ಎಎಪಿಯ ರಾಜ್ಯಸಭೆ ಹಂಗಾಮಿ ನಾಯಕನಾಗಿ ರಾಘವ್ ಚಡ್ಡಾರನ್ನು ನೇಮಿಸಲು ನಿರಾಕರಿಸಿದ ಸ್ಪೀಕರ್ ಜಗದೀಪ್ ಧಂಖರ್

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅವರನ್ನು ಮೇಲ್ಮನೆಯಲ್ಲಿ ಪಕ್ಷದ ಹಂಗಾಮಿ ನಾಯಕರನ್ನಾಗಿ ನೇಮಿಸುವಂತೆ ಕೇಳಿದ್ದ ಮನವಿಯನ್ನು ರಾಜ್ಯಸಭಾ ಸ್ಪೀಕರ್‌ ಜಗದೀಪ್ ಧಂಖರ್ ಶುಕ್ರವಾರ ತಿರಸ್ಕರಿಸಿದ್ದಾರೆ. ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸಂಜಯ್ ಸಿಂಗ್ ಅವರ ಸ್ಥಾನಕ್ಕೆ ಚಡ್ಡಾ ಅವರನ್ನು ನೇಮಿಸಬೇಕೆಂದು ಎಎಪಿ ಬಯಸಿದೆ.

ಡಿಸೆಂಬರ್ 14 ರಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಪಕ್ಷದ ಹಂಗಾಮಿ ನಾಯಕನಾಗಿ ಚಡ್ಡಾ ಅವರ ಹೆಸರನ್ನು ಪ್ರಸ್ತಾಪಿಸಿ ಧಂಖರ್ ಅವರಿಗೆ ಪತ್ರ ಬರೆದಿದ್ದರು. “ಮುಂದಿನ ಬದಲಾವಣೆಗಳು ಅಗತ್ಯವೆಂದು ಪರಿಗಣಿಸುವವರೆಗೆ ರಾಜ್ಯಸಭೆಯಲ್ಲಿ ಹಂಗಾಮಿ ಪಕ್ಷದ ನಾಯಕರಾಗಿ ರಾಘವ್ ಚಡ್ಡಾ ಅವರ ಹೆಸರನ್ನು ಪ್ರಸ್ತಾಪಿಸಲು ನಾನು ಬಯಸುತ್ತೇನೆ. ರಾಜ್ಯಸಭೆಯ ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರ ಈ ಬದಲಾವಣೆಯನ್ನು ಅನುಮತಿಸಬೇಕೆಂದು ನಾವು ವಿನಂತಿಸುತ್ತೇವೆ” ಎಂದು ಅವರು ಬರೆದಿದ್ದಾರೆ.

ಆದರೆ ಸಂಸತ್ (ಸೌಲಭ್ಯಗಳು) ಕಾಯಿದೆ-1998 ರ ಮಾನ್ಯತೆ ಪಡೆದ ಪಕ್ಷಗಳು ಮತ್ತು ಗುಂಪುಗಳ ನಾಯಕರು ಮತ್ತು ಮುಖ್ಯ ಸಚೇತಕರ ಅಡಿಯಲ್ಲಿ ಪಕ್ಷದ ಹಂಗಾಮಿ ನಾಯಕರ ನೇಮಕಕ್ಕೆ ಯಾವುದೇ ಅವಕಾಶವಿಲ್ಲದ ಕಾರಣ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ರಾಜ್ಯಸಭಾ ಕಾರ್ಯದರ್ಶಿಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕ್ರೀಡೆಯಲ್ಲಿ ಮಹಿಳೆಯರಿಗೆ ಸುರಕ್ಷಿತ ಮತ್ತು ಒಳಗೊಳ್ಳುವ ವಾತಾವರಣವನ್ನು ಪ್ರೋತ್ಸಾಹಿಸುವುದಕ್ಕೆ ಆದ್ಯತೆ ಇದೆಯೇ ?

