ದೆಹಲಿ ಕೋಮು ಹಿಂಸಾಚಾರದ ಚಿತ್ರಕ್ಕೆ ರಾಯ್ಟರ್ಸ್​ ವರ್ಷದ ಪೋಟೋ ಪ್ರಶಸ್ತಿ!

  • ದಾನೀಶ್ಸಿದ್ದಿಕಿ ಕ್ಲಿಕ್ಕಿಸಿದ್ದಪೋಟೋ 

ನವ ದೆಹಲಿ: ಜಾಗತಿಕ ಸುದ್ದಿಸಂಸ್ಥೆ ರಾಯ್ಟರ್ಸ್‌‌ 2020 ವರ್ಷದ ಪೋಟೋ ಪ್ರಶಸ್ತಿಗೆ ಆಯ್ಕೆಯಾಗಿರುವ ಛಾಯಾಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. . ಪಟ್ಟಿಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ದೆಹಲಿ ಹಿಂಸಾಚಾರದ ವೇಳೆ ತೆಗೆದ ಪೋಟೋ ಸಹ ಸ್ಥಾನ ಪಡೆದಿದೆಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಗುಂಪೊಂದು ಅಮಾನವೀಯವಾಗಿ ಥಳಿಸುತ್ತಿರವ ಫೋಟೋವನ್ನು ದಾನೀಶ್ಸಿದ್ದಿಕಿ ಎಂಬ ವ್ಯಕ್ತಿ ಪೋಟೋ ಕ್ಲಿಕ್ಕಿಸಿದ್ದರು.

ಈ ಪೋಟೋ ದೆಹಲಿ ಹಿಂಸಾಚಾರದ ಕರಾಳ ಮುಖವನ್ನು ಜಗತ್ತಿಗೆ ಸಾರುವಂತಿತ್ತು. ಅಲ್ಲದೆ, ಈ ಚಿತ್ರ ಹಲವರ ಮನ ಕಲಕಿತ್ತು. ಹೀಗಾಗಿ ಈ ಪೋಟೋವನ್ನು 2020 ವರ್ಷದ ಶ್ರೇಷ್ಠ ಛಾಯಾಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಈ ಚಿತ್ರವಷ್ಟೇ ಅಲ್ಲದೆ, ದಾನೀಶ್​ ದೆಹಲಿ ಗಲಭೆ ಸಮಯದಲ್ಲಿ 100ಕ್ಕೂ ಅಧಿಕ ಪೋಟೋಗಳನ್ನು ತೆಗೆದಿದ್ದಾರೆ ಈ ಎಲ್ಲಾ ಪೋಟೋಗಳೂ ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ ಅಲ್ಲದೆ, ದೆಹಲಿ ಹಿಂಸಾಚಾರದ ಕರಾಳ ಮುಖವನ್ನು ಸಾಕ್ಷೀಕರಿಸಿದೆ ಎಂದರೆ ತಪ್ಪಾಗಲಾರದು.

ಅಸಲಿಗೆ ಕೇಂದ್ರ ಸರ್ಕಾರ ಪೌರತ್ವದ ತಿದ್ದುಪಡಿ ಕಾಯ್ದೆಯನ್ನು ಜಾರಿ ತರಲು ಮುಂದಾಗಿತ್ತು. ಸಂಸತ್​ನ ಎರಡೂ ಮನೆಯಲ್ಲಿ ಸಿಎಎ ಕಾಯ್ದೆಯನ್ನು ಮಂಡಿಸಿದ್ದ ಕೇಂದ್ರ ಸರ್ಕಾರ ಬಹುಮತದಿಂತ ಅಂಗೀಕಾರವನ್ನೂ ಪಡೆದಿತ್ತು. ಆದರೆ, ಈ ಕಾಯ್ದೆ ಪ್ರಜಾಪ್ರಭುತ್ವಕ್ಕೆ ಮಾರಕ ಮತ್ತು ಸಂವಿಧಾನದ ಆಶಯಗಳಿಗೆ ವಿರೋಧಿಯಾಗಿದೆ ಎಂಬ ಕಾರಣಕ್ಕೆ ಹಲವರು ಈ ಕಾಯ್ದೆಯನ್ನು ವಿರೋಧಿಸಿದ್ದರು.

ಇಡೀ ದೇಶದಾದ್ಯಂತ ಈ ಕಾಯ್ದೆಯ ವಿರುದ್ಧ ಪ್ರತಿಭಟನೆ ಭುಗಿಲೆದ್ದಿತ್ತು. ಇನ್ನೂ ದೆಹಲಿಯ ಶಹೀನ್​ ಭಾಗ್​ ಪ್ರಮುಖ ಪ್ರತಿಭಟನಾ ಕೇಂದ್ರವಾಗಿ ಬದಲಾಗಿತ್ತು. ಈ ವೇಳೆ ಹೋರಾಟ ಬಲವಾಗುತ್ತಿದ್ದದ್ದನ್ನು ಮನಗಂಡಿದ್ದ ಬಿಜೆಪಿ ಕಾರ್ಯಕರ್ತರು ಸಿಎಎ ಕಾಯ್ದೆಯನ್ನೂ ಬೆಂಬಲಿಸಿ ಇದೇ ಶಾಹೀನ್​ ಭಾಗ್ ಬಳಿ ಅವರೂ ಪ್ರತಿಭಟನೆಗೆ ಮುಂದಾದರು ಈ ವೇಳೆ ಭುಗಿಲೆದ್ದ ಗಲಭೆ ನಂತರ ಹಿಂಸಾಚಾರವಾಗಿ ಬದಲಾದದ್ದು ಎರಡೂ ವಾರಗಳಿಗೂ ಹೆಚ್ಚು ಕಾಲ ದೆಹಲಿ ​ಬೂದಿ ಮುಚ್ಚಿದ ಕೆಂಡದಂತೆ ಇದ್ದದ್ದು ಇಂದು ಇತಿಹಾಸ.

ದೆಹಲಿ ಗಲಭೆಯಲ್ಲಿ ಸುಮಾರು 60ಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಅಲ್ಲದೆ, 300ಕ್ಕೂ ಅಧಿಕ ಜನ ತೀವ್ರತರನಾದ ಗಾಯಕ್ಕೊಳಗಾಗಿದ್ದರು. ಇನ್ನೂ ಈ ಗಲಭೆಯಲ್ಲಿ ಮನೆಮಠ ಕಳೆದುಕೊಂಡವರ ಬದುಕು ಈವರೆಗೆ ಹಳಿಗೆ ಮರಳಿಲ್ಲ.

Donate Janashakthi Media

Leave a Reply

Your email address will not be published. Required fields are marked *