ವಿಜಯಪುರ| ದಲಿತ ವ್ಯಕ್ತಿಗೆ ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನ

ವಿಜಯಪುರ : ದಲಿತ ವ್ಯಕ್ತಿಯನ್ನು ಜೀವಂತವಾಗಿ ಬೆಂಕಿಯಲ್ಲಿ ಹಾಕಿ ಕೊಲ್ಲಲು ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ದಲಿತ ವ್ಯಕ್ತಿ ದುಂಡಪ್ಪ(70) ಎಂಬುವರನ್ನು ಜೀವಂತವಾಗಿ ಸುಡಲು ಯತ್ನಿಸಿದ ಅಮಾನವೀಯ ಘಟನೆ ನಡೆದಿದೆ.

ಇದನ್ನು ಓದಿ : ಕೋಲಾರ| ದಲಿತ ವ್ಯಕ್ತಿಯ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ; ಅವಾಚ್ಯ ಶಬ್ದಗಳಿಂದ ನಿಂದನೆ

ಸರ್ವೆ ನಂ 53ರ ಹೊಲದ ವಿಚಾರವಾಗಿ ದುಂಡಪ್ಪ, ಸಂಗಪ್ಪ , ಹನುಮಪ್ಪರ ನಡುವೆ ಜಗಳ ನಡೆದಿದೆ. ಬಣವಿಗೆ ಬೆಂಕಿ ಹಚ್ಚುವುದು ಬೇಡ ಎಂದು ದುಂಡಪ್ಪ ಇಬ್ಬರನ್ನೂ ತಡೆದಿದ್ದಾರೆ. ಇದೇ ವೇಳೆ ಸಂಗಪ್ಪ ಮತ್ತು ಹನುಮಪ್ಪ ದುಂಡಪ್ಪರನ್ನು ಎತ್ತಿ ಬಣವಿಗೆ ಹಾಕಲು ಪ್ರಯತ್ನಿಸಿದರು. ದುಂಡಪ್ಪ ಜೀವ ಭಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕೂಡ ಎರಡನೇ ಬಾರಿ ಆತನನ್ನು ಬೆಂಕಿಯಲ್ಲಿ ಹಾಕಿ ಕೊಲ್ಲಲು ಯತ್ನಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಘಟನೆ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿದೆ. ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ರಕ್ಷಣೆ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದೆ.

 

Donate Janashakthi Media

Leave a Reply

Your email address will not be published. Required fields are marked *