ವಿಧೇಯಕಗಳಿಗೆ 3 ತಿಂಗಳೊಳಗೆ ರಾಷ್ಟ್ರಪತಿ ಅಂಕಿತ ಕಡ್ಡಾಯ ; ಸುಪ್ರಿಂ ಕೋರ್ಟ್​ ಐತಿಹಾಸಿಕ ತೀರ್ಪು

ವದೆಹಲಿ:  ಸುಪ್ರೀಂ ಕೋರ್ಟ್ ಶುಕ್ರವಾರ (ಏಪ್ರಿಲ್ 11, 2025) ಒಂದು ಐತಿಹಾಸಿಕ ತೀರ್ಪೊಂದನ್ನು ಪ್ರಕಟಿಸಿದ್ದು, ರಾಜ್ಯಪಾಲರು ಕಳುಹಿಸುವ ವಿಧೇಯಕಗಳಿಗೆ ಮೂರು ತಿಂಗಳೊಳಗೆ ಅಂಕಿತ ಹಾಕುವಂತೆ ಆದೇಶಿಸಿದೆ. ಈ ತೀರ್ಪು ಸಂವಿಧಾನದ ಆರ್ಟಿಕಲ್ 201ರಡಿಯಲ್ಲಿ ರಾಷ್ಟ್ರಪತಿಗಳ ಅಂಕಿತಕ್ಕೆ ಯಾವುದೇ ಕಾಲಮಿತಿ ಇಲ್ಲದೆ ಇರುವ ಸ್ಥಿತಿಯನ್ನು ಬದಲಾಯಿಸುತ್ತದೆ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ತರುವ ತೀರ್ಪಾಗಿದೆ ಎಂದು ಇಂಡಿಯನ್​ ಎಕ್ಸ್​​ಪ್ರೆಸ್​ ವರದಿ ಮಾಡಿದೆ.

ಈ ತೀರ್ಪನ್ನು ಸುಪ್ರೀಂ ಕೋರ್ಟ್​​ನ ವಿಭಾಗೀಯ ಪೀಠ (ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಆರ್. ಮಹಾದೇವನ್) ಪ್ರಕಟಿಸಿದೆ. ತಮಿಳುನಾಡಿನ ರಾಜ್ಯಪಾಲ್​ ಎನ್​ ರವಿ ಅವರು ತಮಿಳುನಾಡು ಸರ್ಕಾರ ಕಳುಹಿಸಿರುವ ವಿಧೇಯಕಗಳಿಗೆ ಅಂಕಿತ ಹಾಕದೇ ಇರುವ ಪ್ರಕರಣವನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ರಾಷ್ಟ್ರಪತಿಗಳಿಗೂ ಕಾಲಮಿತಿಯನ್ನು ಪ್ರಕಟಿಸಿದೆ.

ರಾಜ್ಯಪಾಲರು ಕಳುಹಿಸುವ ವಿಧೇಯಕಗಳಿಗೆ ರಾಷ್ಟ್ರಪತಿಗಳು ಅವುಗಳನ್ನು ಸ್ವೀಕರಿಸಿದ ದಿನಾಂಕದಿಂದ 3 ತಿಂಗಳ ಒಳಗೆ ಅಂಕಿತ ಹಾಕಬೇಕು. ಈ ಅವಧಿಗಿಂತ ಹೆಚ್ಚು ತಡವಾದರೆ, ಆ ತಡೆಗೆ ಸೂಕ್ತ ಕಾರಣಗಳನ್ನು ದಾಖಲಿಸಿ ಮತ್ತು ಸಂಬಂಧಿಸಿದ ರಾಜ್ಯಕ್ಕೆ ಮಾಹಿತಿ ನೀಡಬೇಕು ಎಂದಿದೆ.

ಇದರಿಂದಾಗಿ ವಿಧೇಯಕಗಳ ಮೇಲೆ “ಪಾಕೆಟ್ ವೀಟೋ” (ಅನಿಶ್ಚಿತ ತಡೆ) ಅಥವಾ “ಅಬ್ಸಲ್ಯೂಟ್ ವೀಟೋ” (ನಿರಾಕರಣೆ) ಅಧಿಕಾರವನ್ನು ಉಪಯೋಗಿಸುವ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ.

ಇದನ್ನೂ ಓದಿ: ಜನಾಂಗೀಯ ಕೊಲೆಗಳ ರಕ್ತದ ಕಲೆಗಳನ್ನು ಹಚ್ಚಿಕೊಂಡ ಮೈಕ್ರೋಸಾಫ್ಟ್ ಎಂಬ ಬಹುರಾಷ್ಟ್ರೀಯ ಕಂಪನಿ

ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಪಾಲ ರವಿ ವಿರುದ್ಧ ತಮಿಳುನಾಡು ಸರ್ಕಾರ ಪ್ರಕರಣ ದಾಖಲಿಸಿದ್ದೂ, ವಿಧಾನಸಭೆಯಲ್ಲಿ ತಮಿಳುನಾಡು ಸರ್ಕಾರವು  ಅಂಗೀಕಾರವಾದ ಮಸೂದೆಗಳನ್ನು ಅಂಗೀಕರಿಸದೆ ತಡೆದಿದೆ ಎಂದು ಆರೋಪಿಸಿದ ನಂತರ ಈ ಪ್ರಕರಣವು ಇತ್ತೀಚೆಗೆ ವಿಚಾರಣೆಗೆ ಬಂದಿತು. ರಾಷ್ಟ್ರಪತಿಗಳಿಗೆ

ಆ ಸಂದರ್ಭದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್,  ರಾಜ್ಯಪಾಲರ ಕ್ರಮಗಳು ಕಾನೂನುಬಾಹಿರ ಮತ್ತು ಅವರಿಗೆ ಪ್ರತ್ಯೇಕ ಅಧಿಕಾರವಿಲ್ಲ ಎಂದು ತೀರ್ಪು ನೀಡಿತು ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಲಾದ ಮಸೂದೆಗಳು ಅಸಿಂಧು ಎಂದು ತೀರ್ಪು ನೀಡಿತು.

ಇದರ ಜೊತೆಗೆ, ತಮಿಳುನಾಡು ಸರ್ಕಾರವು ಆ ಮಸೂದೆಗಳನ್ನು ಅನುಮೋದಿಸಲು ತಮ್ಮ ವಿಶೇಷ ಅಧಿಕಾರವನ್ನು ಬಳಸುವುದಾಗಿ ಘೋಷಿಸಿದ ನಂತರ, ಎಲ್ಲಾ 10 ಮಸೂದೆಗಳು ಇಂದು ಕಾನೂನುಗಳಾಗಿ ಜಾರಿಗೆ ಬಂದಿವೆ ಎಂದು ಘೋಷಿಸಿದೆ.

ಇದನ್ನೂ ನೋಡಿ: ಬ್ಯಾಟಿಂಗ್‌ ಪಿಚ್‌ನಲ್ಲಿ RR ಸೋತಿದ್ದ್ಯಾಕೆ? DC ಓಟಕ್ಕೆ ಬ್ರೇಕ್‌ ಹಾಕುತ್ತಾ RCB! #ipl2025 #RCB #DC

Donate Janashakthi Media

Leave a Reply

Your email address will not be published. Required fields are marked *