ಯುಪಿ: ಪೊಲೀಸರಿಂದ ಹಲ್ಲೆಗೊಳಗಾದ ಯುವತಿ ಸಾವು-ತೀವ್ರ ಪ್ರತಿಭಟನೆ

ಚಂದೌಲಿ: ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪೊಲೀಸರಿಂದ ಹಲ್ಲೆಗೊಳಗಾದ ಯುವತಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಮನ್ರಾಜ್ಪುರ ಗ್ರಾಮದಲ್ಲಿ (ಮೇ 01) ತಡರಾತ್ರಿ ನಡೆದಿದೆ.

ನಿಶಾ ಯಾದವ್(21) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಪ್ರಕರಣವೊಂದರ ಆರೋಪಿ ಕನ್ಹಯ್ಯಾ ಪತ್ತೆಯಾಗದೆ ಇದ್ದಾಗ ಪೊಲೀಸರು ಅವನ ಸಹೋದರನನ್ನು ತಮ್ಮೊಂದಿಗೆ ಕರೆದೊಯ್ಯಲು ಪ್ರಯತ್ನಿಸಿದರು. ಈ ವೇಳೆ ನಿಶಾ ವಿರೋಧಿಸಿದಾಗ ಪೊಲೀಸರು ಆಕೆಗೆ ಥಳಿಸಿದ್ದು, ಆಕೆ ಸಾವನ್ನಪ್ಪಿದ್ದಾಳೆ.

ನಿಶಾ ಯಾದವ್‌ ಸಾವಿನ ನಂತರ, ವ್ಯಾಪಕ ಪ್ರತಿಭಟನೆಗಳು ನಡೆದಿದ್ದು, ಪೊಲೀಸರ ಮೇಲೆ ಹಲ್ಲೆ ನಡೆಸಲಾಯಿತು.  ಈ ಘಟನೆಯು ಹಿಂಸಾತ್ಮಕ ರೂಪ ಪಡೆದಿದ್ದು, ಗ್ರಾಮಸ್ಥರ ಪ್ರತಿಭಟನೆ ವೇಳೆ ಆಂಬ್ಯುಲೆನ್ಸ್ ಗೆ ಹಾನಿ ಮಾಡಿ ರಾಷ್ಟ್ರೀಯ ಹೆದ್ದಾರಿ -2 ಅನ್ನು ತಡೆಯಲು ಪ್ರಯತ್ನಿಸಿದರು.

ಕುಟುಂಬದವರ ದೂರಿನ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಲಾಗಿದೆ. ಸೈಯದ್ ರಾಜಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರನ್ನು ಅಮಾನತುಗೊಳಿಸಲಾಗಿದೆ. ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಇಂದು ನಿಶಾ ಯಾದವ್‌ ಅಂತ್ಯಕ್ರಿಯೆ ನಡೆಸಲಾಯಿತು.

Donate Janashakthi Media

Leave a Reply

Your email address will not be published. Required fields are marked *