ಹೈದರಾಬಾದ್: ಹಾಸ್ಟೆಲ್ ವಿದ್ಯಾರ್ಥಿನಿಯರ ರಕ್ಷಣೆ ಮಾಡಬೇಕಾದ ವಾರ್ಡನ್ ಒಬ್ಬರು, ವಿದ್ಯಾರ್ಥಿನಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ನವೆಂಬರ್ 24 ರಂದು ತೆಲಂಗಾಣದಲ್ಲಿ ನಡೆದಿದ್ದೂ, ತಡವಾಗಿ ಬೆಳಕಿಗೆ ಬಂದಿದೆ.
ಹಾಸ್ಟೆಲ್ ವಾರ್ಡನ್ ಒಬ್ಬರು ವಿದ್ಯಾರ್ಥಿನಿಯನ್ನು ಕೋಲಿನಿಂದ ಮನಬಂದಂತೆ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೊರದಾಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಚಾಲನಾ ಪರವಾನಗಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಭವಾನಿ ಎಂದು ಗುರುತಿಸಲಾದ ವಾರ್ಡನ್, ಪರೀಕ್ಷೆಯ ನಂತರ ವಿದ್ಯಾರ್ಥಿನಿ ಅನುಮತಿ ಪಡೆಯದೆ ಹೊರಗೆ ಹೋಗಿದ್ದಕ್ಕೆ ಈ ರೀತಿ ದಂಡಿಸಿದ್ದಾರೆ ಎನ್ನಲಾಗಿದೆ. “ನೀನು ಕಾಣೆಯಾದಾಗ ನಾನು ಎಷ್ಟು ಆತಂಕ ಪಟ್ಟೆ ಗೊತ್ತಾ? ನಿನ್ನ ಈ ವರ್ತನೆಯಿಂದ ನನ್ನ ಕೆಲಸಕ್ಕೇ ಕುತ್ತು ಬರುತ್ತದೆ” ಎಂದು ಕಿರುಚಾಡುತ್ತಾ ವಾರ್ಡನ್ ವಿದ್ಯಾರ್ಥಿನಿಯ ಮೇಲೆ ಎರಗಿದ್ದಾರೆ. ವಿದ್ಯಾರ್ಥಿನಿ ಪದೇ ಪದೇ ಕ್ಷಮೆ ಕೇಳಿದರೂ ಬಿಡದ ಭವಾನಿ, ತನ್ನ ಕೈಯಿಂದ ಮತ್ತು ಕೋಲಿನಿಂದ ಆಕೆಯನ್ನು ಥಳಿಸಿದ್ದಾರೆ. ಈ ಇಡೀ ದೃಶ್ಯವನ್ನು ಸಹಪಾಠಿಯೊಬ್ಬರು ರಹಸ್ಯವಾಗಿ ಚಿತ್ರೀಕರಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ವಿಶೇಷವಾಗಿ ಎಸ್ಸಿ (SC) ಸಮುದಾಯದ ವಿದ್ಯಾರ್ಥಿಗಳ ಕ್ಷೇಮದ ಬಗ್ಗೆ ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ವಿವಿಧ ಸಾಮಾಜಿಕ ಸಂಘಟನೆಗಳು ಆಗ್ರಹಿಸಿವೆ.
ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಪ್ರತಿಕ್ರಿಯಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆಯಾದರೂ, ವಾರ್ಡನ್ ವಿರುದ್ಧ ಈವರೆಗೆ ಯಾವುದೇ ಅಧಿಕೃತ ಪ್ರಕರಣ ಅಥವಾ ಇಲಾಖಾ ತನಿಖೆ ಆರಂಭವಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಅಮಾನುಷ ಕೃತ್ಯದ ವಿರುದ್ಧ ಕಠಿಣ ಕ್ರಮ ಜರುಗಿಸಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಇದನ್ನೂ ನೋಡಿ: ಬೀದಿಯಲ್ಲಿ ಕ್ರಿಸ್ಮಸ್ ವಿರುದ್ಧ ಭಜರಂಗಿಗಳ ಅಟ್ಟಹಾಸಚರ್ಚ್ ನಲ್ಲಿ ಪ್ರಧಾನಿಗಳ ಮಂದಹಾಸ?? Janashakthi Media
