ಮೇ‌31ಕ್ಕೆ ಭವಾನಿ ರೇವಣ್ಣ ನಿರೀಕ್ಷಣಾ‌ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್

ಬೆಂಗಳೂರೂ: ಲೈಂಗಿಕ ಕಿರುಕುಳ ಹಾಗೂ ಸಂತ್ರಸ್ತೆಯ ಅಪಹರಣ ಕೇಸ್​​​​ ಸಂಬಂಧ ಮಾಜಿ ಸಚಿವ ಹೆಚ್​​​​.ಡಿ. ರೇವಣ್ಣರ ಪತ್ನಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯ ಆದೇಶ ಮೇ. 31ಕ್ಕೆ ಹೊರಬೀಳಲಿದೆ.

ಅಲ್ಲಿಯವರೆಗೆ ಜಾಮೀನು ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಕಾಯ್ದಿರಿಸಿದೆ. ಮೈಸೂರಿನ ಕೆ.ಆರ್​. ನಗರದ ಸಂತ್ರಸ್ತೆಯ ಕಿಡ್​​​ನ್ಯಾಪ್​​​ ​ಪ್ರಕರಣ ಇದಾಗಿದ್ದು, ಅಪಹರಣದಲ್ಲಿ ಭವಾನಿ ರೇವಣ್ಣ ಪಾತ್ರವೂ ಇದೆ ಎಂಬ ಆರೋಪದಡಿ ಅವರಿಗೂ ಎಸ್​​ಐಟಿ ನೊಟೀಸ್​​ ನೀಡಿತ್ತು.

ಇದನ್ನು ಓದಿ : ಲೈಂಗಿಕ ದೌರ್ಜನ್ಯ ಪ್ರಕರಣ : ಬೆಂಗಳೂರಿಗೆ ಬರಲು ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

ಪ್ರಕರಣದಲ್ಲಿ ಭವಾನಿ ಹೆಸರಾಗಲೀ, ನೇರ ಪಾತ್ರವೂ ಇಲ್ಲ ಎಂದು ವಕೀಲರು ವಾದ ಮಂಡಿಸಿದರು. ಅವರ ಕುರಿತಾಗಿ ಸಾಕಷ್ಟು ಸಾಕ್ಷಿಗಳಿವೆ ಎಂದು ಎಸ್​​ಐಟಿ ಎಸ್​​ಪಿಪಿ ಪ್ರತಿವಾದ ಮಂಡಿಸಿದೆ. ವಾದ-ಪ್ರತಿವಾದ ಆಲಿಸಿದ ಕೋರ್ಟ್​ ಜಾಮೀನು ಕುರಿತಾದ ಆದೇಶವನ್ನು ಕಾಯ್ದಿರಿಸಿದೆ.

ಇದನ್ನು ನೋಡಿ : ಪ್ರಜ್ವಲ್ ರೇವಣ್ಣ – ಲೈಂಗಿಕ ಹತ್ಯಾಕಾಂಡ ಆರೋಪಿJanashakthi Media

Donate Janashakthi Media

Leave a Reply

Your email address will not be published. Required fields are marked *