ಕೋವಿಡ್‌ ಬಾಧಿತ ವಲಯಕ್ಕೆ 1.1 ಲಕ್ಷ ಕೋಟಿ ನೆರವು: ಕೇಂದ್ರದಿಂದ ಮತ್ತೊಂದು ಪ್ಯಾಕೇಜ್‌ ಘೋಷಣೆ

ನವದೆಹಲಿ: ಕೋವಿಡ್ -19 ಎರಡನೇ ಅಲೆಯಿಂದಾಗಿ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಕೊಳ್ಳುವ ಉದ್ದೇಶದಿಂದಾಗಿ ₹1.1 ಲಕ್ಷ ಕೋಟಿಗಳ ಸಾಲ ಖಾತರಿ ಯೋಜನೆಗೆ ಕೇಂದ್ರ ಸರಕಾರವು ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿರುವ ಹಣಹಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವರಿಸಿದರು.

ಈ ಬಾರಿ ಪ್ರಮುಖವಾಗಿ ಎಂಟು ಆರ್ಥಿಕ ಪರಿಹಾರ ಕ್ರಮಗಳನ್ನು ಪ್ರಕಟಿಸಲಾಗಿದೆ. ಅವುಗಳಲ್ಲಿ ನಾಲ್ಕು ಹೊಸದಾಗಿದೆ. ಅದರೊಂದಿಗೆ, ಒಂದು ಆರೋಗ್ಯ ಮೂಲಸೌಕರ್ಯಕ್ಕೆ ಸಂಬಂಧಿಸಿದ್ದು. ಕೋವಿಡ್ ಪೀಡಿತ ಪ್ರದೇಶಗಳಿಗೆ ₹1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ₹50,000 ಕೋಟಿ ಬಿಡುಗಡೆಗೊಳಿಸಲಾಗಿದೆ.

ಇದನ್ನು ಓದಿ: ಕೇಂದ್ರದಿಂದ 29.8 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ

ಇದರೊಂದಿಗೆ, ಇಸಿಎಲ್‌ಜಿಎಸ್‌ (ತುರ್ತು ಸಾಲ ಖಾತರಿ ಯೋಜನೆ)ಗೆ ಹೆಚ್ಚುವರಿಯಾಗಿ ₹1.5 ಲಕ್ಷ ಕೋಟಿಯನ್ನು ಬಿಡುಗಡೆಗೊಳಿಸಲಾಗಿದೆ. ಅದೇ ರೀತಿಯಲ್ಲಿ ಮಕ್ಕಳು ಮತ್ತು ಮಕ್ಕಳ ಆರೈಕೆಯ ಬಗ್ಗೆ ಪ್ರಾಥಮಿಕ ಗಮನಹರಿಸಿ ಸಾರ್ವಜನಿಕ ಆರೋಗ್ಯಕ್ಕಾಗಿ 23,220 ಕೋಟಿ ರೂ ಘೋಷಣೆ ಮಾಡಲಾಗಿದೆ ಎಂದು ಸಚಿವೆ ನಿರ್ಮಾಲಾ ಸೀತಾರಾಮನ್‌ ಅವರು ಹೇಳಿದ್ದಾರೆ.

ಮೇ 2020 ರಲ್ಲಿ ಘೋಷಿಸಲಾದ ₹20 ಲಕ್ಷ ಕೋಟಿ ರೂ.ಗಳ ಆತ್ಮನಿರ್ಭರ ಭಾರತ್ ಅಭಿಯಾನದಲ್ಲಿ ಇಸಿಎಲ್‌ಜಿಎಸ್‌ಗೆ ₹3 ಲಕ್ಷ ಕೋಟಿ ನಿಗದಿ ಮಾಡಲಾಗಿತ್ತು. ಈಗ ಹೆಚ್ಚುವರಿಯಾಗಿ ₹1.5 ಲಕ್ಷ ಕೋಟಿ ನೀಡಲಾಗುತ್ತಿದೆ. ಇದರ ಒಟ್ಟಾರೆ ಮೊತ್ತ ಈಗ ₹4.5 ಲಕ್ಷ ಕೋಟಿ ಆಗಲಿದೆ.

‘ಸಾಲ ಖಾತರಿ ಯೋಜನೆಯು 25 ಲಕ್ಷ ಜನರಿಗೆ ಅನುಕೂಲ ಕಲ್ಪಿಸಲಿದೆ. ಸಣ್ಣ ಹಣಕಾಸು ಸಂಸ್ಥೆಗಳ ಮೂಲಕ ಸಾಲ. ಗರಿಷ್ಠ ₹1.25 ಲಕ್ಷಗಳನ್ನು ಸಾಲದ ರೂಪದಲ್ಲಿ ಪಡೆಯಬಹುದಾಗಿದೆ. ಹೊಸ ಸಾಲ ನೀಡುವುದರತ್ತ ಸದ್ಯ ಗಮನ ಹರಿಸಲಾಗಿದೆ’ ಎಂದು ಸಚಿವೆ ಅವರು ನಿರ್ಮಾಲಾ ಸೀತಾರಾಮನ್‌ ಹೇಳಿದ್ದಾರೆ.

