ಟೆಕ್ ಸಂಸ್ಥೆಗಳಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ವಿಸ್ತರಿಸುವ ಸರ್ಕಾರದ ನಿರ್ಧಾರ

ಪ್ರತಿಭಟನೆಗೆ ಸಿದ್ದತೆ ನಡೆಸುತ್ತಿರುವ ಕರ್ನಾಟಕ ಐಟಿ ನೌಕರರ ಸಂಘಟನೆಟೆಕ್ 

ಕರ್ನಾಟಕ ಸರ್ಕಾರವು ಜೂನ್ 10 ರ ಸುತ್ತೋಲೆಯಲ್ಲಿ, ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯಿದೆಯಿಂದ, ಐಟಿ, ಐಟಿಇಎಸ್ (IT/ITeS), ಸ್ಟಾರ್ಟ್ಅಪ್  ಗಳು, ಅನಿಮೇಷನ್, ಗೇಮಿಂಗ್, ಕಂಪ್ಯೂಟರ್ ಗ್ರಾಫಿಕ್ಸ್, ಟೆಲಿಕಾಂ ಮತ್ತು ಬಿಪಿಒ ಉದ್ಯಮಗಳಿಗೆ ವಿನಾಯಿತಿಯನ್ನು ಇನ್ನೂ ಐದು ವರ್ಷಗಳವರೆಗೆ ಅಂದರೆ, 2029ರ ವರೆಗೆ ವಿಸ್ತರಿಸಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಬಲವಾಗಿ ವಿರೋಧಿಸಿದೆ. ಐಟಿ ಉದ್ಯೋಗಿಗಳ ಬೃಹತ್ ಪ್ರತಿಭಟನೆಗೆ ಸಂಘ ವ್ಯಾಪಕ ಸಿದ್ದತೆ ನಡೆಸುತ್ತಿದೆ. ಟೆಕ್ 

2024ರ ಮಾರ್ಚ್ 16 ರಂದು, ಕರ್ನಾಟಕ ರಾಜ್ಯ ಸರ್ಕಾರ ಮಾಹಿತಿ ತಂತ್ರಜ್ಞಾನದ (IT/ITeS) ಉದ್ಯಮಗಳಲ್ಲಿ ನೀಡಿರುವ ಕೈಗಾರಿಕಾ ಉದ್ಯೋಗ (ಜಾರಿಯಲ್ಲಿರುವ ಆದೇಶ) ಕಾನೂನಿನ ವಿನಾಯತಿಯನ್ನು ತಕ್ಷಣವೇ ರದ್ದುಗೊಳಿಸುವಂತೆ ಒತ್ತಾಯಿಸಿ, ಬೆಂಗಳೂರಿನಲ್ಲಿನ ಕಾರ್ಮಿಕ ಭವನದಲ್ಲಿರುವ ಕಾರ್ಮಿಕ ಆಯುಕ್ತರ ಕಛೇರಿ ಎದುರು, ಮಾಹಿತಿ ತಂತ್ರಜ್ಞಾನ ಕಂಪನಿಗಳ ನೂರಾರು ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದರು. ವಿನಾಯಿತಿಯನ್ನು ಪಡೆಯುವಾಗ ವಿಧಿಸಲಾದ ನಾಲ್ಕು ಷರತ್ತುಗಳನ್ನು ಉದ್ಯೋಗದಾತರು ಪಾಲಿಸದ ಕಾರಣ ಇನ್ನು ಮುಂದೆ ವಿನಾಯಿತಿಯನ್ನು ನವೀಕರಿಸದಂತೆ ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಟೆಕ್

