ನಾನು ಭಾರತವನ್ನು ತೊರೆಯುವ ಮುನ್ನ ಅರುಣ್ ಜೇಟ್ಲಿಗೆ ತಿಳಿಸಿದ್ದೆ:‌ ವಿಜಯ್ ಮಲ್ಯ

ನವದೆಹಲಿ: ಬ್ಯಾಂಕ್ ಗಳಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಮತ್ತೊಂದು ಸ್ಫೋಟಕ ಸತ್ಯ ಹೇಳಿಕೊಂಡಿದ್ದೂ, ಬಂಧನ ಭೀತಿಯಿಂದಲೇ ದೇಶದಿಂದ ಪರಾರಿಯಾದರು ಎಂಬ ಮಾತುಗಳಿಗೆ ತಿಕ್ರಿಯಿಸಿರುವ ಮಲ್ಯ, ನಾನು ಕಳ್ಳನಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಮಲ್ಯ

2015ರಲ್ಲಿ ಭಾರತದಿಂದ ಇಂಗ್ಲೆಂಡ್ ಬಂದದ್ದು ನಿಜ. ಹಾಗಂತಾ ನನಗೇನು ಪರಾರಿಯಾಗುವ ಉದ್ದೇಶವಿರಲಿಲ್ಲ. ಇಂಗ್ಲೆಂಡ್ ಗೆ ಹೊರಡುವ ಮುನ್ನ ನಾನು ದೆಹಲಿಯ ಸಂಸತ್ ಭವನಕ್ಕೆ ಭೇಟಿ ನೀಡಿದ್ದೆ. ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿ ಮಾಡಿ ಸಮಾಲೋಚಿಸಿದ್ದೆ ಎಂದರು.

ಜಿನೇವಾದಲ್ಲಿ ಒಂದು ಸಮ್ಮೇಳನವಿದೆ. ಅಲ್ಲಿಗೆ ಹೋಗಿ ಇಂಗ್ಲೆಂಡ್ ಗೆ ಹೋಗ್ತೀನಿ ಅಂತಾ ಅವರೊಟ್ಟಿಗೆ ಟೀ ಕುಡಿಯುತ್ತಲೇ ಚರ್ಚಿಸಿದ್ದೆ. ನಾನೆಂದೂ ದೇಶ ಬಿಟ್ಟು ಪರಾರಿಯಾಗಿ, ತಲೆಮರೆಸಿಕೊಳ್ಳಬೇಕು ಅಂದುಕೊಂಡಿರಲಿಲ್ಲ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣದಲ್ಲಿ ರಸ್ತೆ ಬದಿಯ ಮುಳ್ಳು, ಪೊದೆ ತೆರವುಗೊಳಿಸಿದ ಮಹಿಳೆ 

ದೇಶವಾಸಿಗಳಿಗೆ ಜೇಟ್ಲಿ ಸುಳ್ಳು ಹೇಳಿದ್ದೇಕೆ? ಪಾಸ್ ಪೋರ್ಟ್ ಇಲ್ದೆ ಭಾರತಕ್ಕೆ ಹೇಗೆ ಬರಲಿ?

ಅವತ್ತು ವಿತ್ತ ಸಚಿವ ಜೇಟ್ಲಿಯವರ ಪಾರ್ಲಿಮೆಂಟ್ ಕಚೇರಿಯಲ್ಲಿ ಕುಳಿತು ನಾನು ಚಹಾ ಕುಡಿದಿದ್ದೆ. ಆದರೆ, ನಾನು ಇಂಗ್ಲೆಂಡ್ ಹೋಗುತ್ತಿದ್ದಂತೆ ದೇಶದೆಲ್ಲೆಡೆ ನಾನು ಪರಾರಿಯಾಗಿದ್ದೇನೆ ಅನ್ನೋ ಸುದ್ದಿ ಹರಡಿಸಲಾಯಿತು. ಈ ವೇಳೆ ಜೇಟ್ಲಿ ಕೂಡ ನಮ್ಮಿಬ್ಬರ ಭೇಟಿಯನ್ನು ಅಲ್ಲಗೆಳೆದಿದ್ದರು. ನನ್ನನ್ನ ಕಳ್ಳನಂತೆ ಬಿಂಬಿಸಿದರು. ಆದರೆ, ನನ್ನ ಅದೃಷ್ಟಕ್ಕೆ ಕಾಂಗ್ರೆಸ್ ಸಂಸದರೊಬ್ಬರು ನಮ್ಮಿಬ್ಬರ ಭೇಟಿಯನ್ನು ಗಮನಿಸಿದರು.