ಇದನ್ನು ಓದಿ: ಜಿಡಿಪಿ ದರ: ಸ್ವಾತಂತ್ರ್ಯ ನಂತರ ಶೇಕಡಾ 7.3ರಷ್ಟು ಕುಸಿತ

ಆಹಾರ ಧಾನ್ಯಗಳ ಉಚಿತ ವಿತರಣೆ ಮಾರ್ಚ್ 2020 ರಲ್ಲಿ ಪ್ರಾರಂಭವಾಯಿತು. ಈಗ ಇದನ್ನು ನವೆಂಬರ್ 2021 ರವರೆಗೆ ವಿಸ್ತರಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 389.92 ಲಕ್ಷ ಮೆಟ್ರಿಕ್ ಟನ್‌ಗಳಿಗೆ ಹೋಲಿಸಿದರೆ ಇದುವರೆಗೆ 432.48 ಲಕ್ಷ ಕೋಟಿ ಮೆಟ್ರಿಕ್ ಟನ್ ಗೋಧಿಯನ್ನು ಸಂಗ್ರಹಿಸಲಾಗಿದೆ. 2020-21ರಲ್ಲಿ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅಣ್ಣ ಯೋಜನೆ (ಪಿಎಂಜಿಕೆಎವೈ) ಒಟ್ಟು ವೆಚ್ಚ 1,33,972 ಲಕ್ಷ ಕೋಟಿ ರೂ. ಆಗಿದ್ದು ಯೋಜನೆಯ ಒಟ್ಟು ಅಂದಾಜು 93,869 ಕೋಟಿಗಳುಗಳಾಗಿದೆ.

ಪ್ಯಾಕೇಜ್‌ನ ಮತ್ತಷ್ಟು ಪ್ರಮುಖ ಅಂಶಗಳು

  • ಬಡ್ಡಿದರವು ಆರ್‌ಬಿಐ ನಿಗದಿಪಡಿಸಿರುವ ದರಕ್ಕಿಂತ ಶೇ 2ರಷ್ಟು ಕಡಿಮೆ ಇರಲಿದೆ. ಸಾಲದ ಅವಧಿ 3 ವರ್ಷಗಳಾಗಿರುತ್ತವೆ. ಎನ್‌ಪಿಎಗಳನ್ನು ಹೊರತುಪಡಿಸಿ, ಹೊಸಬರಿಗೆ ಸಾಲ
  • ಮಾನ್ಯತೆ ಪಡೆದ 10,700 ಪ್ರವಾಸಿ ಮಾರ್ಗದರ್ಶಿಗಳು ಹಾಗೂ ಪ್ರವಾಸೋದ್ಯಮ ಮಧ್ಯಸ್ಥಗಾರರು (ಟಿಟಿಎಸ್) ಹೊಸ ಸಾಲ ಖಾತರಿ ಯೋಜನೆಯ ಅಡಿಯಲ್ಲಿ ಶೇ.100ರಷ್ಡು ಸರ್ಕಾರಿ ಶೂರಿಟಿಯೊಂದಿಗೆ 10 ಲಕ್ಷ ರೂಗಳ ವರೆಗೆ ಸಾಲ
  • ಅಂತರರಾಷ್ಟ್ರೀಯ ಪ್ರಯಾಣ ಪುನರಾರಂಭವಾದ ನಂತರ, ಭಾರತಕ್ಕೆ ಬರುವ ಮೊದಲ 5 ಲಕ್ಷ ಪ್ರವಾಸಿಗರು ವೀಸಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಮಾರ್ಚ್ 31, 2022 ರವರೆಗೆ ಇದು ಅನ್ವಯವಾಗಲಿದೆ. ಅಥವಾ, 5 ಲಕ್ಷ ವೀಸಾ ವಿತರಣೆ ನಂತರ ಈ ಯೋಜನೆ ಅಂತ್ಯವಾಗಲಿದೆ. ಒಬ್ಬ ಪ್ರವಾಸಿ ಒಮ್ಮೆ ಮಾತ್ರ ಇದರ ಲಾಭ ಪಡೆಯಬಹುದು.
  • ಆತ್ಮನಿರ್ಭಾರ ಭಾರತ್ ರೋಜ್‌ಗಾರ್‌ ಯೋಜನೆಯನ್ನು ಈಗ 2021 ರ ಜೂನ್ 30 ರಿಂದ 2022 ರ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. ಸುಮಾರು 80,000 ಸಂಸ್ಥೆಗಳ4 ಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ಈ ಯೋಜನೆಯ ಲಾಭ ಪಡೆದುಕೊಂಡಿರುತ್ತಾರೆ.
  • ಸಾರ್ವಜನಿಕ ಆರೋಗ್ಯಕ್ಕಾಗಿ ₹23,220 ಕೋಟಿ ನೀಡಲಾಗುತ್ತಿದೆ. ಮಕ್ಕಳ ಆರೈಕೆಯ ಬಗ್ಗೆ ವಿಶೇಷ ಗಮನ. ಅದೇ ರೀತಿಯಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಬಲಪಡಿಸುವಿಕೆ, ಈ ಹಣಕಾಸು ವರ್ಷದಲ್ಲಿಯೇ ನಿಗದಿತ ಹಣವನ್ನು ಬಿಡುಗಡೆ
  • ಬಡವರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಲು ಈ ಹಣಕಾಸು ವರ್ಷದಲ್ಲಿ ₹93,869 ಕೋಟಿ ನೀಡಿಕೆ.
  • ʼಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಗಾಗಿ ಒಟ್ಟು ₹2,27,841 ಕೋಟಿ ಬಿಡುಗಡೆ
  • ರೈತರಿಗೆ ಪ್ರೋಟೀನ್ ಆಧಾರಿತ ರಸಗೊಬ್ಬರದ ಹೆಚ್ಚುವರಿ ₹15 ಸಾವಿರ ಕೋಟಿ ಸಬ್ಸಿಡಿ ಬಿಡುಗಡೆ
Donate Janashakthi Media

Leave a Reply

Your email address will not be published. Required fields are marked *