ಬೆಳಗಾವಿ | ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರಶಸ್ತಿ : ಶಿವಪ್ರಕಾಶ, ರಾಮಕೃಷ್ಣ, ಜಾಹ್ನವಿಗೆ ಆಯ್ಕೆ

ಬೆಳಗಾವಿ: ಯುವ ಸಾಹಿತಿಗಳಿಗೆ  ಮತ್ತು ಇಲ್ಲಿನ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ ನಾಡಿನ ಹಿರಿಯ ಸಾಹಿತಿಗಳು 2023, 2024 ಮತ್ತು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನ.11ರಂದು ಬೆಳಿಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವುಗಳನ್ನು ಪ್ರದಾನ ಮಾಡಲಿದ್ದಾರೆ. ಬೆಳಗಾವಿ

ಇದನ್ನೂ ಓದಿ : ಧರ್ಮಸ್ಥಳ ಪ್ರಕರಣ: ಮಹಿಳಾ ಆಯೋಗದ ಅಧ್ಯಕ್ಷರ ಪತ್ರಕ್ಕೆ ಕೊಂದವರು ಯಾರು ಆಂದೋಲನ ಬೆಂಬಲ

‘ಬೆಂಗಳೂರಿನ ಕವಿ ಎಚ್‌.ಎಸ್‌.ಶಿವಪ್ರಕಾಶ ಅವರನ್ನು 2023ನೇ ಸಾಲಿನ ಕಾವ್ಯ ಪ್ರಶಸ್ತಿ, ಬೆಂಗಳೂರಿನ ಚಿಂತಕ ಮತ್ತು ಪತ್ರಕರ್ತ ಜಿ.ರಾಮಕೃಷ್ಣ ಅವರನ್ನು 2024ನೇ ಸಾಲಿನ ವೈಚಾರಿಕ ಮತ್ತು ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ದಾವಣಗೆರೆಯ ಕಥೆಗಾರ್ತಿ ಬಿ.ಟಿ.ಜಾಹ್ನವಿ ಅವರನ್ನು 2025ನೇ ಸಾಲಿನ ಕಥಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೂರು ಪ್ರಶಸ್ತಿಗಳಿಗೆ ತಲಾ ₹50 ಸಾವಿರ ನಗದು ಬಹುಮಾನವಿದೆ’ ಎಂದು ಟ್ರಸ್ಟ್‌ ಅಧ್ಯಕ್ಷೆ ವಿನಯಾ ಒಕ್ಕುಂದ ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಯುವ ಸಾಹಿತ್ಯ ಪುರಸ್ಕಾರಕ್ಕೆ ಮೂವರನ್ನು ಆಯ್ಕೆ ಮಾಡಿದ್ದೇವೆ. 2023ನೇ ಸಾಲಿನ ಪುರಸ್ಕಾರ ಶಿವಮೊಗ್ಗದ ಕೆ.ಅಕ್ಷತಾ ಅವರಿಗೆ, 2024ನೇ ಸಾಲಿನ ಪುರಸ್ಕಾರ ಮಂಗಳೂರಿನ ವಿಲ್ಸನ್‌ ಕಟೀಲ್‌ ಅವರಿಗೆ ಮತ್ತು 2025ನೇ ಸಾಲಿನ ಪುರಸ್ಕಾರ ರಾಯಚೂರಿನ ಆರಿಫ್‌ ರಾಜಾ ಅವರಿಗೆ ಲಭಿಸಿದೆ. ಈ ಪುರಸ್ಕಾರಗಳು ತಲಾ ₹10 ಸಾವಿರ ನಗದು ಬಹುಮಾನ ಒಳಗೊಂಡಿವೆ’ ಎಂದು ವಿವರಿಸಿದರು.

‘ರಾಜ್ಯಮಟ್ಟದ ಯುವ ಕಥೆ ಸ್ಪರ್ಧೆಯಲ್ಲಿ ಮಣಿಕಂಠ ಗೊದಮನಿ ಪ್ರಥಮ, ಸಂತೋಷ ನಾಯಿಕ ದ್ವಿತೀಯ, ಪ್ರಹ್ಲಾದ ಡಿ.ಎಂ. ತೃತೀಯ, ರಾಜ್ಯಮಟ್ಟದ ಯುವ ಕಾವ್ಯ ಸ್ಪರ್ಧೆಯಲ್ಲಿ ವಿದ್ಯಾ ಪ್ರಥಮ, ಮಂಜುಳಾ ಜಿ.ಎಚ್‌.ದ್ವಿತೀಯ, ಶಿವರಾಜ ಅರಳಿ ತೃತೀಯ ಮತ್ತು ಮುದ್ರಾಡಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಅವರಿಗೂ ಇದೇವೇಳೆ ಬಹುಮಾನ ನೀಡಲಾಗುವುದು’ ಎಂದರು.

ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ, ಸದಸ್ಯರಾದ ಎಚ್‌.ಬಿ.ಕೋಲಕಾರ, ಗೀತಾಂಜಲಿ ಕುರುಡಗಿ ಇದ್ದರು.

ಇದನ್ನೂ ನೋಡಿ:  ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು ಯಾಕೆ? ಬಲಾಢ್ಯ ಜಾತಿಗಳು ವಿರೋಧಿಸಿದ್ದು ಯಾಕೆ? ರಾಜೇಂದ್ರ ಚೆನ್ನಿ ವಿಶ್ಲೇಷಣೆ

Donate Janashakthi Media

Leave a Reply

Your email address will not be published. Required fields are marked *