ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ದಾಖಲಾತಿ ಎಲ್ಲರಿಗಿಂತಲೂ ಕಡಿಮೆ.

ದೇಶದ ಜನಸಂಖ್ಯೆಯ 14% ರಷ್ಟಿದ್ದರೂ, ಉನ್ನತ ಶಿಕ್ಷಣವನ್ನು ಪಡೆಯುವವರಲ್ಲಿ ಮುಸ್ಲಿಮರು  ಕೇವಲ 4.6%ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಗಳು (ಎಸ್‌ಸಿ) ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ದಾಖಲಾತಿಯು 4.2%, 11.9% ಮತ್ತು 4% ರಷ್ಟು ಸುಧಾರಿಸಿದೆ , ಆದರೆ  ಮುಸ್ಲಿಂ ಸಮುದಾಯದಲ್ಲಿ ಇದು  8% ದಷ್ಟು ಕುಸಿದಿದೆ. ಅಖಿಲ ಭಾರತ ಉನ್ನತ ಶಿಕ್ಷಣ  ಸಮೀಕ್ಷೆ (AISHE ) 2020- 21 ತಿಳಿಸಿರುವುದಾಗಿ ‘ದಿ ಹಿಂದೂ’ (ಮೇ 30) ವರದಿ ಮಾಡಿದೆ.

ಈ ಅಭೂತಪೂರ್ವ ಕುಸಿತಕ್ಕೆ  ಕೊವಿಡ್ ಸಾಂಕ್ರಾಮಿಕ ಭಾಗಶಃ ಕಾರಣವಾಗಿದ್ದರೂ, ಒಟ್ಟಾರೆಯಾಗಿ ಇದು ಈ ಸಮುದಾಯದ ಹೆಚ್ಚಿನ ಆರ್ಥಿಕ ಬಡತನವನ್ನು ಸೂಚಿಸುತ್ತದೆ, ಈ ಬಡತನದಿಂದಾಗಿ ಆ ಸಮುದಾಯ  ತನ್ನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪದವಿ ಹಂತದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಬಿಡುವ  ಬದಲು ಉದ್ಯೋಗಾರ್ಥಿಗಳ ಸಾಲಿಗೆ ಸೇರುವಂತೆ ಮಾಡಬೇಕಾಗುತ್ತದೆ ಎಂದು ವರದಿ ಹೇಳಿದೆ.

ಮುಸ್ಲಿಮರು ಜನಸಂಖ್ಯೆಯ ಸುಮಾರು 20% ರಷ್ಟಿರುವ ಉತ್ತರ ಪ್ರದೇಶದ್ದು ಈ ರಂಗದಲ್ಲಿ  36%ರಷ್ಟು ಕುಸಿತದೊಂದಿಗೆ ಅತ್ಯಂತ ಕೆಟ್ಟ ಸಾಧನೆ. ಇದರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 26%, ಮಹಾರಾಷ್ಟ್ರದಲ್ಲಿ 8.5% ಮತ್ತು ತಮಿಳುನಾಡಿನಲ್ಲಿ 8.1% ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಉತ್ತರ ಪ್ರದೇಶದಲ್ಲಿ ಕಾಲೇಜುಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದ್ದರೂ, ಮುಸ್ಲಿಮರ ದಾಖಲಾತಿ ಪ್ರಮಾಣವು ಕೇವಲ 4.5% ರಷ್ಟಿದೆ ಎಂದು ಹಿಂದೂ ವರದಿ ಹೇಳಿದೆ.

ದೆಹಲಿಯಲ್ಲಿ ಶಿಕ್ಷಣದ ಸುಧಾರಣೆಗಳ ಬಗ್ಗೆ ಎಎಪಿ ಬಹಳಷ್ಟು ಮಾತನಾಡುತ್ತಿದ್ದರೂ, ಅಲ್ಲಿಯೂ ಪ್ರತಿ ಐವರಲ್ಲಿ ಒಬ್ಬ ಮುಸ್ಲಿಂ ವಿದ್ಯಾರ್ಥಿಯು ರಾಷ್ಟ್ರ ರಾಜಧಾನಿಯಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾಗಲು ವಿಫಲನಾಗುತ್ತಾನೆ ಎಂದೂ ವರದಿ ಹೇಳಿದೆ.

ಮುಸ್ಲಿಮರು ರೀತಿ ಅತ್ಯಂತ ತಳಭಾಗಕ್ಕೆ ತಳ್ಲಲ್ಪಡದಿರುವ  ಏಕೈಕ ರಾಜ್ಯವೆಂದರೆ ಕೇರಳ. ಇಲ್ಲಿ 43% ಮುಸ್ಲಿಮರು ಉನ್ನತ ಶಿಕ್ಷಣಕ್ಕಾಗಿ ಹೋಗುತ್ತಾರೆ ಎಂದು ಈ  ವರದಿ ಹೇಳುತ್ತದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಕಾಣಬರದಿರುವ ದೃಶ್ಯದ ಪ್ರತಿಬಿಂಬವೆಂಬಂತೆ  ಮುಸ್ಲಿಂ ಶಿಕ್ಷಕರ ಗೈರುಹಾಜರಿಯೂ ಎದ್ದು ಕಾಣುತ್ತಿದೆ. ಅಖಿಲ ಭಾರತ ಮಟ್ಟದಲ್ಲಿ, ಸಾಮಾನ್ಯ ವರ್ಗಕ್ಕೆ ಸೇರಿದ ಶಿಕ್ಷಕರು ಎಲ್ಲಾ ಶಿಕ್ಷಕರಲ್ಲಿ 56% ರಷ್ಟಿದ್ದಾರೆ. OBC, SC ಮತ್ತು ST ಶಿಕ್ಷಕರು ಕ್ರಮವಾಗಿ 32%, 9% ಮತ್ತು 2.5% ಶಿಕ್ಷಕರಿದ್ದಾರೆ. ಮುಸ್ಲಿಮರು ಕೇವಲ 5.6% ಎಂದು ವರದಿ ಹೇಳಿದೆ.

ಸಮೀಕ್ಷೆಯ ಪ್ರಕಾರ ಒಬಿಸಿ ಸಮುದಾಯದ ಕುರಿತ ಚಿತ್ರ ಉಜ್ವಲವಾಗಿ ಕಾಣುತ್ತಿದೆ, ದೇಶದ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿಯಲ್ಲಿ ಒಬಿಸಿ ಪ್ರಮಾಣ 36% ಮತ್ತು ಪರಿಶಿಷ್ಟ ಜಾತಿಗಳವರು 14% ರಷ್ಟಿದ್ದಾರೆ. ಅಂದರೆ ಈ ಎರಡು ಸಮುದಾಯಗಳು ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿನ ಸುಮಾರು 50% ಸೀಟುಗಳನ್ನು ಒಳಗೊಂಡಿವೆ.

ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ಇಂತಹ ತೀವ್ರ ಪ್ರಾತಿನಿಧ್ಯದ ಕೊರತೆಯ ಹೊರತಾಗಿಯೂ, ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರವು ವಿಧಾನಸಭೆ ಚುನಾವಣೆಯ ಮೊದಲು ಮುಸ್ಲಿಮರಿಗೆ 4% ಮೀಸಲಾತಿಯನ್ನು ರದ್ದುಗೊಳಿಸಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Donate Janashakthi Media

Leave a Reply

Your email address will not be published. Required fields are marked *