ಹೀಗಾಗಿ ಆ ವ್ಯಕ್ತಿ ಮಾಧ್ಯಮಗಳ ಮುಂದೆ ನನ್ನ ಜೇಟ್ಲಿ ಭೇಟಿಯನ್ನು ಸಾಕ್ಷೀಕರಿಸಿದರು. ಆ ಬಳಿಕವೂ ಜೇಟ್ಲಿ, ಹಾಗೇ ಸಂಸತ್ ಭವನದಲ್ಲಿ ಹಾದು ಹೋಗುವಾಗ ಎದುರಾಗಿದ್ದರು ಅಂತಾ ದಿಕ್ಕು ತಪ್ಪಿಸಿದರು ಎಂದು ಮಲ್ಯ ಆರೋಪಿಸಿದ್ದಾರೆ. ನಾನು ಭಾರತಕ್ಕೆ ಬರಬಾರದು ಅಂತೇನಿಲ್ಲ. ಆದರೆ ನನ್ನ ಪಾಸ್ ಪೋರ್ಟನ್ನೇ ರದ್ದು ಮಾಡಿದ್ದೀರಿ ನಾನ್ ಹೇಗೆ ತಾನೇ ಬರಲಿ ಅಂತಲೂ ಪ್ರಶ್ನಿಸಿದ್ದಾರೆ.

5 ಸಾವಿರ ಕೋಟಿ ವಾಪಸ್ ಆಫರ್ ತಿರಸ್ಕಾರ, ನನ್ನ ಪರ ಕಿರಣ್ ಮಜುಂದಾರ್ ಬ್ಯಾಟಿಂಗ್

ಬ್ಯಾಂಕ್ ಗಳಿಂದ ಪಡೆದಿದ್ದ ಸಾಲವನ್ನೆಲ್ಲ ನಾನು ಕಿಂಗ್ ಫಿಶರ್ ಏರ್ ವೇಸ್ ನಲ್ಲಿ ತೊಡಗಿಸಿದೆ. ನನ್ನ ಬೆವರಿನ, ಶ್ರಮದ 3 ಸಾವಿರ ಕೋಟಿಯನ್ನೂ ಹೂಡಿಕೆ ಮಾಡಿ ಕೈಸುಟ್ಟುಕೊಂಡಿದ್ದೆ. ಹಾಗಂತಾ ನಾನು ನನಗೆ ನೀಡಿದ್ದ ಬ್ಯಾಂಕ್ ಗಳ 5 ಸಾವಿರ ಕೋಟಿ ಸಾಲವನ್ನು ತೀರಿಸುತ್ತೇನೆ ಅಂತಾ ಬ್ಯಾಂಕ್ ಗಳಿಗೆ ಹೇಳಿದ್ದೆ.

ಆದರೆ ನನ್ನ ಆಸ್ತಿ ಮೇಲೆ ಕಣ್ಣಿಟ್ಟು ಕುಳಿತಿದ್ದ ಬ್ಯಾಂಕ್ ಗಳು ಈ ಆಫರನ್ನು ತಿರಸ್ಕರಿಸಿದವು. ಹಾಗಂತಾ ಇವತ್ತಿನವರೆಗೂ ಆ 5 ಸಾವಿರ ಕೋಟಿ ಸಾಲಕ್ಕೆ ಬ್ಯಾಂಕ್ ಗಳು 14 ಸಾವಿರ ಕೋಟಿಯನ್ನು ನನ್ನ ಆಸ್ತಿ, ಷೇರು, ಯುಬಿಯ ಬ್ರಾಂಡ್ ಮೌಲ್ಯಗಳಿಂದ ಕ್ರೂಡೀಕರಿಸಿ ವಾಪಸ್ ಪಡೆದಿವೆಯಲ್ಲಾ.

