ಬೆಂಗಳೂರು: ಮಹಿಳಾ ಟೆಕ್ಕಿಯೊಬ್ಬರು ಕೇಳಿದ ಸ್ಥಳದಲ್ಲಿ ನಿಲುಗಡೆ ಕೊಡದ್ದಕ್ಕೆ ಬಿಎಂಟಿಸಿ ಚಾಲಕನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ. ಬಿಎಂಟಿಸಿ 38ನೇ ಘಟಕದ ಚಾಲಕ ಅಥರ್ ಹುಸೇನ್ ಹಲ್ಲೆಗೊಳಗಾದವರೆಂದು ಗುರಿತಿಸಲಾಗಿದೆ.
ಈ ಸಂಬಂಧ ಕಾವ್ಯಾ ಎಂಬ ಮಹಿಳಾ ಟೆಕ್ಕಿಯನ್ನು ಬಂಧಿಸಲಾಗಿದ್ದು, ಬಳಿಕ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಜೂನ್ 11ರಂದು ಹುಸೇನ್ ಕರ್ತವ್ಯಕ್ಕೆ ಹಾಜರಾಗಿದ್ದು ಟಿನ್ ಫ್ಯಾಕ್ಟರಿ-ವಿಪ್ರೋಗೇಟ್-ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಬೆಳಗ್ಗೆ 8.30ರ ಸುಮಾರಿಗೆ ಕೈಗೊಂಡನಹಳ್ಳಿ ಬಸ್ ನಿಲ್ದಾಣದಲ್ಲಿ ಹತ್ತಿದ ಕಾವ್ಯಾ, ಮಾರ್ಗ ಮಧ್ಯೆ ಇರುವ ನಮ್ಮ ಕಚೇರಿ ಮುಂಭಾಗ ಬಸ್ ನಿಲುಗಡೆ ಮಾಡುವಂತೆ ಕೇಳಿಕೊಂಡರು.
ಆದರೆ, ಚಾಲಕ ಹುಸೇನ್, ಪೀಕ್ ಅವರ್ ಆಗಿರುವುದರಿಂದ ಎಲ್ಲೆಂದರಲ್ಲಿ ಬಸ್ ನಿಲುಗಡೆ ಮಾಡಲು ಸಾಧ್ಯವಿಲ್ಲ. ನಿಲ್ದಾಣದಲ್ಲೇ ನಿಲುಗಡೆ ಮಾಡುತ್ತೇವೆ ಎಂದಿದ್ದಾರೆ. ಅದಕ್ಕೆ ಕೋಪಗೊಂಡ ಕಾವ್ಯಾ, ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅದನ್ನು ಚಾಲಕ ಹುಸೇನ್ ಪ್ರಶ್ನಿಸಿದ್ದಾರೆ.ಅದರಿಂದ ಇನ್ನಷ್ಟು ಕೋಪಗೊಂಡ ಕಾವ್ಯಾ, ಬಲಗಾಲಿನ ಚಪ್ಪಲಿಯಿಂದ ಹುಸೇನ್ಗೆ ಹೊಡೆದಿದ್ದಾರೆ. ಬಳಿಕ ಬಸ್ನಿಂದ ಜಿಗಿದು ಓಡಲು ಯತ್ನಿಸಿದ್ದು ಬಳಿಕ ಆಕೆಯನ್ನು ಹಿಡಿದು ಬೆಳ್ಳಂದೂರು ಪೊಲೀಸರಿಗೆ ಒಪ್ಪಿಸಲಾಯಿತು.
ಬಳಿಕ ಪೊಲೀಸರು ಹುಸೇನ್ನಿಂದ ದೂರು ಪಡೆದು, ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದರು. ಬಳಿಕ ಆಕೆಯಿಂದ ಹೇಳಿಕೆ ದಾಖಲಿಸಿಕೊಂಡು ಕೋರ್ಟ್ಗೆ ಹಾಜರು ಪಡಿಸಿದ್ದು ಕೋರ್ಟ್ ಆಕೆಗೆ ಜಾಮೀನು ನೀಡಿ ಬಿಡುಗಡೆ ಮಾಡಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ಅಭಿಮಾನಿಗಳ ಉನ್ಮಾದ, ಸರ್ಕಾರದ ಅತ್ಯುತ್ಸಾಹ ಮತ್ತು ಮಾರುಕಟ್ಟೆಯ ದಾಹ Janashakthi Media