ಪ್ರತಿಭಟನೆಯ ನಂತರ ಕಾರ್ಮಿಕ ಸಂಘಟನೆಯ ಅಧ್ಯಕ್ಷರು ವಿ.ಜೆ.ಕೆ. ನಾಯರ್, KITU ಪ್ರದಾನ ಕಾರ್ಯದರ್ಶಿ ಸೂರಜ್ ನಿದಿಯಂಗ ಮತ್ತು ಸಂಘದ ಇತರೆ ಮುಖಂಡರು ಕಾರ್ಮಿಕ ಅಯುಕ್ತರನ್ನು ಭೇಟಿಮಾಡಿ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಗಣಿಸುವುದಾಗಿ ಕಾರ್ಮಿಕ ಆಯುಕ್ತರು ಭರವಸೆ ನೀಡಿದ್ದರು. ಸರ್ಕಾರ IT/ITeS ವಲಯಕ್ಕೆ ವಿನಾಯಿತಿ ನೀಡುವುದಿಲ್ಲ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದರು. ಆದರೆ, 20 ಲಕ್ಷ ಐಟಿ ಉದ್ಯೋಗಿಗಳ ಕಳವಳವನ್ನು ಕಡೆಗಣಿಸಿರುವ ರಾಜ್ಯ ಸರ್ಕಾರವು ಏಕಪಕ್ಷೀಯವಾಗಿ ವಿನಾಯಿತಿಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಿ ಜೂನ್ 10ರಂದು ಸುತ್ತೋಲೆ ಹೊರಡಿಸಿದೆ. ಇದು ಐಟಿ ಉದ್ಯೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಟೆಕ್ 

“ಹಿಂದಿನ ವಿನಾಯಿತಿ ಸಂದರ್ಭದಲ್ಲಿ ಕಂಪನಿಗಳು ವಿಧಿಸಿದ ಷರತ್ತುಗಳನ್ನು ಅನುಸರಿಸಲು ವಿಫಲವಾದ ಬಗ್ಗೆ ಕೆಐಟಿಯು ಕಳವಳ ವ್ಯಕ್ತಪಡಿಸಿದ ಹೊರತಾಗಿಯೂ ವಿನಾಯಿತಿಯನ್ನು ಮುಂದುವರಿಸುವ ನಿರ್ಧಾರಕ್ಕೆ ಸರ್ಕಾರ ಬಂದಿದೆ” ಎಂದು ಕೆಐಟಿಯು ಪ್ರಧಾನ ಕಾರ್ಯದರ್ಶಿ ಸೂರಜ್ ನಿದಿಯಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಟೆಕ್ 

ಸರ್ಕಾರದ ಮಾಹಿತಿ ತಂತ್ರಜ್ಞಾನ ಕೈಗಾರಿಕೆಯಲ್ಲಿ ನೀಡಿರುವ ವಿನಾಯತಿಯ ವಿರುದ್ದ ಕರ್ನಾಟಕ ರಾಜ್ಯ ಐಟಿ ಎಂಪ್ಲಾಯೀಸ್ ಯೂನಿಯನ್ (ರಿ) (KITU) ಈಗಾಗಲೇ ಕರ್ನಾಟಕ ಉಚ್ಚ ನ್ಯಾಯಾಲದಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಟೆಕ್

2014ರಿಂದ ವಿನಾಯಿತಿ

ಸರ್ಕಾರದ ಅಂದಾಜಿನ ಪ್ರಕಾರ, ಪ್ರಸ್ತುತ ಕರ್ನಾಟಕದಲ್ಲಿ 8,785 IT/BT ಸಂಸ್ಥೆಗಳಲ್ಲಿ ಸುಮಾರು 18 ಲಕ್ಷ ವೃತ್ತಿಪರರು ಉದ್ಯೋಗದಲ್ಲಿದ್ದಾರೆ. ಕರ್ನಾಟಕವು IT, ITeS, ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆ ಮತ್ತು ಜ್ಞಾನ ಪ್ರಕ್ರಿಯೆ ಹೊರಗುತ್ತಿಗೆ ಸಂಸ್ಥೆಗಳಿಗೆ ಕಾರ್ಮಿಕ ನಿಯಮಗಳಿಂದ ನಾಲ್ಕಕ್ಕೂ ಹೆಚ್ಚು ಸಂದರ್ಭಗಳಲ್ಲಿ IE(SO) ಕಾಯಿದೆಯ ಅನ್ವಯದಿಂದ ವಿನಾಯಿತಿಯನ್ನು ಪಡೆದುಕೊಂಡಿತ್ತು. ಜನವರಿ 25, 2014 ರಂದು, ರಾಜ್ಯ ಸರ್ಕಾರವು 1946 ರ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ಕಾಯ್ದೆಯಿಂದ ಕಂಪನಿಗಳಿಗೆ ವಿನಾಯಿತಿ ನೀಡುವ ಅಧಿಸೂಚನೆಯನ್ನು ಹೊರಡಿಸಿತು. ಈ ವಿನಾಯಿತಿಯನ್ನು ಮೇ 25, 2019 ರಂದು ಹೆಚ್ಚುವರಿ ಐದು ವರ್ಷಗಳವರೆಗೆ ವಿಸ್ತರಿಸಲಾಯಿತು. ಈ ಅವಧಿ ಮೇ 25, 2024 ರಂದು ಮುಗಿದಿತ್ತು. ಈಗ ಮತ್ತೆ 5 ವರ್ಷಗಳಿಗೆ ವಿಸ್ತರಿಸಿ ರಾಜ್ಯ ಸರ್ಕಾರ  ಸುತ್ತೋಲೆ ಹೊರಡಿಸಿದೆ.

