂರನೇ ಹಿರಿಯ ಶ್ರೇಣಿಯ ನ್ಯಾಯಾಧೀಶರಾದ ವಿಶ್ವನಾಥ್ ಮುಗುಟಿ (44) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೋರ್ಟ್ ಚೇಂಬರ್‌ ನಲ್ಲಿದ್ದಾಗಲೇ ಎದೆನೋವಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಅವರು ಸಾವಿಗೀಡಾಗಿದ್ದರು ಎಂಬುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಜೂನ್‌ 16 ಸೋಮವಾರ ಬೆಳಿಗ್ಗೆ ಸದಾ ನಗುತ್ತಾ ಕೋರ್ಟ್‌ಗೆ ಆಗಮಿಸಿದ ನ್ಯಾಯಾಧೀಶರು ತಮ್ಮ ಚೇಂಬರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಅವರಿಗೆ ಎದೆನೋವು ಕಾಣಿಸಿಕೊಂಡಿತು.

ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನ: 18 ಜನರ ಗುರುತು ಇನ್ನೂ ಪತ್ತೆಯಾಗಿಲ್ಲ!

ತಕ್ಷಣವೇ ಅವರ ಚಾಲಕ ಮತ್ತು ಕಚೇರಿ ಸಿಬ್ಬಂದಿಯ ಸಹಾಯದಿಂದ ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ವೈದ್ಯರು ತಪಾಸಣೆ ನಡೆಸಿದಾಗ ದುರಂತವಾಗಿ ನ್ಯಾಯಾಧೀಶರು ಮೃತಪಟ್ಟಿರುವುದು ತಿಳಿಯಿತು. ಅವರ ನಿಧನದಿಂದ ನ್ಯಾಯಾಂಗ ವಲಯದಲ್ಲೂ, ವಕೀಲರ ಸಮುದಾಯದಲ್ಲೂ ಭಾರೀ ದುಃಖದ ಛಾಯೆ ಆವರಿಸಿತು.

ಇತ್ತೀಚಿಗೆ ವರ್ಗಾವಣೆ:

ಮೃತ ನ್ಯಾಯಾಧೀಶ ವಿಶ್ವನಾಥ್ ಮುಗುಟಿ ಕೇವಲ 15 ದಿನಗಳ ಹಿಂದೆ ಕಲಬುರಗಿ ಕೋರ್ಟ್‌ಗೆ ವರ್ಗಾವಣೆಯಾಗಿ ಬಂದಿದ್ದರು. ತಮ್ಮ ಕರ್ತವ್ಯವನ್ನು ಸಂತೋಷದಿಂದ ನಿರ್ವಹಿಸುತ್ತಿದ್ದ ಅವರು ಅಲ್ಪಕಾಲದಲ್ಲೇ ಸಹೋದ್ಯೋಗಿಗಳಲ್ಲಿ ಸೌಮ್ಯ ಚರಿತ್ರೆಯಿಂದ ಪ್ರೀತಿ ಗಳಿಸಿದ್ದರು.

ಜಡ್ಜ್ ಅಗಲಿಕೆಗೆ ಕಲಬುರಗಿ ಜಿಲ್ಲಾ ಬಾರ್ ಅಸೋಸಿಯೇಷನ್ ಕಂಬನಿ ಮಿಡಿದಿದ್ದು, ಇಂದು ಕೋರ್ಟ್ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ. ಸಹ ಸಿಬ್ಬಂದಿ, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಇದನ್ನೂ ನೋಡಿ: ಹಲ್ಮಿಡಿ ಶಾಸನದಿಂದ ಬೂಕರ್‌ವರೆಗೆ ಹಾಸನದ ಕೊಡುಗೆ: ಬರಗೂರುJanashakthi Media

Donate Janashakthi Media

Leave a Reply

Your email address will not be published. Required fields are marked *