ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಮೆಗಾ ಟೂರ್ನಮೆಂಟ್ನಲ್ಲಿ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯುವಲ್ಲಿ ಆಸ್ಟ್ರೇಲಿಯಾ ವಿಫಲವಾಗಿದೆ. ವಿಶ್ವ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ಅಂದರೆ, ತುಂಬಾ ಬಲಿಷ್ಠ ತಂಡವೆಂಬ ಹೆಗ್ಗಳಿಕೆ ಇದೆ. ಹೀಗಿರುವಾಗ, ಸೂಪರ್ 8ರ ಹಂತಕ್ಕೆ ಎಂಟ್ರಿ ನೀಡಲಾಗದೇ ಟೂರ್ನಿಯಿಂದಲೇ ಹೊರಬಿದ್ದಿರುವುದು ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದೆ.
ಫೆ.17ರಂದು ಶ್ರೀಲಂಕಾದ ಕೊಲಂಬೊದಲ್ಲಿ ಗ್ರೂಪ್-ಬಿ ಭಾಗವಾಗಿ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದರಿಂದಾಗಿ, ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ನಿಂದ ಹೊರಬಿತ್ತು. ಈ ಹಿಂದೆ ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದು ಆಸ್ಟ್ರೇಲಿಯಾ ತಂಡದ ಅವಕಾಶಗಳ ಮೇಲೆ ಗಂಭೀರ ಪರಿಣಾಮ ಬೀರಿತು. ಮೆಗಾ ಟೂರ್ನಮೆಂಟ್ನಿಂದ ಆಸೀಸ್ ತಂಡ ನಿರ್ಗಮಿಸಿದ್ದಕ್ಕೆ ಮಾಜಿ ನಾಯಕ ರಿಕಿ ಪಾಂಟಿಂಗ್ ಬೇಸರ ಹೊರಹಾಕಿದ್ದು, ಆಸೀಸ್ನಂತಹ ಬಲಿಷ್ಠ ತಂಡ ಸೂಪರ್-8 ಹಂತ ತಲುಪಲು ಸಾಧ್ಯವಾಗದಿರುವುದು ನಿಜಕ್ಕೂ ದುರಾದೃಷ್ಟಕರ ಎಂದಿದ್ದಾರೆ. ಇಂತಹ ವೈಫಲ್ಯಗಳು ನಮಗೆ ಅವಮಾನ ಎಂದು ಪಾಂಟಿಂಗ್ ಹೇಳಿದ್ದಾರೆ.
ಇದನ್ನೂ ಓದಿ: 15 ಮಂದಿ ಡ್ರಗ್ ಪೆಡ್ಲರ್ಗಳ ಬಂಧನ; 21.50 ಕೋಟಿ ಮೌಲ್ಯದ ಗಾಂಜಾ ವಶ
ಆಸ್ಟ್ರೇಲಿಯಾದಂತಹ ಅಗ್ರ ತಂಡವು ಸೂಪರ್ 8ಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗದಿರುವುದು ತುಂಬಾ ದುರಾದೃಷ್ಟಕರ. ಗಾಯಗಳಿಂದಾಗಿ ಅನೇಕ ಆಟಗಾರರು ತಂಡದಿಂದ ಹೊರಗುಳಿದಿರುವುದೇ ಇದಕ್ಕೆ ಪ್ರಮುಖ ಕಾರಣವೆಂದು ನಾನು ಭಾವಿಸುತ್ತೇನೆ. ಕೆಲವು ಆಟಗಾರರು ತಂಡದಿಂದ ಹೊರಗುಳಿದಿದ್ದರೂ ತಂಡವು ಉತ್ತಮ ಕ್ರಿಕೆಟ್ ಆಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಈ ಟೂರ್ನಿಯಲ್ಲಿ ಅವರು ಉತ್ತಮವಾಗಿ ಆಡಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಮತ್ತೆ ಪುಟಿದೇಳಬೇಕು. ಮತ್ತೊಂದು ಐಸಿಸಿ ಟೂರ್ನಿಯಲ್ಲಿ ಆಸೀಸ್ ತಂಡವು ಬಲವಾದ ಪುನರಾಗಮನವನ್ನು ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ರಿಕ್ಕಿ ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಆಸ್ಟ್ರೇಲಿಯಾ ಪಾಲಿಗೆ ಈ ಕಠಿಣ ಹಂತವೂ ತಾತ್ಕಾಲಿಕ ಎಂದು ಕ್ರಿಕೆಟ್ ವಿಶ್ಲೇಷಕರು ನಂಬಿದ್ದಾರೆ. ಏಕೆಂದರೆ, ಆಸ್ಟ್ರೇಲಿಯಾ ಈ ಹಿಂದೆಯೂ ಹಲವು ಕಠಿಣ ಸಮಯಗಳನ್ನು ಜಯಿಸಿದೆ. ಆಸೀಸ್ 1999, 2003 ಮತ್ತು 2007ರ ಏಕದಿನ ವಿಶ್ವಕಪ್ಗಳನ್ನು ಗೆದ್ದಿತು. ಆ ಸಮಯದಲ್ಲಿ, ಆಸ್ಟ್ರೇಲಿಯಾ ತಂಡ ಎದುರಾಳಿ ತಂಡಗಳನ್ನು ನಡುಗಿಸುತ್ತಿತ್ತು. 2009ರ ನಂತರ ಆಸೀಸ್ನ ಪ್ರಾಬಲ್ಯ ಕಡಿಮೆಯಾದರೂ, 2015ರ ಏಕದಿನ ವಿಶ್ವಕಪ್ ಗೆದ್ದು ಮತ್ತೆ ಬಲಿಷ್ಠರಾದರು. ಆ ನಂತರ, ಆಸೀಸ್ ಕಷ್ಟಪಡುತ್ತಿದೆ. 2023ರ ವಿಶ್ವಕಪ್ ಅನ್ನು ಕೂಡ ಆಸ್ಟ್ರೇಲಿಯಾ ಜಯಿಸಿತು. ಇದಾದ ನಂತರ ಆಸಿಸ್ ಪಡೆ ಅವನತಿಯತ್ತ ಸಾಗುತ್ತಿದೆ.
ಒಟ್ಟಾರೆಯಾಗಿ, ಪಾಂಟಿಂಗ್ ಅವರ ಹೇಳಿಕೆಗಳು ಆಸೀಸ್ ಅಭಿಮಾನಿಗಳಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿವೆ. ಆಸ್ಟ್ರೇಲಿಯಾ ತಾತ್ಕಾಲಿಕ ವೈಫಲ್ಯಗಳಿಂದ ಪಾಠ ಕಲಿತು ಬಲವಾಗಿ ಮರಳುತ್ತದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ,
ಇದನ್ನೂ ನೋಡಿ: ಕಾರ್ಮಿಕ–ರೈತ- ಕೂಲಿಕಾರರ ಮಹಾ ಹೋರಾಟ – ದೇಶವ್ಯಾಪಿ ಮುಷ್ಕರಕ್ಕೆ ಭಾರೀ ಸ್ಪಂದನೆ Janashakthi Media