ಹಾಗಿದ್ದ ಮೇಲೆ ನಾನು ಹೇಗೆ ಕಳ್ಳನಾಗುತ್ತೇನೆ ಅಂತಲೂ ಮಲ್ಯ ಪ್ರಶ್ನಿಸಿದ್ದಾರೆ. ನನ್ನ ಉದ್ಯಮ ಜಗತ್ತಿನ ಶ್ರಮವನ್ನು ಸಹೋದರಿ ಸಮಾನರಾದ ಕಿರಣ್ ಮಜುಂದಾರ್ ಕೂಡಾ ಮೆಚ್ಚಿದರು. ನಾನು ಮೋಸ ಮಾಡಿ ಹೋಗಿದ್ದೇನೆ ಎಂದಾಗ, ಅವನ ಶ್ರಮದ ಹಣವನ್ನೆಲ್ಲಾ ಕಳೆದುಕೊಂಡವನು ಹೇಗೆ ವಂಚಕನಾಗುತ್ತಾನೆ ಅಂತಲೂ ಕಿರಣ್ ಪ್ರಶ್ನಿಸಿದ್ದನ್ನು ಮಲ್ಯ ಉಲ್ಲೇಖಿಸಿದ್ದಾರೆ.

ಕಿಂಗ್ ಫಿಶರ್ ಸಿಬ್ಬಂದಿಗೆ ಕ್ಷಮೆ ಯಾಚಿಸಿರುವ ಮಲ್ಯ, ಸಿಬ್ಬಂದಿಗೆ ಸಂಬಳ ನೀಡಲು ಬ್ಯಾಂಕ್ ಗಳು ಬಿಡಲಿಲ್ಲ

ತಮ್ಮ ಕನಸಿನ ಕೂಸು ಕಿಂಗ್ ಫಿಶರ್ ಏರ್ ಲೈನ್ಸ್ ದೊಡ್ಡ ಮಟ್ಟದಲ್ಲಿ ನಷ್ಟ ತಂದಿದ್ದನ್ನು ಮಲ್ಯ ಒಪ್ಪಿಕೊಂಡಿದ್ದಾರೆ. ಹಾಗಂತಾ ನನಗೆ ನನ್ನ ಸಂಸ್ಥೆ ಉಳಿಸಿಕೊಳ್ಳಲು ಇದ್ದ ಎಲ್ಲ ಮಾರ್ಗಗಳನ್ನು ಬ್ಯಾಂಕ್ ಗಳು ಬಂದ್ ಮಾಡಿದ್ದವು. ಸಂಸ್ಥೆ ಖಾತೆಯಲ್ಲಿದ್ದ 260 ಕೋಟಿ ಹಣದಲ್ಲಿ ಸಿಬ್ಬಂದಿ ಸಂಬಳ ಕ್ಲೀಯರ್ ಮಾಡಲು ನಿರ್ಧರಿಸಿದ್ದೆ.

ಆದರೆ ಬ್ಯಾಂಕ್ ಗಳು ಇದಕ್ಕೆ ಅಡ್ಡಗಾಲು ಹಾಕಿ, ಕರ್ನಾಟಕ ಹೈಕೋರ್ಟ್ ಮೂಲಕ ಸ್ಟೇ ತಂದುಬಿಟ್ಟವು. ಅಂದು ನನ್ನಿಂದಾಗಿ ಒಂದು ಕುಟುಂಬ ಆತ್ಮಹತ್ಯೆಗೆ ಶರಣಾಯಿತು. ಸಿಬ್ಬಂದಿ ಎದುರಿಸಿದ ಸಮಸ್ಯೆಗಳಿಗೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ ಮಲ್ಯ.

ಇದನ್ನೂ ನೋಡಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ | ವಿಶ್ಲೇಷಣೆ – ಅಹಮದ್ ಹಗರೆ Janashakthi Media

Donate Janashakthi Media

Leave a Reply

Your email address will not be published. Required fields are marked *