ಬಿಹಾರದ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್‌ ಅವರಿಗೆ ಮರಣೋತ್ತರ ಭಾರತ ರತ್ನ!

ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಘೋಷಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 23 ರ ಮಂಗಳವಾರ ತಿಳಿಸಿದ್ದಾರೆ. ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ಠಾಕೂರ್ ಅವರು ಹಿಂದುಳಿದ ವರ್ಗಗಳ ಉನ್ನತಿಗಾಗಿ ನಡೆಸಿದ ಹೋರಾಟಕ್ಕೆ ಖ್ಯಾತರಾಗಿದ್ದು, ಅವರು 1988ರ ಫೆಬ್ರವರಿಯಲ್ಲಿ ನಿಧನರಾಗಿದ್ದಾರೆ.

“ಸಾಮಾಜಿಕ ನ್ಯಾಯದ ದಾರಿದೀಪ, ಮಹಾನ್ ಜನನಾಯಕ ಕರ್ಪೂರಿ ಠಾಕೂರ್ ಮತ್ತು ಅವರ ಜನ್ಮ ಶತಮಾನೋತ್ಸವವನ್ನು ನಾವು ಆಚರಿಸುತ್ತಿರುವ ಸಮಯದಲ್ಲಿ ಭಾರತ ರತ್ನವನ್ನು ನೀಡಲು ಭಾರತ ಸರ್ಕಾರ ನಿರ್ಧರಿಸಿರುವುದು ನನಗೆ ಸಂತೋಷ ತಂದಿದೆ” ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್ ಪ್ರತಿಮೆಗೆ ಅಪಮಾನ; ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ

“ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಲು ಬೇಗಾಗಿ ಕರ್ಪೂರಿ ಠಾಕೂರ್ ಅವರ ಅಚಲವಾದ ಬದ್ಧತೆ ಮತ್ತು ದೂರದೃಷ್ಟಿಯ ನಾಯಕತ್ವ ಭಾರತದ ಸಾಮಾಜಿಕ ರಾಜಕೀಯ ಸಂರಚನೆಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ. ಈ ಪ್ರಶಸ್ತಿಯು ಅವರ ಗಮನಾರ್ಹ ಕೊಡುಗೆಗಳನ್ನು ಗೌರವಿಸುತ್ತದೆ. ಮಾತ್ರವಲ್ಲದೆ ಸಮಾಜದಲ್ಲಿ ನ್ಯಾಯಯುತ ಮತ್ತು ಸಮಾನತೆಯ ಧ್ಯೇಯವನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾಕ್ಕೆ ಪ್ರತಿಕ್ರಿಯೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, “ಕೇಂದ್ರ ಸರ್ಕಾರದ ಈ ನಿರ್ಧಾನ ಉತ್ತಮವಾಗಿದೆ… ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ನಾವು ಹಿಂದಿನಿಂಲೂ ಬೇಡಿಕೆ ಇಟ್ಟಿದ್ದೇವೆ. ನಮ್ಮ ಬಹುಕಾಲದ ಬೇಡಿಕೆ ಇಂದು ಈಡೇರಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮೌಢ್ಯತೆಯಿಂದ ದೇಶದ ಏಳಿಗೆ ಎಂದಿಗೂ ಅಸಾಧ್ಯ; ಸಚಿವ ಎಚ್‌ ಸಿ ಮಹಾದೇವಪ್ಪ

ಕರ್ಪೂರಿ ಠಾಕೂರ್ ಯಾರು?

ಬಿಹಾರದ ಸಮ್‌ಸ್ತಿಪುರ್ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಠಾಕೂರ್ ಅವರು ಸ್ವಾತಂತ್ರ್ಯ ಹೋರಾಟಗಾರ ಕೂಡಾ ಆಗಿದ್ದಾರೆ. 1924 ರಲ್ಲಿ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರು ಜೈಲು ಶಿಕ್ಷೆಗೆ ಗುರಿಯಾಗಿದ್ದರು.

