ಹಿಂದುಳಿದ ವರ್ಗದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

ಬೆಂಗಳೂರು: ಹಿಂದುಳಿದ ವರ್ಗದ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಒಂದು ಅತ್ತ್ಯುತ್ತಮ ಯೋಜನೆ ಘೋಷಣೆಯಾಗಿದ್ದೂ, ಉಚಿತ ಹೊಲಿಗೆ ಯಂತ್ರ ವಿತರಣೆಯ ರೂಪದಲ್ಲಿ ಆರ್ಥಿಕ ನೆರವು ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಯೋಜನೆಯ ಮೂಲ ಉದ್ದೇಶ, ಮಹಿಳೆಯರನ್ನು ಮನೆಯಲ್ಲೇ ಇದ್ದುಕೊಂಡು ಉದ್ಯೋಗ ಆರಂಭಿಸಲು ಪ್ರೇರೇಪಿಸುವುದು ಮತ್ತು ಕುಟುಂಬದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದು. ಕೇವಲ ಸ್ವಾವಲಂಬಿತ್ವವಷ್ಟೇ ಅಲ್ಲ, ಇದು ಅವರ ಆತ್ಮವಿಶ್ವಾಸವನ್ನೂ ಬೆಳೆಸಲಿದೆ.

2025-26ನೇ ಸಾಲಿಗೆ ಗುರಿಯಾಗಿರುವ ಈ ಯೋಜನೆಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವೊಂದು ಮುನ್ನಡೆ ನೀಡಿದ್ದು, ಅರ್ಜಿ ಆಹ್ವಾನಿಸಲು ಅಧಿಕೃತ ಪ್ರಕಟಣೆ ನೀಡಲಾಗಿದೆ.

ಇದನ್ನೂ ಓದಿ: ತತ್ಕಾಲ್ ಟಿಕೆಟ್ ಹಗರಣ ಬಯಲು; ರೈಲು ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾಯವಾಗಲು ಕಾರಣ ಬಿಚ್ಚಿಟ್ಟ ಐಆರ್‌ಸಿಟಿಸಿ!

ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಆಗಿದ್ದು, ಸೇವಾ ಸಿಂಧು ಪೋರ್ಟಲ್ ಅಥವಾ ಗ್ರಾಮಒನ್ ಕೇಂದ್ರಗಳ ಮೂಲಕ ಸಲ್ಲಿಸಬಹುದಾಗಿದೆ.

ಅರ್ಹತೆಗಳಂತೆ, ಹಿಂದುಳಿದ ವರ್ಗಗಳ 1, 2ಎ, 3ಎ, ಮತ್ತು 3ಬಿ ವರ್ಗದ ಮಹಿಳೆಯರು ಈ ಯೋಜನೆಗೆ ಅರ್ಹರಾಗಿದ್ದು, ಆಯ್ದ ಸಮುದಾಯಗಳ ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 18 ರಿಂದ 55 ವರ್ಷ ವಯೋಮಿತಿಯಲ್ಲಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಮಹಿಳೆಯರು ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ ಫೋಟೋ, ಬ್ಯಾಂಕ್ ಪಾಸ್‌ಬುಕ್ ನಕಲು ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

ನಗರದ ಮಹಿಳೆಯರ ಆದಾಯ ವರ್ಷಕ್ಕೆ ರೂ.1,20,000 ಒಳಗಿರಬೇಕು ಮತ್ತು ಗ್ರಾಮಾಂತರ ಮಹಿಳೆಯರ ಆದಾಯ ರೂ.98,000 ಒಳಗಿರಬೇಕು ಎಂಬ ಮಿತಿ ಇರುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-06-2024 ಆಗಿದ್ದು, ಈ ದಿನಾಂಕದ ನಂತರ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ ಎಂಬ ಸ್ಪಷ್ಟ ಸೂಚನೆ ನೀಡಲಾಗಿದೆ.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಜಾರಿಗೆ ಬರುತ್ತಿರುವ ಈ ಯೋಜನೆ ಮಹಿಳೆಯರ ಬದುಕಿಗೆ ಹೊಸ ದಾರಿ ನೀಡುವಂತಿದೆ. ಇದು ಕೇವಲ ಹೊಲಿಗೆ ಯಂತ್ರವಲ್ಲ; (empowerment tool) ಬದುಕನ್ನು ಬದಲಾಯಿಸುವ ಹಾದಿಯ ಪ್ರಾರಂಭವಾಗಿದೆ.

ಇದನ್ನೂ ನೋಡಿ: ಬಾನು ಮುಷ್ತಾಕ್​ಗೆ ಬೂಕರ್ ಪ್ರಶಸ್ತಿ | ಮೂಲಭೂತವಾದಿಗಳಿಗೆ ಕಪಾಳಮೋಕ್ಷ – ಕೆ.ವಿ.ಪ್ರಭಾಕರ್ Janashakthi Media

Donate Janashakthi Media

Leave a Reply

Your email address will not be published. Required fields are marked *