ಜನಶಕ್ತಿ ಮೀಡಿಯಾ ವರದಿ ಫಲಶೃತಿ: ಹಾಸ್ಟೇಲ್ ಸರ್ವೆಗೆ ಮುಂದಾದ ಸಮಾಜ ಕಲ್ಯಾಣ ಇಲಾಖೆ

ಬೆಂಗಳೂರು : ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾದ  “ಹಾಸ್ಟೇಲ್ ನರಕ : ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು” ಎಂಬ ಸುದ್ದಿ ಸರಕಾರದ ಗಮನ ಸೆಳೆದಿದೆ.

ಹಾಸ್ಟೇಲ್‌ ನರಕ : ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?!

ಸಮಾಜ ಕಲ್ಯಾಣ ಇಲಾಖೆ ಹಾಸ್ಟೇಲ್ ಗಳ ಸಮಸ್ಯೆಗಳ ಕುರಿತು ಸಮಗ್ರವಾದ ವಿವರ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರಿದಿದೆ. ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾದ ಸುದ್ದಿಯನ್ನು ಆಧರಿಸಿ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ವರದಿ ಕಳುಹಿಸುವಂತೆ ಜಿಲ್ಲೆಗಳಿಗೆ ಪತ್ರ ಬರೆದಿದ್ದಾರೆ.

ಸುದ್ದಿಗೆ ಸ್ಪಂದಿಸಿರುವ ಕ್ಯಾಪ್ಟನ್ ಮಣಿವಣ್ಣನ್ ರವರಿಗೆ ಜನಶಕ್ತಿ ಮೀಡಿಯಾ ಅಭಿನಂದನೆ ಸಲ್ಲಿಸುತ್ತದೆ. ಹಾಸ್ಟೇಲ್ ಗಳ ಇನ್ನಷ್ಟು ಕರಾಳ ಚಿತ್ರಣವನ್ನು ನಾವು ಬಿತ್ತರಿಸಲಿದ್ದೇವೆ. ಪೋಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು 6361984022 ಈ ದೂರವಾಣಿ ಸಂಖ್ಯೆಗೆ ಮಾಹಿತಿಯನ್ನು ನೀಡಬಹುದಾಗಿದೆ. ಇಲ್ಲವೆ janashakthimedia @gmail.com ಗೆ ಮೇಲ್ ಮಾಡಬಹುದು. ಯಾವುದೇ ಸಮಸ್ಯೆ ಇದ್ದರೂ ಅದನ್ನು ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲು ಜನಶಕ್ತಿ‌ ಮೀಡಿಯಾ ಕೆಲಸ ಮಾಡಲು ಬಯಸುತ್ತದೆ.

9482300400 ಇದು ಸಮಾಜ ಕಲ್ಯಾಣ ಇಲಾಖೆಯ ಸಹಾಯ ವಾಣಿ ಇದಕ್ಕೂ ಕರೆ ನೀಡಿ ಮಾಹಿತಿಯನ್ನು ನೀಡಬಹುದಾಗಿದೆ.

 

 

Donate Janashakthi Media

Leave a Reply

Your email address will not be published. Required fields are marked *