ಇದನ್ನು ಓದಿ : ರಾಜಕೀಯ ನೈತಿಕತೆಯೂ ಅಧಿಕಾರ ರಾಜಕಾರಣವೂ

ಸಂಸ್ಥೆಗಳಿಂದ ಷರತ್ತುಗಳ ಉಲ್ಲಂಘನೆ

“ವಿನಾಯಿತಿ ನೀಡುವ ಷರತ್ತುಗಳ ಪ್ರಕಾರ, ಪ್ರತಿಯೊಂದು ಸಂಸ್ಥೆಯು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013 ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳ ಪ್ರಕಾರ ‘ಆಂತರಿಕ ಸಮಿತಿ’ಯನ್ನು ರಚಿಸಬೇಕಾಗಿದೆ. ಉದ್ಯೋಗಿಗಳು ಮತ್ತು ಉದ್ಯೋಗದಾತರ ಸಮಾನ ಪ್ರಾತಿನಿಧ್ಯದೊಂದಿಗೆ ಕುಂದುಕೊರತೆ ಪರಿಹಾರ ಸಮಿತಿಯನ್ನು ಸ್ಥಾಪಿಸುವ  ಅಗತ್ಯವಿದೆ. ನೌಕರರ ವಿರುದ್ಧ ಯಾವುದೇ ಶಿಸ್ತು ಕ್ರಮ, ವಿಸರ್ಜನೆ, ಮುಕ್ತಾಯ, ಪದಚ್ಯುತಿ, ವಜಾ ಇತ್ಯಾದಿಗಳ ಬಗ್ಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು ಮತ್ತು ಸರ್ಕಾರವು ಕೋರಿದಾಗ ಉದ್ಯೋಗಿ ಸೇವಾ ಪರಿಸ್ಥಿತಿಗಳ ಕುರಿತು ವಿವರಗಳನ್ನು ಒದಗಿಸಲು ಸಿದ್ಧರಾಗಿರಬೇಕು” ಎಂದು ನಿದಿಯಂಗ ಹೇಳುತ್ತಾರೆ. ಟೆಕ್ 

“ಆದಾಗ್ಯೂ, ಈ ಎಲ್ಲಾ ಷರತ್ತುಗಳನ್ನು ಸಂಸ್ಥೆಗಳು ಸ್ಪಷ್ಟವಾಗಿ ಉಲ್ಲಂಘಿಸಿವೆ, ಮತ್ತು ಸಾವಿರಾರು ಉದ್ಯೋಗಿಗಳನ್ನು ನೋಟಿಸ್ ಅಥವಾ ವಿಚಾರಣೆಯಿಲ್ಲದೆ ಬಿಡುಗಡೆ ಮಾಡಲಾಗುತ್ತದೆ, ಕೆಲಸದಿಂದ ವಜಾಗೊಳಿಸಲಾಗುತ್ತದೆ ಮತ್ತು ಕೈಗಾರಿಕಾ ವಿವಾದಗಳ ಕಾಯಿದೆಯಡಿ ಸರ್ಕಾರದಿಂದ ಸೂಕ್ತ ಅನುಮತಿ ಪಡೆಯಲು ಕಾನೂನು ಅವಶ್ಯಕತೆಗಳನ್ನು ಅನುಸರಿಸದೆ ಸಗಟು ವಜಾಗೊಳಿಸಲಾಗುತ್ತದೆ.” ಎಂದು ನಿದಿಯಂಗ ಆರೋಪಿಸುತ್ತಾರೆ. ಟೆಕ್ 

