ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ; ಕೆಕೆಆರ್‌ಟಿಸಿ ಅಧಿಕಾರಿಗಳ ವಿರುದ್ದ ದೂರು

ವಿಜಯಪುರ: ಬಸ್‌ ನಿರ್ವಾಹಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಆರೋಪ ಸಾರಿಗೆ ತನಿಖಾಧಿಕಾರಿಗಳ ವಿರುದ್ದ ಕೇಳಿಬಂದಿದೆ. ಕಲ್ಯಾಣ ಕರ್ನಾಟಕ ಸಾರಿಗೆ (KKRTC) ತನಿಖಾಧಿಕಾರಿಗಳು ತಾವೇ ನಿರ್ವಾಹಕರ ಸೀಟ್‌ ಕೆಳಗೆ ಹಣ ಇಟ್ಟು, ಬಳಿಕ ಕೇಸ್‌ ದಾಖಲಿಸದೇ ಇರುವುದಕ್ಕೆ ಲಂಚ ಕೇಳಿದ್ದಾರೆಂದು ನಿರ್ವಾಹಕರು ದೂರಿದ್ದಾರೆ.

ಡಿ. 8 ರಂದು ಬೆಳಗಾವಿ-ಇಂಡಿ ನಡುವೆ ಸಂಚರಿಸುವ ಬಸ್‌ ಅನ್ನು ಯಲಗುರಪ್ಪ ತಳೇವಾಡ ಹಾಗೂ ಸಿದ್ದರಾಮ ಉಟಗಿ ಎಂಬ ಸಂಚಾರ ನಿರೀಕ್ಷಕರು ತನಿಖೆಗೆ ಒಳಪಡಿಸಿದ್ದರು. ಈ ವಾಹನದಲ್ಲಿ ತುಕಾರಾಂ ಕೋಳಿ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಪ್ರಯಾಣಿಕರ ಟಿಕಟ್‌ ಹಾಗೂ ನಿರ್ವಾಹಕರ ಬಳಿಯಿದ್ದ ಹಣವನ್ನು ತಾಳೆ ಮಾಡುವ ಸಂದರ್ಭದಲ್ಲಿ ಯಲಗೂರಪ್ಪ ಅವರು ತಮ್ಮ ಬಳಿಯಿದ್ದ 500 ರೂ. ಕರೆನ್ಸಿ ನೋಟನ್ನು ನಿರ್ವಾಹಕರ ಸೀಟ್‌ ಕೆಳಗೆ ತಳ್ಳಿ ಬಳಿಕ ಸುಳ್ಳು ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು ತುಕಾರಾಂ ಆರೋಪಿಸಿದ್ದಾರೆ.

ಇದನ್ನೂ ಓದಿ: ಕೂಲಿ ಕಾರ್ಮಿಕನ ಮೇಲೆ ಹಲ್ಲೆ; ನಾಲ್ವರ ವಿರುದ್ದ ಪ್ರಕರಣ ದಾಖಲು

ಬಳಿಕ 35 ಸಾವಿರ ರೂ. ಹಣ ನೀಡಿದರೆ ಪ್ರಕರಣ ದಾಖಲಿಸುವುದಿಲ್ಲ ಎಂದು ಲಂಚಕ್ಕೆ ಬೇಡಿಕೆಯಿಟ್ಟ ಸಂಚಾರ ನಿರೀಕ್ಷಕರು, ಚಾಲಕ ಅಬ್ಬಾಸ್‌ ಅಲೀಮುಲ್ಲಾ ಅವರಿಗೆ ವ್ಯವಹಾರ ಕುದುರಿಸಲು ಸೂಚನೆ ನೀಡಿದ್ದರು. ಕೊನೆಗೆ 20 ಸಾವಿರ ರೂ. ಲಂಚಕ್ಕೆ ಒಪ್ಪಿಗೆಯಿತ್ತ ಅವರು ತಪ್ಪನ್ನೇ ಮಾಡದಿರುವ ನಿರ್ವಾಹಕನಿಗೆ ಬರೆಯೆಳೆದಿದ್ದಾರೆಂದು ಆರೋಪಿಸಲಾಗಿದೆ.

ಫೋನ್‌ ಪೇ ಮೂಲಕ 20 ಸಾವಿರ ರೂ. ಲಂಚ ಸ್ವೀಕರಿಸಿದ ಅಧಿಕಾರಿಗಳು ಪ್ರಕರಣವನ್ನು ಕೈಬಿಟಿದ್ದಾರೆನ್ನಲಾಗಿದೆ. ಇದೇ ರೀತಿ ಮತ್ತೊಂದು ಪ್ರಕರಣದಲ್ಲಿ ಪಾರ್ಸೆಲ್‌ ನಲ್ಲಿ ಹಣವನ್ನಿಟು, ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ.

ಈ ಭ್ರಷ್ಟ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವ ಮೂಲಕ ಚಾಲಕ ಮತ್ತು ನಿರ್ವಾಹಕರಿಗೆ ನ್ಯಾಯ ಕೊಡಿಸಬೇಕೆಂದು ಸಾರಿಗೆ ಸಿಬ್ಬಂದಿಗಳು ಸಾರಿಗೆ ಸಚಿವರಿಗೆ ಪತ್ರ ಮುಖೇನ ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: ಕೋಗಿಲು ಪ್ರಕರಣ : ಬಡವರ ಕೂಗು ಕೇಳದಾಯಿತೆ ಸರಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *