ಸಿಪಿಐಎಂ ಹಿರಿಯ ಸದಸ್ಯ ರಾಘವ ಅಂಚನ್ ಇನ್ನಿಲ್ಲ

ಬೆಂಗಳೂರು : ಸಿಪಿಐಎಂ ಹಿರಿಯ ಸದಸ್ಯರೂ, ತನ್ನ ಕೊನೆಯ ಕಾಲಾವಧಿವರೆಗೂ ಕಮ್ಯೂನಿಷ್ಟ್ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದ ರಾಘವ ಅಂಚನ್ ಬಜಾಲ್ ( 85 ವರ್ಷ) ರವರು ನಿಧನರಾಗಿದ್ದಾರೆ.

ಕಾರ್ಮಿಕ ಚಳುವಳಿಯ ಪ್ರಮುಖ ಕೇಂದ್ರವಾಗಿದ್ದ ಬಜಾಲ್ ಪ್ರದೇಶದ ಪಕ್ಕಲಡ್ಕ ದಲ್ಲಿ ಹುಟ್ಟಿ ಬೆಳೆದಿರುವ ರಾಘವ ಅಂಚನ್ ರವರು, ಎಳೆಯ ಪ್ರಾಯದಲ್ಲೇ ತಮ್ಮ ಕಣ್ಣೆದುರು ನಡೆಯುತ್ತಿದ್ದ ನೇಯ್ಗೆ ,ಹಂಚು ಬೀಡಿ ಕಾರ್ಮಿಕರ ಹೋರಾಟಗಳಲ್ಲಿ ಸ್ವತಃ ಭಾಗವಹಿಸುವ ಮೂಲಕ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾಗಿದ್ದರು. ಬಳಿಕ ತಮ್ಮ ಯೌವ್ವನದಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರಾಗಿ ಬೆಳೆದರು. ಕಮ್ಯುನಿಸ್ಟ್ ಪಕ್ಷದ ಚಟುವಟಿಕೆಗಳಲ್ಲಿ ದುಡಿದಿರುವ ರಾಘವ ಅಂಚನ್ ರವರು ದುಡಿಯುವ ವರ್ಗದ ಚಳುವಳಿ ಹೋರಾಟಗಳು ಎಲ್ಲೇ ನಡೆಯಲಿ, ಅಲ್ಲಿ ಭಾಗವಹಿಸುತ್ತಾ ಇತರ ಸಂಗಾತಿಗಳಿಗೆ ಸ್ಪೂರ್ತಿ ತುಂಬುತ್ತಿದ್ದರು. 1973 ರಲ್ಲಿ ಭೂಮಸೂದೆ ಜಾರಿಗಾಗಿ ರೈತ ಸಂಘಟನೆ ಆಯೋಜಿಸಿದ ಮಂಗಳೂರಿನಿಂದ ಬೆಂಗಳೂರವರೆಗೆ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಬದ್ಧತೆಯುಳ್ಳ ಕಾರ್ಯಕರ್ತರಾಗಿದ್ದರು.

ಇದನ್ನು ಓದಿ : ಅಂತರ್ಜಾತಿ ವಿವಾಹ : ವಿಷವುಣಿಸಿ ಯುವತಿಯ ಕೊಲೆ

ಅವರ ಯವ್ವನದ ಕಾಲದಲ್ಲಿ ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿಯಾಗಿದ್ದುಕೊಂಡು ಹಲವಾರು ಜನಪರ ಚಟುವಟಿಕೆಗಳನ್ನು ಹಮ್ಮಿಕೊಂಡು ನೇತೃತ್ವಹಿಸಿದವರು ಅಲ್ಲದೇ ಈವರೆಗೂ ಆ ಯುವಕ ಮಂಡಲದ ಹೊಸ ತಲೆಮಾರು ನಾಯಕರುಗಳಿಗೆ ಮಾರ್ಗದರ್ಶನವಿತ್ತವರು. ಒಟ್ಟಿನಲ್ಲಿ ರಾಘವ ಅಂಚನ್ ರವರ ಅಗಲುವಿಕೆಯು ಕಮ್ಯುನಿಸ್ಟ್ ಚಳುವಳಿಗೆ ಅಪಾರ ನಷ್ಟವುಂಟಾಗಿದೆ ಎಂದು CPIM ಮಂಗಳೂರು ನಗರ ದಕ್ಷಿಣ ಸಮಿತಿಯು ತಮ್ಮ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ತಿಳಿಸಿದೆ. ಸಿಪಿಐಎಂ 

ರಾಘವ ಅಂಚನ್ ರವರು ಪತ್ನಿ ನಾಲ್ಕು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ಡಿವೈಎಫ್ಐ, ಪಕ್ಕಲಡ್ಕ ಯುವಕ ಮಂಡಲ, ಜನತಾ ವ್ಯಾಯಾಮ ಶಾಲೆ ಸಂತಾಪ ಸೂಚಿಸಿದೆ. ಸಿಪಿಐಎಂ 

ಇದನ್ನು ನೋಡಿ : ದಾರಿಯ ಹಿಡಿದರೆ ಸಿಗುವರು ಅಣ್ಣಾ – ನಾದ ಮಣಿ ನಾಲ್ಕೂರು ಹಾಡು

 

Donate Janashakthi Media

Leave a Reply

Your email address will not be published. Required fields are marked *