“ಕೆಐಟಿಯು ಅಂತಹ ಸಂದರ್ಭಗಳಲ್ಲಿ ಹಲವಾರು ವಿವಾದಗಳನ್ನು ಎತ್ತಿದೆ ಮತ್ತು ಯಾವುದೇ ಸಂದರ್ಭಗಳಲ್ಲಿ, ವಿನಾಯಿತಿ ಆದೇಶದ III ನೇ ಷರತ್ತಿನಲ್ಲಿ ಉಲ್ಲೇಖಿಸಿದಂತೆ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ತಿಳಿಸುವ ಅಗತ್ಯವನ್ನು ಉದ್ಯೋಗದಾತರು ಅನುಸರಿಸುವುದಿಲ್ಲ ಎಂದು ಕಂಡುಹಿಡಿದಿದೆ. ಈ ಆಧಾರದ ಮೇಲೆ, KITU IT/ITeS/ಜ್ಞಾನ-ಆಧಾರಿತ ಉದ್ಯಮಗಳನ್ನು ನಿಯಂತ್ರಿಸುವ ಸೇವಾ ಷರತ್ತುಗಳ ನಿಯಮಾವಳಿಗಳನ್ನು ಪ್ರಕ್ರಿಯೆಯಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳ ಭಾಗವಹಿಸುವಿಕೆಯೊಂದಿಗೆ ನಿಖರವಾಗಿ ವ್ಯಾಖ್ಯಾನಿಸಲಾಗಿದೆ ಎಂದು ಪ್ರತಿಪಾದಿಸುತ್ತದೆ. ವಿನಾಯಿತಿಯನ್ನು ಕೊನೆಗೊಳಿಸುವುದರ ಮೂಲಕ ಮತ್ತು IE (SO) ಕಾಯಿದೆಯ ನಿಬಂಧನೆಗಳನ್ನು ಅನ್ವಯಿಸುವ ಮೂಲಕ ಮತ್ತು IT/ITeS/ಜ್ಞಾನ ಉದ್ಯಮದ ಅಗತ್ಯತೆಗಳಿಗೆ ಸೂಕ್ತವಾಗಿ ಅಳವಡಿಸಿಕೊಳ್ಳುವ ಮೂಲಕ ಮಾತ್ರ ಇದನ್ನು ಸಾಧಿಸಬಹುದು” ಎಂದು ನಿದಿಯಂಗ ಹೇಳಿದ್ದಾರೆ. ಟೆಕ್ 

ಪ್ರತಿಭಟನೆಗೆ ನಿರ್ಧಾರ

ಕರ್ನಾಟಕ ರಾಜ್ಯ ಐಟಿ/ ಐಟಿಇಎಸ್ ನೌಕರರ ಸಂಘವು ವಿನಾಯಿತಿಯನ್ನು ಪ್ರಶ್ನಿಸಿ ಕರ್ನಾಟಕ ಹೈಕೊರ್ಟ್ ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯು ಪ್ರಸ್ತುತ ತೀರ್ಪಿನ ಹಂತದಲ್ಲಿದೆ ಎಂಬುದನ್ನು ಗಮನಿಸಬೇಕಾದ ಅಂಶವಾಗಿದೆ.  ಇದರ ನಡುವೆಯೂ, ಸರ್ಕಾರದ ಈ ಏಕಪಕ್ಷೀಯ ನಿರ್ಧಾರದ ವಿರುದ್ದ ಹೋರಾಟ ನಡೆಸಲಾಗುತ್ತದೆ ಎಂದಿರುವ ಕೆಐಟಿಯು ಸಂಘಟನೆಯು, ಈ ಉದ್ಯಮಗಳ ನೌಕರರ ನಡುವೆ ವ್ಯಾಪಕ ಪ್ರಚಾರ ನಡೆಸುತ್ತಿದೆ.  ಟೆಕ್ ಟೆಕ್ 

ಇದನ್ನು ನೋಡಿ : ಲೋಕಮತ 2024 | ಪಶ್ಚಿಮ ರಾಜ್ಯಗಳಲ್ಲೂ ಬಿಜೆಪಿಗೆ ಹಿನ್ನಡೆ Janashakthi Media

Donate Janashakthi Media

Leave a Reply

Your email address will not be published. Required fields are marked *