1952 ರಲ್ಲಿ, ಠಾಕೂರ್ ಮೊದಲ ಬಾರಿಗೆ ಶಾಸಕರಾದರು. ಅವರ ಚುನಾವಣಾ ಗೆಲುವು 1985 ರವರೆಗೆ ಮುಂದುವರೆಯಿತು. ‘ಜನ್ ನಾಯಕ್’ ಎಂದು ಪ್ರೀತಿಯಿಂದ ಕರೆಯಲ್ಪಟ್ಟ ಅವರು 1970 (ಸಂಯುಕ್ತ ಸಮಾಜವಾದಿ ಪಕ್ಷದೊಂದಿಗೆ ) ಮತ್ತು 1977 (ಜನತಾ ಪಕ್ಷದೊಂದಿಗೆ)ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಠಾಕೂರ್ ಅವರು ಶಾಲಾ ಶುಲ್ಕ ಮನ್ನಾ ಮಾಡಲು ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಹಲವಾರು ಜನಪರ ನೀತಿಗಳನ್ನು ಪರಿಚಯಿಸಿದ್ದಾರೆ. ಅಲ್ಲದೆ, ಬಿಹಾರದಲ್ಲಿ ಲೇಯರ್ಡ್ ಮೀಸಲಾತಿ ವ್ಯವಸ್ಥೆಯ ಅನುಷ್ಠಾನ ಠಾಕೂರ್ ಅವರನ್ನು ಹೆಚ್ಚು ಜನಪ್ರಿಯವಾಗಿಸಿತು.

ಇದನ್ನೂ ಓದಿ: ‘ಕಾಶಿ ಮಥುರಾ ಬಾಕಿ ಹೈ’ | ಬೆಂಗಳೂರು – ರಾಜಧಾನಿಯ ಬೀದಿಗಳಲ್ಲಿ ಮಸೀದಿ ಒಡೆಯುವ ದ್ವೇಷದ ಕೂಗು

ಅವರ ಆಡಳಿತದ ಅಡಿಯಲ್ಲಿ, ಇತರೆ ಹಿಂದುಳಿದ ವರ್ಗಗಳ (OBC) ಸಮುದಾಯಗಳ ಸದಸ್ಯರಿಗೆ 12% ಕೋಟಾವನ್ನು ನಿಗದಿಪಡಿಸಲಾಯಿತು. OBC ಗಳು ಮತ್ತು ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ತಲಾ 8% ಮತ್ತು ಮಹಿಳೆಯರಿಗೆ 3% ಮೀಸಲಾತಿ ನಿಗದಿಪಡಿಸಲಾಗಿತ್ತು.

ಬಿಹಾರದ ಪ್ರಮುಖ ಪಕ್ಷಗಳಾದ ಜನತಾ ದಳ ಯುನೈಟೆಡ್ (ಜೆಡಿ (ಯು)) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಠಾಕೂರ್ ಅವರನ್ನು ತಮ್ಮವರು ಎಂಬುದನ್ನು ಬಿಂಬಿಸಲು ಪ್ರಯತ್ನಿಸುತ್ತದೆ. ಇದರ ಜೊತೆಗೆ ಬಿಜೆಪಿ ಅವರ ಮೇಲೆ ಹಕ್ಕು ಸಾಧಿಸಲು ಹವಣಿಸುತ್ತಿವೆ.

“ಕರ್ಪೂರಿ ಠಾಕೂರ್ ಬದುಕಿರುವಾಗ ಬಿಜೆಪಿ ಪಕ್ಷದ ನಾಯಕರು ಅವರನ್ನು ಅವಾಚ್ಯವಾಗಿ ನಿಂದಿಸುತ್ತಿದ್ದರು. ಕಳೆದ 9 ವರ್ಷಗಳಿಂದ ಅವರನ್ನು ನೆನಪಿಸಿಕೊಳ್ಳಲೇ ಇಲ್ಲ. ನಮ್ಮ ಪಕ್ಷ ಮತ್ತು ನಮ್ಮ ನಾಯಕ ಲಾಲು ಯಾದವ್ ಅವರಿಗೆ ಭಾರತ ರತ್ನ ನೀಡಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿಲೆ ಇದ್ದರು. ಈಗ ಚುನಾವಣೆ ಸಮೀಪಿಸುತ್ತಿರುವಾಗ ಅವರು ಕರ್ಪೂರಿ ಠಾಕೂರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ” ಎಂದು ಆರ್‌ಜೆಡಿ ನಾಯಕ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ. ಈಗ ಅವರಿಗೆ ಭಾರತ ರತ್ನ ನೀಡಲಾಗಿದ್ದರೂ, ಮತಕ್ಕಾಗಿ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಡಿಯೊ ನೋಡಿ: ಸಂಸದರ ಕಛೇರಿ ಮುಂದೆ ಕಾರ್ಮಿಕರ ಪ್ರತಿಭಟನೆ : ಅಸಂಘಟಿತ ಕಾರ್ಮಿಕರಿಗೆ ಅಚ್ಚೆದಿನ್‌ ಯಾವಾಗ?

Donate Janashakthi Media

Leave a Reply

Your email address will not be published. Required fields are marked *