“ಈ ವಿಚಾರವು ‘ಸಂಸತ್ (ಸೌಲಭ್ಯಗಳು) ಕಾಯಿದೆ-1998′ ರಲ್ಲಿ ಮಾನ್ಯತೆ ಪಡೆದ ಪಕ್ಷಗಳು ಮತ್ತು ಗುಂಪುಗಳ ನಾಯಕರು ಮತ್ತು ಮುಖ್ಯ ಸಚೇತಕರು’ ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳಿಗೆ ಒಳಪಟ್ಟಿರುತ್ತದೆ. ಅನ್ವಯವಾಗುವ ಕಾನೂನು ಆಡಳಿತಕ್ಕೆ ಅನುಗುಣವಾಗಿಲ್ಲದ ವಿನಂತಿಯನ್ನು ಅಂಗೀಕರಿಸಲಾಗುವುದಿಲ್ಲ” ಎಂದು ಸ್ಪೀಕರ್ ಧನಕರ್ ಹೇಳಿದ್ದಾರೆ.

ಸಂಸತ್ತಿನಲ್ಲಿ ಮಾನ್ಯತೆ ಪಡೆದ ಪಕ್ಷಗಳು ಮತ್ತು ಗುಂಪುಗಳ ನಾಯಕರು ಮತ್ತು ಮುಖ್ಯ ಸಚೇತಕರಿಗೆ ಒದಗಿಸಬೇಕಾದ ಸೌಲಭ್ಯಗಳ ಬಗ್ಗೆ ಸಂಸತ್ (ಸೌಲಭ್ಯಗಳು) ಕಾಯಿದೆ-1998 ವ್ಯವಹರಿಸುತ್ತದೆ. ರಾಜ್ಯಸಭೆಯಲ್ಲಿ 15 ಕ್ಕಿಂತ ಕಡಿಮೆಯಿಲ್ಲದ ಮತ್ತು 24 ಕ್ಕಿಂತ ಹೆಚ್ಚು ಸದಸ್ಯರ ಬಲವನ್ನು ಹೊಂದಿರುವ ಮತ್ತು ಲೋಕಸಭೆಯಲ್ಲಿ 30 ಕ್ಕಿಂತ ಕಡಿಮೆಯಿಲ್ಲದ ಮತ್ತು 54 ಸದಸ್ಯರ ಬಲವನ್ನು ಹೊಂದಿರುವ ಪ್ರತಿ ಪಕ್ಷ “ಮಾನ್ಯತೆ ಪಡೆದ ಗುಂಪು” ಎಂದು ಈ ಕಾರ್ಯದೆ ವ್ಯಾಖ್ಯಾನಿಸುತ್ತದೆ.

ಕಾಯಿದೆಯ ಪ್ರಕಾರ, “ಮಾನ್ಯತೆ ಪಡೆದ ಪಕ್ಷ” ರಾಜ್ಯಸಭೆಯಲ್ಲಿ 25 ಕ್ಕಿಂತ ಕಡಿಮೆಯಿಲ್ಲದ ಸದಸ್ಯರ ಬಲವನ್ನು ಹೊಂದಿರಬೇಕು ಮತ್ತು ಲೋಕಸಭೆಯಲ್ಲಿ 55 ಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿರಬಾರದು. ಮಾನ್ಯತೆ ಪಡೆದ ಗುಂಪುಗಳು ಮತ್ತು ಪಕ್ಷಗಳ ನಾಯಕರು ಮತ್ತು ಮುಖ್ಯ ಸಚೇತಕರಿಗೆ ಸೌಲಭ್ಯಗಳಿಗೆ ಸಂಬಂಧಿಸಿದಂತೆ, “ಮಾನ್ಯತೆ ಪಡೆದ ಗುಂಪಿನ ಮತ್ತು ಪಕ್ಷದ ಪ್ರತಿಯೊಬ್ಬ ನಾಯಕ, ಉಪ ನಾಯಕ ಮತ್ತು ಮುಖ್ಯ ಸಚೇತಕನಿಗೆ ದೂರವಾಣಿ ಮತ್ತು ಕಾರ್ಯದರ್ಶಿ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ”

ವಿಡಿಯೊ ನೋಡಿ: ಸಂಸದರನ್ನು ಅಮಾನತು ಮಾಡಿ ಕರಾಳ ಶಾಸನಕ್ಕೆ ಅನುಮೋದನೆ: ನವ ವಸಾಹತೀಕರಣದ ಮತ್ತೊಂದು ರೂಪ!? Janashakthi Media

Donate Janashakthi Media

Leave a Reply

Your email address will not be published. Required fields are marked *